ಉಜ್ಜಯಿನಿಯ ತರಾನಾದಲ್ಲಿ ಮುಸ್ಲಿಮರಿಂದ ವಿಹಿಂಪ ಪ್ರಚಾರಕರ ಮೇಲೆ ಮಾರಣಾಂತಿಕ ಹಲ್ಲೆ- Ujjain Violence VHP Hindu vs Muslim

  • ಹಲ್ಲೆಯ ಘಟನೆಯ ನಂತರ ಭುಗಿಲೆದ್ದ ಹಿಂಸಾಚಾರದಲ್ಲಿ ಹಲವಾರು ಬಸ್ಸುಗಳ ಧ್ವಂಸ ಮತ್ತು ಬೆಂಕಿಗಾಹೂತಿ

  • ನಮಾಜ್ ನಂತರ ‘ಅಲ್ಲಾಹು ಅಕ್ಬರ್’ ಘೋಷಣೆಗಳನ್ನು ಕೂಗುತ್ತಾ ಮುಸ್ಲಿಮರಿಂದ ಮತ್ತೆ ಹಿಂಸಾಚಾರ

ಉಜ್ಜಯಿನಿ (ಮಧ್ಯಪ್ರದೇಶ) – ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ತರಾನಾ ನಗರದಲ್ಲಿ ಜನವರಿ 22 ರ ಸಂಜೆ ಸುಮಾರು 7.30 ಗಂಟೆಗೆ ಮತಾಂಧ ಮುಸ್ಲಿಮರು ವಿಶ್ವ ಹಿಂದೂ ಪರಿಷತ್ತಿನ ಪ್ರಚಾರಕರ ಮೇಲೆ ದಾಳಿ ಮಾಡಿದ ನಂತರ ಹಿಂಸಾಚಾರ ನಡೆಯಿತು. ಇದರಲ್ಲಿ 11 ಬಸ್ಸುಗಳನ್ನು ಧ್ವಂಸಗೊಳಿಸಲಾಗಿದೆ. ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಇದರಿಂದ ಹಲವು ಮನೆಗಳ ಕಿಟಕಿ ಗಾಜುಗಳು ಪುಡಿಯಾಗಿವೆ. ಮುಸ್ಲಿಮರ ಕೈಯಲ್ಲಿ ಹರಿತವಾದ ಆಯುಧಗಳಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದರ ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರೂ, ಅಲ್ಲಿ ಹೆಚ್ಚಿನ ಉದ್ವಿಗ್ನತೆ ಇತ್ತು. ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು; ಆದರೆ ಇದರ ಹೊರತಾಗಿಯೂ ಮರುದಿನ, ಅಂದರೆ ಶುಕ್ರವಾರ ಜನವರಿ 23 ರಂದು ಮಧ್ಯಾಹ್ನದ ನಮಾಜ್ ನಂತರ ಮುಸ್ಲಿಮರು ‘ಅಲ್ಲಾಹು ಅಕ್ಬರ್’ ಘೋಷಣೆಗಳನ್ನು ಕೂಗುತ್ತಾ ಮತ್ತೆ ಹಿಂಸಾಚಾರ ನಡೆಸಿ ಕಲ್ಲು ತೂರಾಟ ನಡೆಸಿದರು. ಅಲ್ಲದೆ ಹಲವು ಬಸ್ಸುಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದರು. ಈ ಘಟನೆಯ ನಂತರ ಸ್ಥಳೀಯ ಹಿಂದೂ ಮಹಿಳೆಯರು ರಕ್ಷಣೆಗಾಗಿ ಕೈಯಲ್ಲಿ ಲಾಠಿ ಹಿಡಿದು ಹೊರಬಂದರು. ಕಳೆದ ಕೆಲವು ತಿಂಗಳುಗಳಿಂದ ಇಲ್ಲಿ ವಿವಾದ ನಡೆಯುತ್ತಿತ್ತು. ಅದರ ಪರಿಣಾಮವಾಗಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಜನವರಿ 22 ರಂದು ವಿಶ್ವ ಹಿಂದೂ ಪರಿಷತ್ತಿನ ಪ್ರಚಾರಕರಾದ ಸೋಹೈಲ್ ಠಾಕೂರ್ ಮತ್ತು ಅವರ ಸಹೋದ್ಯೋಗಿ ರಜತ್ ಠಾಕೂರ್ ಅವರ ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ್ದರು. ಇದರಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನೂ ಮೊದಲು ತರಾನಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಪ್ರಾಥಮಿಕ ಚಿಕಿತ್ಸೆಯ ನಂತರ ಅವರ ಸ್ಥಿತಿಯನ್ನು ನೋಡಿ ಉಜ್ಜಯಿನಿಯ ಆಸ್ಪತ್ರೆಗೆ ದಾಖಲಿಸಲಾಯಿತು.

ಹಿಂದೂ ಸಂಘಟನೆಗಳಿಂದ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ

ಹಲ್ಲೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಯನ್ನು ಗಮನಿಸಿದ ಪೊಲೀಸರು ಹೆಚ್ಚಿನ ಪಡೆಗಳನ್ನು ಕರೆಯಿಸಿಕೊಂಡು ಪ್ರದೇಶದಲ್ಲಿ ಗಸ್ತನ್ನು ಹೆಚ್ಚಿಸಿದರು.

6 ಜನರ ವಿರುದ್ಧ ಪ್ರಕರಣ ದಾಖಲು

ಈ ಪ್ರಕರಣದ ಕುರಿತು ಪೊಲೀಸ್ ಅಧೀಕ್ಷಕ ಪ್ರದೀಪ್ ಶರ್ಮಾ ಅವರು ಜನವರಿ 22 ರ ರಾತ್ರಿ ಮಾತನಾಡಿ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಪ್ರದೇಶದಲ್ಲಿ ಶಾಂತಿ ನೆಲೆಸಿದೆ. ಉಜ್ಜಯಿನಿ, ಮಕಡೋನ್ ಸೇರಿದಂತೆ ಇತರ ಸ್ಥಳಗಳಿಂದ ತರಾನಾಗೆ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.

ಸಂಪಾದಕೀಯ ನಿಲುವು

  • ಮಧ್ಯಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಭಾಜಪ ಸರಕಾರವಿದ್ದರೂ ಇಂತಹ ಸ್ಥಿತಿ ಹಿಂದೂಗಳಿಗೆ ಅಪೇಕ್ಷಿತವಲ್ಲ! ಕಾಶ್ಮೀರ, ಬಂಗಾಳ, ಕೇರಳದಲ್ಲಿ ನಡೆಯುತ್ತಿರುವುದು ಮಧ್ಯಪ್ರದೇಶದಲ್ಲೂ ನಡೆಯುತ್ತಿದೆ ಎಂಬುದು ಹಿಂದೂಗಳ ನಿರೀಕ್ಷೆಯಾಗಿರಲಿಲ್ಲ!
  • ಈ ಘಟನೆಯಿಂದ ಹಿಂದೂಗಳು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುವುದು ಎಷ್ಟು ಅವಶ್ಯಕವಾಗಿದೆ ಎಂಬುದನ್ನು ಗಮನಿಸಬೇಕು. ‘ಪೊಲೀಸರು, ಸರಕಾರ ನಮ್ಮನ್ನು ರಕ್ಷಿಸುತ್ತದೆ’ ಎಂಬ ಭ್ರಮೆಯಲ್ಲಿ ಇನ್ನು ಮುಂದೆ ಹಿಂದೂಗಳು ಇರಬಾರದು!