ಇಬ್ಬರು ಮುಸ್ಲಿಮರು ಪರಾರಿ

ಪ್ರಯಾಗ್ರಾಜ್ (ಉತ್ತರ ಪ್ರದೇಶ) – ನವಾಬ್ಗಂಜ್ನಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯನ್ನು ಹಗಲು ಹೊತ್ತಿನಲ್ಲೇ ಅಪಹರಿಸಿದ್ದ ಗುಫ್ರಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅವನ ವಶದಲ್ಲಿದ್ದ ಹುಡುಗಿಯನ್ನು ರಕ್ಷಿಸಲಾಗಿದೆ. ಈ ಘಟನೆಯಲ್ಲಿ ಭಾಗಿಯಾಗಿದ್ದ ಇತರ ಇಬ್ಬರು ಯುವಕರು ಪರಾರಿಯಾಗಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ.
1. ಸಂತ್ರಸ್ತ ಹುಡುಗಿ ಮಾರ್ಚ್ 5 ರಂದು ಮಧ್ಯಾಹ್ನ 2.30 ಕ್ಕೆ ಹೋಳಿ ಆಚರಿಸಲು ಮನೆಯಿಂದ ಹೊರಬಂದಿದ್ದಳು. ಮನೆಯಿಂದ ಸ್ವಲ್ಪ ದೂರದಲ್ಲಿದ್ದಾಗ, ಗುಫ್ರಾನ್ ತನ್ನ ಇಬ್ಬರು ಸ್ನೇಹಿತರಾದ ಹಸನೈನ್ ಮತ್ತು ಶಬಾನ್ ಜೊತೆ ಅಲ್ಲಿಗೆ ಬಂದನು. ಅವರಿಬ್ಬರೂ ದ್ವಿಚಕ್ರ ವಾಹನದಲ್ಲಿದ್ದರು.
2. ಗುಫ್ರಾನ್ ಹುಡುಗಿಯ ಕೈ ಹಿಡಿದು ಬಲವಂತವಾಗಿ ಬೈಕ್ ಮೇಲೆ ಕುರಿಸಿದನು. ಅವಳು ಕಿರುಚಲು ಪ್ರಯತ್ನಿಸಿದಾಗ, ಗುಫ್ರಾನ್ ಅವಳಿಗೆ ಬೆದರಿಕೆ ಹಾಕಿ ಮೌನಗೊಳಿಸಿ ಅಲ್ಲಿಂದ ಅಪಹರಿಸಿಕೊಂಡು ಹೋದನು.
3. ಗ್ರಾಮಸ್ಥರಿಂದ ಈ ಮಾಹಿತಿ ತಿಳಿದ ತಂದೆಯು ಮಗಳನ್ನು ಹುಡುಕಲು ಆರಂಭಿಸಿದರು. ಅವಳ ತಂದೆ ಗುಫ್ರಾನ್ ಮನೆಗೆ ಹೋದಾಗ, ಗುಫ್ರಾನ್ ಚಿಕ್ಕಪ್ಪ ಸುಲ್ತಾನ್ ಎಂಬಾತ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದನು.
4. ಎರಡು ದಿನಗಳ ಹುಡುಕಾಟದ ನಂತರವೂ ಮಗಳು ಸಿಗದಿದ್ದಾಗ, ಮಾರ್ಚ್ 7 ರಂದು ತಂದೆಯು ನವಾಬ್ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ತದನಂತರ ಪೊಲೀಸರು ಗುಫ್ರಾನ್ನನ್ನು ಬಂಧಿಸಿ ಅಪ್ರಾಪ್ತ ಹುಡುಗಿಯನ್ನು ರಕ್ಷಿಸಿದರು.
ಸಂಪಾದಕೀಯ ನಿಲುವುಹಿಂದೆ ಮುಸ್ಲಿಂ ಆಕ್ರಮಣಕಾರರು ಹಿಂದೂ ಮಹಿಳೆಯರನ್ನು ಅಪಹರಿಸಿ ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದರು. ಇಂದು ಕೂಡ ಮತಾಂಧ ಮುಸ್ಲಿಮರು ಇಂತಹದ್ದೇ ಕೃತ್ಯಗಳನ್ನು ಎಸಗುತ್ತಿದ್ದಾರೆ. ಇವರನ್ನು ಹತೋಟಿಗೆ ತರಲು ಪೊಲೀಸರು ಯಾವ ಕ್ರಮ ಕೈಗೊಳ್ಳಲಿದ್ದಾರೆ? |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ