ಶ್ರೀರಾಮಮಂದಿರ ಪ್ರಾಣಪ್ರತಿಷ್ಠೆಯ ನಂತರ ದೇಶಾದ್ಯಂತ 1 ಲಕ್ಷ ಕೋಟಿ ರೂಪಾಯಿಗಳ ವಹಿವಾಟು! – IIM Lucknow Ayodhya’s Economic Boom

‘ಐ.ಐ.ಎಮ್. ಲಕ್ನೋ’ ವರದಿ ಪ್ರಸಾರ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಶ್ರೀರಾಮಮಂದಿರದ ಪ್ರಾಣಪ್ರತಿಷ್ಠೆಯ ನಂತರ ಅಯೋಧ್ಯೆಯ ಆರ್ಥಿಕತೆಯಲ್ಲಿ ಐತಿಹಾಸಿಕ ಬೆಳವಣಿಗೆ ಕಂಡುಬರುತ್ತಿದೆ. ‘ಐ.ಐ.ಎಮ್. ಲಕ್ನೋ’ ಎಂಬ ಪ್ರತಿಷ್ಠಿತ ವಿಶ್ವವಿದ್ಯಾಲಯವು ಒಂದು ಅಧ್ಯಯನ ವರದಿಯನ್ನು ಪ್ರಸಾರ ಮಾಡಿದೆ. ‘ದಿ ಎಕನಾಮಿಕ್ ರೆನೆಸಾನ್ಸ್ ಆಫ್ ಅಯೋಧ್ಯಾ, ಇಂಡಿಯಾ – ಎ ಕೇಸ್ ಸ್ಟಡಿ ಆನ್ ರಾಮಮಂದಿರ್’ ಹೆಸರಿನ ಈ ವರದಿಯಲ್ಲಿ ಶ್ರೀರಾಮಮಂದಿರದಿಂದಾಗಿ ಪ್ರವಾಸೋದ್ಯಮ ಆಧಾರಿತ ವಾರ್ಷಿಕ ವಹಿವಾಟು 100 ಬಿಲಿಯನ್ (ಅಬ್ಜ) ರೂಪಾಯಿಗಳ ಹತ್ತಿರ ತಲುಪಲಿದೆ. ಹಾಗೆಯೇ ದೇಶಾದ್ಯಂತದ ಆರ್ಥಿಕ ವಹಿವಾಟು 1 ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟುವ ಸಾಧ್ಯತೆಯಿದೆ. ಮಂದಿರ ನಿರ್ಮಾಣಕ್ಕೂ ಮುನ್ನ ಅಯೋಧ್ಯೆಯ ಗುರುತು ಪ್ರಮುಖವಾಗಿ ಪವಿತ್ರ ತೀರ್ಥಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿತ್ತು; ಆದರೆ ಪ್ರಾಣಪ್ರತಿಷ್ಠೆಯ ನಂತರ ಇಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ಅಭೂತಪೂರ್ವ ಏರಿಕೆ ಕಂಡುಬಂದಿದೆ.

ವರದಿಯಲ್ಲಿನ ಪ್ರಮುಖ ಸಾಂಖ್ಯಿಕ ವಿಶ್ಲೇಷಣೆ ಹೀಗಿದೆ…!

1. ಪ್ರವಾಸೋದ್ಯಮ, ಹೂಡಿಕೆ, ಉದ್ಯೋಗ ಮತ್ತು ಆದಾಯದಲ್ಲಿ ದೊಡ್ಡ ಮಟ್ಟದ ಏರಿಕೆ.

2. ಮುಂದಿನ 4-5 ವರ್ಷಗಳಲ್ಲಿ ಪ್ರವಾಸೋದ್ಯಮ, ಸಾರಿಗೆ ಮತ್ತು ಅತಿಥ್ಯ ಕ್ಷೇತ್ರಗಳಲ್ಲಿ ಅಂದಾಜು 1 ಲಕ್ಷ 20 ಸಾವಿರ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯ ಸಾಧ್ಯತೆ.

3. ಪ್ರತಿದಿನ 2 ಲಕ್ಷಕ್ಕೂ ಅಧಿಕ ಭಕ್ತರಿಂದ ದರ್ಶನ, ವರ್ಷಕ್ಕೆ 5-6 ಕೋಟಿ ಭಕ್ತರು ಅಯೋಧ್ಯೆ ಯಾತ್ರೆ ಮಾಡುತ್ತಾರೆ.

4. ಸ್ಥಳೀಯ ಕರಕುಶಲ ವಸ್ತುಗಳು, ಧಾರ್ಮಿಕ ಸ್ಮರಣಿಕೆಗಳು ಮತ್ತು ವಿಗ್ರಹಗಳ ಬೇಡಿಕೆಯಲ್ಲಿ ಭಾರಿ ಏರಿಕೆಯಾಗಿದ್ದರಿಂದ ಕುಶಲಕರ್ಮಿಗಳು ಮತ್ತು ಸ್ಥಳೀಯ ಉತ್ಪಾದಕರಿಗೆ ನೇರ ಲಾಭ.

5. ಅಂದಾಜು 6 ಸಾವಿರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (MSME) ಪ್ರಾರಂಭ.

6. ಅಂಗಡಿಕಾರರು ಮತ್ತು ಬೀದಿ ಬದಿ ವ್ಯಾಪಾರಿಗಳ ದೈನಂದಿನ ಆದಾಯದಲ್ಲಿ ಐದು ಪಟ್ಟು ಹೆಚ್ಚಳ.

ಸಂಪಾದಕೀಯ ನಿಲುವು

  • ಹಿಂದೂಗಳ ದೇವಾಲಯಗಳು ಮತ್ತು ಆಧ್ಯಾತ್ಮವನ್ನು ದ್ವೇಷಿಸುವ ಹಾಗೂ ಕೇವಲ ಆರ್ಥಿಕ ಸಮೃದ್ಧಿಗಾಗಿ ಪ್ರಯತ್ನಿಸುವಂತೆ ಉಪದೇಶ ನೀಡುವ ಪ್ರಗತಿ(ಅಧೋಗತಿ)ಪರರು ಈ ವರದಿಯ ಆಧಾರದ ಮೇಲೆ ಈಗ ಹಿಂದೂಗಳು ಪ್ರಶ್ನಿಸಬೇಕಿದೆ!
  • ಶ್ರೀರಾಮಮಂದಿರದ ನಿರ್ಮಾಣದಿಂದ ಐತಿಹಾಸಿಕ ಆರ್ಥಿಕ ಬೆಳವಣಿಗೆಯಾಗುತ್ತಿರುವಾಗ ಅಯೋಧ್ಯೆಯ ಸಾತ್ವಿಕತೆ, ಚೈತನ್ಯ, ಧಾರ್ಮಿಕತೆ ಇವುಗಳ ಜೋಪಾಸನೆ ಮತ್ತು ಸಂವರ್ಧನೆಯತ್ತ ಆಡಳಿತ ಮಂಡಳಿಯ ಗಮನವಿದೆಯೇ? ಸಂತರಾಗಿರುವ ಯೋಗಿ ಆದಿತ್ಯನಾಥ್ ಅವರು ಇದರತ್ತಲೂ ಗಮನ ಹರಿಸಬೇಕೆಂದು ಧರ್ಮಪ್ರೇಮಿ ಹಿಂದೂಗಳು ಅಪೇಕ್ಷಿಸುತ್ತಿದ್ದಾರೆ!