|

ಪುಣೆ – ಇಲ್ಲಿನ ಪೈಗಂಬರ್ ನದಾಫ್ ಎಂಬಾತನು ಕ್ರೈಸ್ತ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ, ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಒತ್ತಾಯಿಸಿದ್ದಾನೆ. ಮದುವೆಯ ಆಮಿಷವೊಡ್ಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಅಷ್ಟೇ ಅಲ್ಲದೆ, ಮದುವೆಯ ಬಗ್ಗೆ ವಿಚಾರಿಸಲು ಹೋದಾಗ ಆಕೆಯ ಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ಸುಡಲು ಪೈಗಂಬರ್ ಮತ್ತು ಆತನ ಕುಟುಂಬಸ್ಥರು ಪ್ರಯತ್ನಿಸಿದ್ದಾರೆ. ಈ ಪ್ರಕರಣದಲ್ಲಿ ದೂರು ದಾಖಲಿಸಿಕೊಳ್ಳಲು ಪೊಲೀಸರು ಆರಂಭದಲ್ಲಿ ಮೀನಾಮೇಷ ಮಾಡಿದರು.
Love Jihad in Kondhwa, Pune. 📉
An attempt was made to set a Christian girl on fire for resisting forced conversion. 🔥✝️
🚨 FIR registered only after Hindu organisations intervened.
Accused: Paigambar Nadaf
❓ Why do police act only after protests?pic.twitter.com/pEhk4bERjs
— Sanatan Prabhat (@SanatanPrabhat) February 10, 2026
೧. ೩ ವರ್ಷಗಳ ಹಿಂದೆ ಯುವತಿಗೆ ‘ಇನ್ಸ್ಟಾಗ್ರಾಮ್’ ಮೂಲಕ ಪೈಗಂಬರ್ ನದಾಫ್ ಎಂಬ ಮತಾಂಧನ ಪರಿಚಯವಾಗಿತ್ತು. ಆತ ಮದುವೆಯ ಆಮಿಷವೊಡ್ಡಿ ಆಕೆಯ ವಿಶ್ವಾಸ ಗಳಿಸಿ ಹಲವು ಬಾರಿ ಅತ್ಯಾಚಾರವೆಸಗಿದ್ದನು. ನಂತರ ಮತಾಂತರಕ್ಕಾಗಿ ಒತ್ತಡ ಹೇರಲಾರಂಭಿಸಿದನು.
೨. ‘ನೀನು ಮದುವೆಯಾಗಬೇಕೆಂದರೆ ಇಸ್ಲಾಂ ಧರ್ಮವನ್ನೇ ಸ್ವೀಕರಿಸಬೇಕು, ಬುರ್ಖಾ ಧರಿಸಬೇಕು ಮತ್ತು ನಮ್ಮ ಧಾರ್ಮಿಕ ಪದ್ಧತಿಗಳನ್ನೇ ಅನುಸರಿಸಬೇಕು’ ಎಂದು ಆಕೆಗೆ ಒತ್ತಾಯಿಸುತ್ತಿದ್ದನು. ಆಕೆ ಬುರ್ಖಾ ಧರಿಸದಿದ್ದಾಗ ಆಕೆಗೆ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು.
೩. ಕೆಲವು ದಿನಗಳ ಹಿಂದೆ ಸಂತ್ರಸ್ತೆಯು ಮದುವೆಯ ಬಗ್ಗೆ ಚರ್ಚಿಸಲು ಆರೋಪಿಯ ಮನೆಗೆ ಹೋದಾಗ, ಪೈಗಂಬರ್ ನದಾಫ್ ಮತ್ತು ಆತನ ಮನೆಯವರು ಆಕೆಯನ್ನು ಕೊಲ್ಲಲು ಯತ್ನಿಸಿದರು. ‘ನಾನು ನಿನ್ನನ್ನು ಬಿಟ್ಟುಬಿಡುತ್ತೇನೆ, ನಿನಗೆ ಬೇಕಾದುದನ್ನು ಮಾಡಿಕೊ’ ಎಂದು ಬೆದರಿಸುತ್ತಾ ಆಕೆಯ ಕಣ್ಣುಗಳಿಗೆ ಮತ್ತು ಮೈಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ಸುಡಲು ಯತ್ನಿಸಿದನು. ಸಂತ್ರಸ್ತೆಯು ಸಮಯಪ್ರಜ್ಞೆಯಿಂದ ತನ್ನನ್ನು ತಾನು ರಕ್ಷಿಸಿಕೊಂಡಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.
ಪೊಲೀಸರ ಉದಾಸೀನತೆ!
ಸಂತ್ರಸ್ತೆಯು ಈ ಹಿಂದೆ ಹಲವು ಬಾರಿ ಪೊಲೀಸ್ ಠಾಣೆಗೆ ಹೋಗಿದ್ದರೂ; ಆರಂಭದಲ್ಲಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಆಕೆ ಗಂಭೀರ ಆರೋಪ ಮಾಡಿದ್ದಾಳೆ. ಅಂತಿಮವಾಗಿ ಹಿಂದೂ ಸಂಘಟನೆಗಳು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ನಂತರವೇ ಆರೋಪಿ ಪೈಗಂಬರ್ ನದಾಫ್ ವಿರುದ್ಧ ಕೊಂಡವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಪಾದಕೀಯ ನಿಲುವು
|
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ