
ನವದೆಹಲಿ – ವಿವಾಹದ ಸಮಯದಲ್ಲಿ ಕೇವಲ ಸಪ್ತಪದಿಯ ವಿಧಿ ನೆರವೇರಲಿಲ್ಲ ಎಂಬ ಕಾರಣದಿಂದ ಆ ವಿವಾಹವು ಅಸಿಂಧುವಾಗುವುದಿಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ‘ದಂಪತಿಗಳು ಕೆಲವು ವಿಧಿಗಳನ್ನು ಪೂರೈಸಿ ಒಟ್ಟಾಗಿ ವಾಸಿಸಲು ಆರಂಭಿಸಿದ್ದರೆ ಮತ್ತು ಅವರ ವಿವಾಹದಿಂದ ಒಂದು ಮಗು ಜನಿಸಿದ್ದರೆ, ಆ ವಿವಾಹವನ್ನು ಅಸಿಂಧು ಎಂದು ನಿರ್ಧರಿಸಲು ಸಾಧ್ಯವಿಲ್ಲ’, ಎಂದು ನ್ಯಾಯಾಲಯವು ಅರ್ಜಿಯೊಂದರ ವಿಚಾರಣೆಯ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.
ಯಾವ ಪ್ರಕರಣ ?
ಅರ್ಜಿದಾರರು ಜೂನ್ ೧೯, ೨೦೧೬ ರಂದು ಪರಸ್ಪರ ಹಾರಗಳನ್ನು ಹಾಕಿಕೊಳ್ಳುವ ಮೂಲಕ ವಿವಾಹವಾಗಿದ್ದರು; ಆದರೆ ಈ ಸಮಯದಲ್ಲಿ ಅವರ ವಿವಾಹ ಮಹೋತ್ಸವದಲ್ಲಿ ಸಪ್ತಪದಿ ವಿಧಿ ನಡೆದಿರಲಿಲ್ಲ. ತದನಂತರ ಈ ದಂಪತಿಗಳು ಒಟ್ಟಾಗಿ ವಾಸಿಸತೊಡಗಿದರು. ಅವರ ಸಹಜೀವನದಿಂದ ಅವರಿಗೆ ಒಬ್ಬಳು ಮಗಳೂ ಜನಿಸಿದಳು; ಆದರೆ ಅರ್ಜಿದಾರನು ಅಕ್ಟೋಬರ್ ೨೦೧೬ ರಿಂದ ತಾನು ಪತ್ನಿಯೊಂದಿಗೆ ವಾಸಿಸುತ್ತಿಲ್ಲ ಎಂದು ವಾದ ಮಂಡಿಸಿದನು. ಆ ಇಬ್ಬರ ನಡುವೆ ಸಪ್ತಪದಿಯ ವಿಧಿ ನಡೆಯದ ಕಾರಣ ಆತ ಪತ್ನಿಯೊಂದಿಗೆ ವಾಸಿಸಲು ನಿರಾಕರಿಸಿದನು. ಅರ್ಜಿದಾರನ ಪತ್ನಿಯು, ಅಕ್ಟೋಬರ್ ೨೦೧೭ ರಲ್ಲಿ ತನ್ನನ್ನು ಅತ್ತೆಮನೆಯಿಂದ ಹೊರಹಾಕಲಾಯಿತು ಎಂದು ಪ್ರತಿಪಾದಿಸಿದಳು. ಅಲ್ಲದೆ, ವಿವಾಹ ಮಹೋತ್ಸವದಲ್ಲಿ ಸಪ್ತಪದಿ ಕಾರ್ಯಕ್ರಮ ನಡೆದಿದೆ ಎಂದೂ ಪತ್ನಿಯು ಪ್ರತಿಪಾದಿಸಿದಳು; ಆದರೆ ಈ ಸಮಾರಂಭದ ಛಾಯಾಚಿತ್ರಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಅವಳು ವಿಫಲಳಾದಳು.
ಹಿಂದೂ ವಿವಾಹ ಕಾಯ್ದೆ ಏನಿದೆ ?
ಉಚ್ಚ ನ್ಯಾಯಾಲಯವು ಹಿಂದೂ ವಿವಾಹ ಕಾಯ್ದೆ ೧೯೫೫ ರ ಕಲಂ ೭ ರ ಅಡಿಯಲ್ಲಿನ ಕಾನೂನಿನ ನಿಬಂಧನೆಗಳನ್ನು ವಿಶ್ಲೇಷಿಸಿತು. ಕಲಂ ೭ ರ ಅಡಿಯಲ್ಲಿನ ಉಪಕಲಂ ೧ ರ ಪ್ರಕಾರ ಯಾವುದೇ ವಿಶಿಷ್ಟ ಸಮಾರಂಭದ ಬಂಧನವಿಲ್ಲದೆ ಯಾವುದೇ ಪಕ್ಷದ ರೀತಿರಿವಾಜಗಳ ಪ್ರಕಾರ ಮತ್ತು ಸಮಾರಂಭಗಳ ಪ್ರಕಾರ ವಿವಾಹವಾಗುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ.ಹಾಗೆಯೇ ಉಪಕಲಂ ೨ ರ ಪ್ರಕಾರ ಮಾನ್ಯ ವಿವಾಹವನ್ನು ಸ್ಥಾಪಿಸಲು ಪ್ರತಿಯೊಂದು ಬಾರಿಯೂ ಸಪ್ತಪದಿ ಮಾಡುವುದು ಅನಿವಾರ್ಯವಲ್ಲ. ಅಂದರೆ ಸಪ್ತಪದಿಯು ಸಾಂಪ್ರದಾಯಿಕ ಸಂಸ್ಕಾರಗಳ ಒಂದು ಭಾಗವಾಗಿದೆ; ಆದರೆ ಈ ವಿಧಿಯು ಕಡ್ಡಾಯವಲ್ಲ ಎಂದು ನಮೂದಿಸಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ