​ಪಂಜಾಬ್‌ನಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ!

ಜಾಲಂಧರ್ (ಪಂಜಾಬ್) – ಆಮ್ ಆದ್ಮಿ ಪಕ್ಷದ (‘ಆಪ್’ ನ) ನಾಯಕ ಲಕ್ಕಿ ಒಬೆರಾಯ್ (೫೨ ವರ್ಷ) ಅವರನ್ನು ಫೆಬ್ರವರಿ ೬ ರಂದು ಬೆಳಿಗ್ಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಒಬೆರಾಯ್ ಅವರು ಮಾಡೆಲ್ ಟೌನ್ ಪ್ರದೇಶದ ಗುರುದ್ವಾರಕ್ಕೆ ದರ್ಶನಕ್ಕಾಗಿ ಬಂದಿದ್ದರು. ಅವರು ಅಲ್ಲಿಂದ ಹೊರಬಂದು ತಮ್ಮ ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಾಗ, ದುಷ್ಕರ್ಮಿಗಳು ಅವರ ಮೇಲೆ ಯದ್ವಾತದ್ವ ಗುಂಡಿನ ದಾಳಿ ನಡೆಸಿದರು. ಕುಟುಂಬಸ್ಥರು ಅವರನ್ನು ಗಂಭೀರ ಸ್ಥಿತಿಯಲ್ಲಿ ಮಾಡೆಲ್ ಟೌನ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಕುಟುಂಬದವರಿಗೆ ಅದರ ಮೇಲೆ ನಂಬಿಕೆ ಇಡದೇ, ಅವರನ್ನು ನಗರದ ಶ್ರೀರಾಮ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಯೂ ಅವರು ಮೃತಪಟ್ಟಿರುವುದನ್ನು ಖಚಿತಪಡಿಸಲಾಯಿತು.

​ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಜಯಂತ್ ಪರಿ ಮಾತನಾಡಿ, ಪೊಲೀಸರು ಸಂಪೂರ್ಣ ಪ್ರದೇಶದಲ್ಲಿ ರಸ್ತೆ ತಡೆ ಹಾಗೂ ಸಂಚಾರ ನಿರ್ಬಂಧಗಳನ್ನು ಮಾಡಿದ್ದಾರೆ. ‘ಸಿಸಿಟಿವಿ’ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ದಾಳಿಕೋರರನ್ನು ಬಂಧಿಸಲು ವಿವಿಧ ಕಡೆಗಳಲ್ಲಿ ಪೋಲೀಸ್ ವಾಹನಗಳನ್ನು ನಿಯೋಜಿಸಲಾಗಿದೆ. ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಮತ್ತು ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಆಡಳಿತ ಪಕ್ಷದ ನಾಯಕರೇ ಅಲ್ಲಿ ಸುರಕ್ಷಿತವಾಗಿಲ್ಲದಿರುವಾಗ, ಅಲ್ಲಿನ ಸಾಮಾನ್ಯ ಜನರ ರಕ್ಷಣೆ ಹೇಗೆ ಇರುವುದು, ಇದರ ವಿಚಾರ ಮಾಡದಿರುವದೇ ಒಳ್ಳೆಯದು!