ನ್ಯೂಯಾರ್ಕ್ ನ್ಯಾಯಾಲಯದಿಂದ ಟ್ರಂಪ್ ಅವರ ಆಮದು ಸುಂಕದ ನೀತಿಯ ಬಗ್ಗೆ ಮಹತ್ವದ ತೀರ್ಪು

ನ್ಯೂಯಾರ್ಕ್ (ಅಮೆರಿಕಾ) – ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಈಗ ನ್ಯೂಯಾರ್ಕ್ನ ಫೆಡರಲ್ ನ್ಯಾಯಾಲಯವೂ ಟ್ರಂಪ್ ಆಡಳಿತಕ್ಕೆ ಭಾರಿ ಹಿನ್ನಡೆ ನೀಡಿದೆ. ಟ್ರಂಪ್ ಸರಕಾರ ಹೇರಿದ್ದ ಆಮದು ಸುಂಕವನ್ನು ಪಾವತಿಸಿದ ಸಂಸ್ಥೆಗಳಿಗೆ ಈಗ ಆ ಮೊತ್ತವನ್ನು ಮರುಪಾವತಿಸಲಾಗುವುದು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.
⚖️ Setback for Trump Administration
In a significant ruling, the U.S. Court of International Trade has stated that companies which paid tariffs that were later struck down by the U.S. Supreme Court must be refunded.
The decision is seen as a legal setback for the Trump… https://t.co/9LrZFyhxr2 pic.twitter.com/UOJGSC82Fp
— Sanatan Prabhat (@SanatanPrabhat) March 5, 2026
೧. ಕಳೆದ ತಿಂಗಳು ಟ್ರಂಪ್ ಅವರ ಅನೇಕ ಸುಂಕಗಳನ್ನು ಅಸಂವಿಧಾನಿಕ ಎಂದು ಘೋಷಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ಲಾಭ ಪಡೆಯಲು ಎಲ್ಲಾ ಆಮದುದಾರ ಸಂಸ್ಥೆಗಳಿಗೆ ಹಕ್ಕಿದೆ ಎಂದು ‘ಯುಎಸ್ ಕೋರ್ಟ್ ಆಫ್ ಇಂಟರ್ನ್ಯಾಷನಲ್ ಟ್ರೇಡ್’ನ ನ್ಯಾಯಾಧೀಶ ರಿಚರ್ಡ್ ಈಟನ್ ಹೇಳಿದ್ದಾರೆ.
೨. ಅಮೆರಿಕದ ಸುಂಕಗಳು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿತ್ತು. ೧೯೭೭ ರ ಅಂತರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯಡಿ ಟ್ರಂಪ್ ಹೇರಿದ ಸುಂಕಗಳು ಸಂವಿಧಾನಬಾಹಿರ ಎಂದು ನ್ಯಾಯಾಲಯ ಹೇಳಿತ್ತು.
೩. ಸುಂಕದ ಮರುಪಾವತಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ತಾವೇ ನಡೆಸುವುದಾಗಿ ನ್ಯಾಯಾಧೀಶ ಈಟನ್ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಮರುಪಾವತಿಯ ಪ್ರಕ್ರಿಯೆಯನ್ನು ಉಲ್ಲೇಖಿಸಿರಲಿಲ್ಲ, ಆದರೆ ಈಗಿನ ತೀರ್ಪಿನಿಂದ ಆ ಪ್ರಕ್ರಿಯೆ ಹೇಗೆ ನಡೆಯಲಿದೆ ಎಂಬುದು ಸ್ಪಷ್ಟವಾಗಿದೆ.
೪. ಸರಕಾರದ ಪರ ವಕೀಲ ರಾಯನ್ ಮೇಜರ್ಸ್ ಮಾತನಾಡಿ, ಸರಕಾರವು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು ಅಥವಾ ಮರುಪಾವತಿ ಪ್ರಕ್ರಿಯೆಯನ್ನು ತಡೆಹಿಡಿಯಲು ಸಮಯ ಕೇಳಬಹುದು ಎಂದು ತಿಳಿಸಿದ್ದಾರೆ.
೫. ಅಮೆರಿಕಾ ಸರಕಾರವು ಈ ಸುಂಕಗಳ ಮೂಲಕ ಇದುವರೆಗೆ ೧೩೦ ಬಿಲಿಯನ್ ಯುಎಸ್ ಡಾಲರ್ (ಸುಮಾರು ೧೦ ಲಕ್ಷ ೭೯ ಸಾವಿರ ಕೋಟಿ ರೂಪಾಯಿ) ಸಂಗ್ರಹಿಸಿತ್ತು. ತಜ್ಞರ ಪ್ರಕಾರ, ಸರಕಾರವು ಒಟ್ಟು ೧೭೫ ಬಿಲಿಯನ್ ಡಾಲರ್ವರೆಗೆ (ಸುಮಾರು ೧೪ ಲಕ್ಷ ೫೨ ಸಾವಿರ ಕೋಟಿ ರೂಪಾಯಿ) ಹಣವನ್ನು ಮರುಪಾವತಿ ಮಾಡಬೇಕಾಗಬಹುದು. ಈ ತೀರ್ಪು ವಿಶೇಷವಾಗಿ ಟೆನೆಸಿಯ ನ್ಯಾಶ್ವಿಲ್ನಲ್ಲಿರುವ ‘ಅಟ್ಮಾಸ್ ಫಿಲ್ಟ್ರೇಶನ್’ ನಂತಹ ಸಂಸ್ಥೆಗಳ ಪ್ರಕರಣಗಳಿಗೆ ಸಂಬಂಧಿಸಿದೆ. ಅವರು ಸುಂಕ ಹಿಂತಿರುಗಿಸುವ ದರ ಕುರಿತು ಮೊಕದ್ದಮೆ ಮಾಡಿದ್ದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation