ಬೆಂಗಳೂರಿನಲ್ಲಿ ಹಿಂದೂ ವಿರೋಧಿ ನಾಸಿಫ್ ಅಖ್ತರ್‌ನ ಹಾಸ್ಯ ಕಾರ್ಯಕ್ರಮ ರದ್ದು!

ಹಿಂದೂತ್ವವಾದಿಗಳ ಸಂಘಟಿತ ವಿರೋಧಕ್ಕೆ ಸಿಕ್ಕ ಜಯ

ಕೋರಮಂಗಲದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಪ್ರತಿನಿಧಿಗಳು

ಬೆಂಗಳೂರು – ಮಾರ್ಚ್ 8 ರಂದು ಬೆಂಗಳೂರಿನ ಕೋರಮಂಗಲದ ‘ಮಿನಿಸ್ಟ್ರಿ ಆಫ್ ಕಾಮಿಡಿ’ ಸಭಾಂಗಣದಲ್ಲಿ ನಾಸಿಫ್ ಅಖ್ತರ್ ಅವರ ‘ಕಾಮಿಡಿ ಶೋ’ (ಹಾಸ್ಯ ಕಾರ್ಯಕ್ರಮ) ನಡೆಯಬೇಕಿತ್ತು. ಈತನು ಈ ಹಿಂದೆ ನಡೆದ ತನ್ನ ಕಾರ್ಯಕ್ರಮಗಳಲ್ಲಿ ಭಾರತ, ಹಿಂದೂ ಧರ್ಮ, ಪ್ರಭು ಶ್ರೀರಾಮಚಂದ್ರ ಮತ್ತು ಹಿಂದೂ ರಾಷ್ಟ್ರದ ಬಗ್ಗೆ ಅವಮಾನಕಾರಿ ಹಾಸ್ಯ ಮಾಡಿದ್ದನು.

ಸ್ಥಳೀಯ ಹಿಂದೂತ್ವವಾದಿಗಳ ಗಮನಕ್ಕೆ ಇದು ಬಂದ ತಕ್ಷಣ ಅವರು ಈ ಕಾರ್ಯಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಮೋಹನ್ ಗೌಡ ಅವರು ಪೊಲೀಸ್ ಆಯುಕ್ತರಿಗೆ ಇ-ಮೇಲ್ ಮೂಲಕ ವಿನಂತಿ ಪತ್ರ ಸಲ್ಲಿಸಿದರು. ಈ ಪತ್ರದಲ್ಲಿ ಶ್ರೀ. ಗೌಡ ಅವರು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಈ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು.

ಬೆಂಗಳೂರು ಕೋರಮಂಗಲದ ಪೊಲೀಸ್ ಅಧೀಕ್ಷಕರಿಗೆ ನೀಡಿದ ಮನವಿ

ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಕಾರ್ಯಕರ್ತರು ಕೋರಮಂಗಲ ಪೊಲೀಸ್ ಠಾಣೆಗೆ ಭೇಟಿ ನೀಡಿ ಈ ಬಗ್ಗೆ ದೂರು ದಾಖಲಿಸಿದರು. ಪೊಲೀಸರ ಒತ್ತಡದ ನಂತರ ನಾಸಿಫ್ ಅಖ್ತರ್, ವಿಡಿಯೋ ಒಂದನ್ನು ಬಿಡುಗಡೆ ಮಾಡಿ, ಈ ‘ಕಾಮಿಡಿ ಶೋ’ ಅನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದನು.

ಸಂಪಾದಕೀಯ ನಿಲುವು

  • ಭಾರತ, ಹಿಂದೂ ಧರ್ಮ, ಪ್ರಭು ಶ್ರೀರಾಮಚಂದ್ರ ಮತ್ತು ಹಿಂದೂ ರಾಷ್ಟ್ರದ ಬಗ್ಗೆ ಅಶ್ಲೀಲ ಹಾಸ್ಯ ಮಾಡಿದ ಇತಿಹಾಸ ಈತನದು.
  • ಬೆಂಗಳೂರಿನ ಹಿಂದೂತ್ವವಾದಿಗಳ ಜಾಗರೂಕತೆಗೆ ಅಭಿನಂದನೆಗಳು! ಇಂತಹ ಹಿಂದೂ ವಿರೋಧಿಗಳಿಗೆ ಭಾರತದಾದ್ಯಂತ ಎಲ್ಲಿಯೂ ಕಾರ್ಯಕ್ರಮ ನಡೆಸಲು ಅನುಮತಿ ಸಿಗದಂತೆ ಹಿಂದೂಗಳು ಎಚ್ಚರಿಕೆ ವಹಿಸುವುದು ಅಗತ್ಯ.
  • ಒಂದು ವೇಳೆ ಯಾವುದಾದರೂ ಹಿಂದೂ ಕಲಾಕಾರ, ಮುಸ್ಲಿಂ ಅಥವಾ ಇಸ್ಲಾಂ ಧರ್ಮದ ಬಗ್ಗೆ ಇಂತಹ ಹಾಸ್ಯ ಮಾಡಿದ್ದರೆ, ಈ ಹೊತ್ತಿಗೆ ಆತನ ಶಿರಚ್ಛೇದವಾಗುತ್ತಿತ್ತು ಅಥವಾ ಕೊಲ್ಲುವ ಫತ್ವಾ ಹೊರಡಿಸಲಾಗುತ್ತಿತ್ತು. ಆದರೆ ಹಿಂದೂಗಳು ತಮ್ಮ ಶ್ರದ್ಧಾಕೇಂದ್ರಗಳ ಅಪಮಾನದ ಬಗ್ಗೆ ಸುಮ್ಮನೆ ಕುಳಿತುಕೊಳ್ಳುವುದು ನಾಚಿಕೆಗೇಡಿನ ಸಂಗತಿ!