ಕೊಂಡವಾದಲ್ಲಿ ಕ್ರೈಸ್ತ ಯುವತಿಯನ್ನು ಮತಾಂತರಕ್ಕಾಗಿ ಒತ್ತಡ ಹೇರಿ ಜೀವಂತವಾಗಿ ಸುಡಲು ಯತ್ನಿಸಿದ ಮತಾಂಧರು ! – Pune Love Jihad

  • ಪುಣೆಯಲ್ಲಿ ‘ಲವ್ ಜಿಹಾದ್’ ಪ್ರಕರಣ

  • ಹಿಂದೂ ಸಂಘಟನೆಗಳ ಮಧ್ಯಸ್ಥಿಕೆಯ ನಂತರವಷ್ಟೇ ಪ್ರಕರಣ ದಾಖಲು

ಪುಣೆ – ಇಲ್ಲಿನ ಪೈಗಂಬರ್ ನದಾಫ್ ಎಂಬಾತನು ಕ್ರೈಸ್ತ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ, ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಒತ್ತಾಯಿಸಿದ್ದಾನೆ. ಮದುವೆಯ ಆಮಿಷವೊಡ್ಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಅಷ್ಟೇ ಅಲ್ಲದೆ, ಮದುವೆಯ ಬಗ್ಗೆ ವಿಚಾರಿಸಲು ಹೋದಾಗ ಆಕೆಯ ಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ಸುಡಲು ಪೈಗಂಬರ್ ಮತ್ತು ಆತನ ಕುಟುಂಬಸ್ಥರು ಪ್ರಯತ್ನಿಸಿದ್ದಾರೆ. ಈ ಪ್ರಕರಣದಲ್ಲಿ ದೂರು ದಾಖಲಿಸಿಕೊಳ್ಳಲು ಪೊಲೀಸರು ಆರಂಭದಲ್ಲಿ ಮೀನಾಮೇಷ ಮಾಡಿದರು.

೧. ೩ ವರ್ಷಗಳ ಹಿಂದೆ ಯುವತಿಗೆ ‘ಇನ್‌ಸ್ಟಾಗ್ರಾಮ್’ ಮೂಲಕ ಪೈಗಂಬರ್ ನದಾಫ್ ಎಂಬ ಮತಾಂಧನ ಪರಿಚಯವಾಗಿತ್ತು. ಆತ ಮದುವೆಯ ಆಮಿಷವೊಡ್ಡಿ ಆಕೆಯ ವಿಶ್ವಾಸ ಗಳಿಸಿ ಹಲವು ಬಾರಿ ಅತ್ಯಾಚಾರವೆಸಗಿದ್ದನು. ನಂತರ ಮತಾಂತರಕ್ಕಾಗಿ ಒತ್ತಡ ಹೇರಲಾರಂಭಿಸಿದನು.

೨. ‘ನೀನು ಮದುವೆಯಾಗಬೇಕೆಂದರೆ ಇಸ್ಲಾಂ ಧರ್ಮವನ್ನೇ ಸ್ವೀಕರಿಸಬೇಕು, ಬುರ್ಖಾ ಧರಿಸಬೇಕು ಮತ್ತು ನಮ್ಮ ಧಾರ್ಮಿಕ ಪದ್ಧತಿಗಳನ್ನೇ ಅನುಸರಿಸಬೇಕು’ ಎಂದು ಆಕೆಗೆ ಒತ್ತಾಯಿಸುತ್ತಿದ್ದನು. ಆಕೆ ಬುರ್ಖಾ ಧರಿಸದಿದ್ದಾಗ ಆಕೆಗೆ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು.

೩. ಕೆಲವು ದಿನಗಳ ಹಿಂದೆ ಸಂತ್ರಸ್ತೆಯು ಮದುವೆಯ ಬಗ್ಗೆ ಚರ್ಚಿಸಲು ಆರೋಪಿಯ ಮನೆಗೆ ಹೋದಾಗ, ಪೈಗಂಬರ್ ನದಾಫ್ ಮತ್ತು ಆತನ ಮನೆಯವರು ಆಕೆಯನ್ನು ಕೊಲ್ಲಲು ಯತ್ನಿಸಿದರು. ‘ನಾನು ನಿನ್ನನ್ನು ಬಿಟ್ಟುಬಿಡುತ್ತೇನೆ, ನಿನಗೆ ಬೇಕಾದುದನ್ನು ಮಾಡಿಕೊ’ ಎಂದು ಬೆದರಿಸುತ್ತಾ ಆಕೆಯ ಕಣ್ಣುಗಳಿಗೆ ಮತ್ತು ಮೈಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ಸುಡಲು ಯತ್ನಿಸಿದನು. ಸಂತ್ರಸ್ತೆಯು ಸಮಯಪ್ರಜ್ಞೆಯಿಂದ ತನ್ನನ್ನು ತಾನು ರಕ್ಷಿಸಿಕೊಂಡಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.

ಪೊಲೀಸರ ಉದಾಸೀನತೆ!

ಸಂತ್ರಸ್ತೆಯು ಈ ಹಿಂದೆ ಹಲವು ಬಾರಿ ಪೊಲೀಸ್ ಠಾಣೆಗೆ ಹೋಗಿದ್ದರೂ; ಆರಂಭದಲ್ಲಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಆಕೆ ಗಂಭೀರ ಆರೋಪ ಮಾಡಿದ್ದಾಳೆ. ಅಂತಿಮವಾಗಿ ಹಿಂದೂ ಸಂಘಟನೆಗಳು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ನಂತರವೇ ಆರೋಪಿ ಪೈಗಂಬರ್ ನದಾಫ್ ವಿರುದ್ಧ ಕೊಂಡವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಪಾದಕೀಯ ನಿಲುವು

  • ಈ ಘಟನೆಯಿಂದ ಜಿಹಾದಿ ಮಾನಸಿಕತೆಯ ಅತ್ಯಂತ ಕ್ರೂರ ಮುಖ ಮತ್ತೊಮ್ಮೆ ಅನಾವರಣಗೊಂಡಿದೆ. ‘ಲವ್ ಜಿಹಾದ್’ ಎನ್ನುವ ವಾಸ್ತವವನ್ನು ನಿರಾಕರಿಸುವ ಜಾತ್ಯತೀತವಾದಿಗಳಿಗೆ ಈಗಲಾದರೂ ಈ ಸಂತ್ರಸ್ತೆಯ ಆಕ್ರಂದನ ಕೇಳಿಸುವುದೇ? ಈಗಲಾದರೂ ಸರಕಾರವು ‘ಲವ್ ಜಿಹಾದ್ ವಿರೋಧಿ ಕಾಯ್ದೆ’ ಜಾರಿಗೆ ತರುವ ಮೂಲಕ ಜಿಹಾದಿ ಪ್ರವೃತ್ತಿಗಳನ್ನು ಹತ್ತಿಕ್ಕಲು ಆದ್ಯತೆ ನೀಡುತ್ತದೆಯೇ?
     
  • ಹಿಂದುತ್ವನಿಷ್ಠ ಸಂಘಟನೆಗಳು ರಸ್ತೆಗೆ ಇಳಿಯುವವರೆಗೂ ಪೊಲೀಸರಿಗೆ ಎಚ್ಚರವಾಗುವುದಿಲ್ಲವೇ? ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಪೊಲೀಸರ ಈ ನಿರ್ಲಕ್ಷ್ಯವು ಅಪರಾಧಿಗಳ ಮನೋಬಲವನ್ನು ಹೆಚ್ಚಿಸುತ್ತದೆ!