
ಭಟ್ಕಳ – ನಮ್ಮನ್ನು ಮುಸಲ್ಮಾನರು ಅಥವಾ ಕ್ರೈಸ್ತರು ಸೋಲಿಸಿಲ್ಲ, ನಮ್ಮಲ್ಲಿನ (ಹಿಂದೂಗಳಲ್ಲಿನ) ದ್ರೋಹಿಗಳೇ ನಮ್ಮನ್ನು ಸೋಲಿಸಿದ್ದಾರೆ ಎಂದು ಭಾಜಪದ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರು ಇಲ್ಲಿ ಹೇಳಿಕೆ ನೀಡಿದರು. ಭಟ್ಕಳದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ‘ಹಿಂದೂ ಸಂಗಮ’ ಮೇಳದಲ್ಲಿ ಅವರು ಮಾತನಾಡುತ್ತಿದ್ದರು. ಈ ಮೇಳದಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಉಪಸ್ಥಿತರಿದ್ದರು.
“We were not defeated by Muslims or Christians, but by traitors among Hindus.”
Former BJP MP Anantkumar Hegde at a Hindu Sangam in Bhatkal, Karnataka
He added that Hindutva is the true secularism, defended the RSS, and warned that modern education focused only on money is… pic.twitter.com/yQFT7yAcHZ
— Sanatan Prabhat (@SanatanPrabhat) March 9, 2026
ಹೆಗಡೆ ಅವರು ಮಾತು ಮುಂದುವರಿಸಿ, ”ಜಾತ್ಯಾತೀತತೆ ಎಂದರೆ ಹಿಂದುತ್ವ. ಇತರ ದೇಶಗಳಿಂದ ಬಂದವರಿಗೆ ನಾವು ಮಸೀದಿ ಮತ್ತು ಚರ್ಚ್ ಗಳನ್ನು ನಿರ್ಮಿಸಲು ಅನುಮತಿ ನೀಡಿದ್ದೇವೆ. ಹೀಗಿರುವಾಗ ನಮಗಿಂತ ದೊಡ್ಡ ಜಾತ್ಯತೀತರು ಬೇರೆ ಯಾರು ಇರಲು ಸಾಧ್ಯ? ಧೈರ್ಯವಿದ್ದರೆ ಬಾಂಗ್ಲಾದೇಶಕ್ಕೆ ಹೋಗಿ ಜಾತ್ಯಾತೀತತೆಯ ಪಾಠಗಳನ್ನು ಮಾಡಿ. ಯಾರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಮುಗಿಸುವ ಮಾತನಾಡುತ್ತಾರೋ, ಅವರು ಭ್ರಮೆಯಲ್ಲಿದ್ದಾರೆ. ಎಂದಿಗೂ ಹುಲಿ-ಸಿಂಹಗಳನ್ನಲ್ಲ, ಕೇವಲ ಆಡನ್ನು ಮಾತ್ರ ಬಲಿ ಕೊಡಲಾಗುತ್ತದೆ. ನಮ್ಮ ಸಂಘಟನೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಇಂದಿನ ಶಿಕ್ಷಣವು ಕೇವಲ ಹಣ ಸಂಪಾದನೆಗಷ್ಟೇ ಸೀಮಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನವನ್ನು ಸಂಸ್ಕಾರಯುತವಾಗಿ ರೂಪಿಸಿಕೊಳ್ಳಬೇಕು”, ಎಂದು ಹೇಳಿದರು.
ಈ ಸಮಯದಲ್ಲಿ, ಭಟ್ಕಳ ನಗರದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ