
ನವದೆಹಲಿ – ವಿವಾಹದ ಸಮಯದಲ್ಲಿ ಕೇವಲ ಸಪ್ತಪದಿಯ ವಿಧಿ ನೆರವೇರಲಿಲ್ಲ ಎಂಬ ಕಾರಣದಿಂದ ಆ ವಿವಾಹವು ಅಸಿಂಧುವಾಗುವುದಿಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ‘ದಂಪತಿಗಳು ಕೆಲವು ವಿಧಿಗಳನ್ನು ಪೂರೈಸಿ ಒಟ್ಟಾಗಿ ವಾಸಿಸಲು ಆರಂಭಿಸಿದ್ದರೆ ಮತ್ತು ಅವರ ವಿವಾಹದಿಂದ ಒಂದು ಮಗು ಜನಿಸಿದ್ದರೆ, ಆ ವಿವಾಹವನ್ನು ಅಸಿಂಧು ಎಂದು ನಿರ್ಧರಿಸಲು ಸಾಧ್ಯವಿಲ್ಲ’, ಎಂದು ನ್ಯಾಯಾಲಯವು ಅರ್ಜಿಯೊಂದರ ವಿಚಾರಣೆಯ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.
ಯಾವ ಪ್ರಕರಣ ?
ಅರ್ಜಿದಾರರು ಜೂನ್ ೧೯, ೨೦೧೬ ರಂದು ಪರಸ್ಪರ ಹಾರಗಳನ್ನು ಹಾಕಿಕೊಳ್ಳುವ ಮೂಲಕ ವಿವಾಹವಾಗಿದ್ದರು; ಆದರೆ ಈ ಸಮಯದಲ್ಲಿ ಅವರ ವಿವಾಹ ಮಹೋತ್ಸವದಲ್ಲಿ ಸಪ್ತಪದಿ ವಿಧಿ ನಡೆದಿರಲಿಲ್ಲ. ತದನಂತರ ಈ ದಂಪತಿಗಳು ಒಟ್ಟಾಗಿ ವಾಸಿಸತೊಡಗಿದರು. ಅವರ ಸಹಜೀವನದಿಂದ ಅವರಿಗೆ ಒಬ್ಬಳು ಮಗಳೂ ಜನಿಸಿದಳು; ಆದರೆ ಅರ್ಜಿದಾರನು ಅಕ್ಟೋಬರ್ ೨೦೧೬ ರಿಂದ ತಾನು ಪತ್ನಿಯೊಂದಿಗೆ ವಾಸಿಸುತ್ತಿಲ್ಲ ಎಂದು ವಾದ ಮಂಡಿಸಿದನು. ಆ ಇಬ್ಬರ ನಡುವೆ ಸಪ್ತಪದಿಯ ವಿಧಿ ನಡೆಯದ ಕಾರಣ ಆತ ಪತ್ನಿಯೊಂದಿಗೆ ವಾಸಿಸಲು ನಿರಾಕರಿಸಿದನು. ಅರ್ಜಿದಾರನ ಪತ್ನಿಯು, ಅಕ್ಟೋಬರ್ ೨೦೧೭ ರಲ್ಲಿ ತನ್ನನ್ನು ಅತ್ತೆಮನೆಯಿಂದ ಹೊರಹಾಕಲಾಯಿತು ಎಂದು ಪ್ರತಿಪಾದಿಸಿದಳು. ಅಲ್ಲದೆ, ವಿವಾಹ ಮಹೋತ್ಸವದಲ್ಲಿ ಸಪ್ತಪದಿ ಕಾರ್ಯಕ್ರಮ ನಡೆದಿದೆ ಎಂದೂ ಪತ್ನಿಯು ಪ್ರತಿಪಾದಿಸಿದಳು; ಆದರೆ ಈ ಸಮಾರಂಭದ ಛಾಯಾಚಿತ್ರಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಅವಳು ವಿಫಲಳಾದಳು.
ಹಿಂದೂ ವಿವಾಹ ಕಾಯ್ದೆ ಏನಿದೆ ?
ಉಚ್ಚ ನ್ಯಾಯಾಲಯವು ಹಿಂದೂ ವಿವಾಹ ಕಾಯ್ದೆ ೧೯೫೫ ರ ಕಲಂ ೭ ರ ಅಡಿಯಲ್ಲಿನ ಕಾನೂನಿನ ನಿಬಂಧನೆಗಳನ್ನು ವಿಶ್ಲೇಷಿಸಿತು. ಕಲಂ ೭ ರ ಅಡಿಯಲ್ಲಿನ ಉಪಕಲಂ ೧ ರ ಪ್ರಕಾರ ಯಾವುದೇ ವಿಶಿಷ್ಟ ಸಮಾರಂಭದ ಬಂಧನವಿಲ್ಲದೆ ಯಾವುದೇ ಪಕ್ಷದ ರೀತಿರಿವಾಜಗಳ ಪ್ರಕಾರ ಮತ್ತು ಸಮಾರಂಭಗಳ ಪ್ರಕಾರ ವಿವಾಹವಾಗುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ.ಹಾಗೆಯೇ ಉಪಕಲಂ ೨ ರ ಪ್ರಕಾರ ಮಾನ್ಯ ವಿವಾಹವನ್ನು ಸ್ಥಾಪಿಸಲು ಪ್ರತಿಯೊಂದು ಬಾರಿಯೂ ಸಪ್ತಪದಿ ಮಾಡುವುದು ಅನಿವಾರ್ಯವಲ್ಲ. ಅಂದರೆ ಸಪ್ತಪದಿಯು ಸಾಂಪ್ರದಾಯಿಕ ಸಂಸ್ಕಾರಗಳ ಒಂದು ಭಾಗವಾಗಿದೆ; ಆದರೆ ಈ ವಿಧಿಯು ಕಡ್ಡಾಯವಲ್ಲ ಎಂದು ನಮೂದಿಸಿದೆ.
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad