‘ಐ.ಐ.ಎಮ್. ಲಕ್ನೋ’ ವರದಿ ಪ್ರಸಾರ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಶ್ರೀರಾಮಮಂದಿರದ ಪ್ರಾಣಪ್ರತಿಷ್ಠೆಯ ನಂತರ ಅಯೋಧ್ಯೆಯ ಆರ್ಥಿಕತೆಯಲ್ಲಿ ಐತಿಹಾಸಿಕ ಬೆಳವಣಿಗೆ ಕಂಡುಬರುತ್ತಿದೆ. ‘ಐ.ಐ.ಎಮ್. ಲಕ್ನೋ’ ಎಂಬ ಪ್ರತಿಷ್ಠಿತ ವಿಶ್ವವಿದ್ಯಾಲಯವು ಒಂದು ಅಧ್ಯಯನ ವರದಿಯನ್ನು ಪ್ರಸಾರ ಮಾಡಿದೆ. ‘ದಿ ಎಕನಾಮಿಕ್ ರೆನೆಸಾನ್ಸ್ ಆಫ್ ಅಯೋಧ್ಯಾ, ಇಂಡಿಯಾ – ಎ ಕೇಸ್ ಸ್ಟಡಿ ಆನ್ ರಾಮಮಂದಿರ್’ ಹೆಸರಿನ ಈ ವರದಿಯಲ್ಲಿ ಶ್ರೀರಾಮಮಂದಿರದಿಂದಾಗಿ ಪ್ರವಾಸೋದ್ಯಮ ಆಧಾರಿತ ವಾರ್ಷಿಕ ವಹಿವಾಟು 100 ಬಿಲಿಯನ್ (ಅಬ್ಜ) ರೂಪಾಯಿಗಳ ಹತ್ತಿರ ತಲುಪಲಿದೆ. ಹಾಗೆಯೇ ದೇಶಾದ್ಯಂತದ ಆರ್ಥಿಕ ವಹಿವಾಟು 1 ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟುವ ಸಾಧ್ಯತೆಯಿದೆ. ಮಂದಿರ ನಿರ್ಮಾಣಕ್ಕೂ ಮುನ್ನ ಅಯೋಧ್ಯೆಯ ಗುರುತು ಪ್ರಮುಖವಾಗಿ ಪವಿತ್ರ ತೀರ್ಥಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿತ್ತು; ಆದರೆ ಪ್ರಾಣಪ್ರತಿಷ್ಠೆಯ ನಂತರ ಇಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ಅಭೂತಪೂರ್ವ ಏರಿಕೆ ಕಂಡುಬಂದಿದೆ.
🚩 Historic Impact of Shri Ram Mandir Pran Pratistha 🚩
Report by IIM Lucknow:
– 18 crore devotees
– 1.2 lakh jobs created
– ₹400+ crore in tax revenue
– ₹1 Lakh Crore+ nationwide business turnover 📈 – with Ayodhya at the heart of this transformation.The rise of the Shri… pic.twitter.com/ewrRpzCri0
— Sanatan Prabhat (@SanatanPrabhat) February 19, 2026
ವರದಿಯಲ್ಲಿನ ಪ್ರಮುಖ ಸಾಂಖ್ಯಿಕ ವಿಶ್ಲೇಷಣೆ ಹೀಗಿದೆ…!
1. ಪ್ರವಾಸೋದ್ಯಮ, ಹೂಡಿಕೆ, ಉದ್ಯೋಗ ಮತ್ತು ಆದಾಯದಲ್ಲಿ ದೊಡ್ಡ ಮಟ್ಟದ ಏರಿಕೆ.
2. ಮುಂದಿನ 4-5 ವರ್ಷಗಳಲ್ಲಿ ಪ್ರವಾಸೋದ್ಯಮ, ಸಾರಿಗೆ ಮತ್ತು ಅತಿಥ್ಯ ಕ್ಷೇತ್ರಗಳಲ್ಲಿ ಅಂದಾಜು 1 ಲಕ್ಷ 20 ಸಾವಿರ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯ ಸಾಧ್ಯತೆ.
3. ಪ್ರತಿದಿನ 2 ಲಕ್ಷಕ್ಕೂ ಅಧಿಕ ಭಕ್ತರಿಂದ ದರ್ಶನ, ವರ್ಷಕ್ಕೆ 5-6 ಕೋಟಿ ಭಕ್ತರು ಅಯೋಧ್ಯೆ ಯಾತ್ರೆ ಮಾಡುತ್ತಾರೆ.
4. ಸ್ಥಳೀಯ ಕರಕುಶಲ ವಸ್ತುಗಳು, ಧಾರ್ಮಿಕ ಸ್ಮರಣಿಕೆಗಳು ಮತ್ತು ವಿಗ್ರಹಗಳ ಬೇಡಿಕೆಯಲ್ಲಿ ಭಾರಿ ಏರಿಕೆಯಾಗಿದ್ದರಿಂದ ಕುಶಲಕರ್ಮಿಗಳು ಮತ್ತು ಸ್ಥಳೀಯ ಉತ್ಪಾದಕರಿಗೆ ನೇರ ಲಾಭ.
5. ಅಂದಾಜು 6 ಸಾವಿರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (MSME) ಪ್ರಾರಂಭ.
6. ಅಂಗಡಿಕಾರರು ಮತ್ತು ಬೀದಿ ಬದಿ ವ್ಯಾಪಾರಿಗಳ ದೈನಂದಿನ ಆದಾಯದಲ್ಲಿ ಐದು ಪಟ್ಟು ಹೆಚ್ಚಳ.
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ