ಬಾಂಗ್ಲಾದೇಶದಲ್ಲಿ ಇಬ್ಬರು ಹಿಂದೂ ವಿದ್ಯಾರ್ಥಿಗಳ ಸಂಶಯಾಸ್ಪದ ಸಾವು

ಢಾಕಾ (ಬಾಂಗ್ಲಾದೇಶ) – ಇಲ್ಲಿನ ಜಗನ್ನಾಥ ವಿಶ್ವವಿದ್ಯಾಲಯದ ಹಿಂದೂ ವಿದ್ಯಾರ್ಥಿ ಆಕಾಶ ಸರಕಾರ ಎಂಬಾತನ ಶವವು ಸಂಶಯಾಸ್ಪದ ಸ್ಥಿತಿಯಲ್ಲಿ ಅವನ ಕೋಣೆಯಲ್ಲಿ ಪತ್ತೆಯಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆಯ ಪ್ರಕರಣ ಎಂದು ಹೇಳಲಾಗುತ್ತಿದ್ದರೂ, ದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯಗಳ ಹಿನ್ನೆಲೆಯಲ್ಲಿ ಈ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪೊಲೀಸರು ತಿಳಿಸಿರುವಂತೆ, ಆಕಾಶನ ಕೋಣೆಯ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಲಾಗಿತ್ತು. ಬಹಳ ಹೊತ್ತು ಬಾಗಿಲು ತಟ್ಟಿದ ನಂತರ ಬಾಗಿಲನ್ನು ಮುರಿದು ನೋಡಿದಾಗ, ಕೋಣೆಯಲ್ಲಿ ಆಕಾಶನ ಶವವು ಫ್ಯಾನಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ನೌಗಾಂವನಲ್ಲಿ ಹಿಂದೂ ಯುವಕನ ಶವ ಪತ್ತೆ

ಒಂದು ವಾರದ ಹಿಂದೆ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾಗಿದೆ. ನೌಗಾಂವನ ಕಾಲಿತಲಾ ಸ್ಮಶಾನ ಘಾಟ್ ಬಳಿಯ ನದಿಯಲ್ಲಿ ಆ ವಿದ್ಯಾರ್ಥಿಯ ಶವ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜನವರಿಯಿಂದ ಈ ವಿದ್ಯಾರ್ಥಿಯು ಕಾಣೆಯಾಗಿದ್ದನು. ಈ ವಿದ್ಯಾರ್ಥಿಯ ಹೆಸರು ಅಭಿ ಎಂದಾಗಿದ್ದು, ಆತನು ಮ್ಯಾನೇಜಮೆಂಟ್ ವಿಷಯವನ್ನು ಓದುತ್ತಿದ್ದನು. ಅಭಿ ನಾಪತ್ತೆಯಾದ ನಂತರ ಅವನ ತಂದೆ ರಮೇಶಚಂದ್ರ ಅವರು ಮಗನನ್ನು ಹುಡುಕಲು ಎಲ್ಲ ಪ್ರಯತ್ನಗಳನ್ನು ಮಾಡಿದ್ದರು. ಪೊಲೀಸರಿಗೂ ದೂರು ನೀಡಿದ್ದರು; ಆದರೆ  ಅದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ. ಮಗನ ಸಾವು ಹೇಗೆ ಸಂಭವಿಸಿತು ಎಂಬುದು ಇದುವರೆಗೆ ಅವರಿಗೆ ತಿಳಿದುಬಂದಿಲ್ಲ.