ಹಿಮಾಚಲ ಪ್ರದೇಶದ ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ! – Great Khali Accuses Tehsildar

ತಂದೆ ಖರೀದಿಸಿದ ಭೂಮಿಯನ್ನು ಕಬಳಿಸಲಾಗಿದೆ

ಶಿಮ್ಲಾ (ಹಿಮಾಚಲ ಪ್ರದೇಶ) – ಪ್ರಸಿದ್ಧ ‘ವರ್ಲ್ಡ್ ವ್ರೆಸ್ಲಿಂಗ್ ಎಂಟರ್ಟೈನ್ಮೆಂಟ್’ ಕುಸ್ತಿಪಟು ‘ದ ಗ್ರೇಟ್ ಖಲಿ’ ಅಲಿಯಾಸ್ ದಲೀಪ್ ಸಿಂಗ್ ರಾಣಾ ಅವರು ಪಾಂಟಾ ಸಾಹಿಬ್‌ಗೆ ಸಂಬಂಧಿಸಿದ ಭೂ ವಿವಾದದ ಕುರಿತು ಕಂದಾಯ ಇಲಾಖೆಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತನಿಖಾ ಸಮಿತಿಯನ್ನು ಬದಲಾಯಿಸಲು ಮತ್ತು ಸಂಬಂಧಪಟ್ಟ ತಹಶೀಲ್ದಾರರ ಆಸ್ತಿಯ ಬಗ್ಗೆ ತನಿಖೆ ನಡೆಸಲು ಒತ್ತಾಯಿಸಿದರು.

ಪಾಂಟಾ ಸಾಹಿಬ್‌ನ ಕಂದಾಯ ಇಲಾಖೆಯ ಅಧಿಕಾರಿಗಳು ತಮ್ಮನ್ನು ಸಂವಿಧಾನಕ್ಕಿಂತ ಶ್ರೇಷ್ಠರು ಎಂದು ಭಾವಿಸುತ್ತಾರೆ ಎಂದು ಖಲಿ ಆರೋಪಿಸಿದರು. ನನ್ನನ್ನೂ ಒಳಗೊಂಡಂತೆ ಸುಮಾರು 100 ಇತರ ಜನರನ್ನು ಅವರ ಪೂರ್ವಜರ ಭೂಮಿಯಿಂದ ಕಾನೂನುಬಾಹಿರವಾಗಿ ಹೊರಹಾಕಲಾಗಿದೆ. ಈ ಸಂಬಂಧ ನಾವು ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸುಖು ಅವರನ್ನು ಭೇಟಿ ಮಾಡಿ ಸಂಬಂಧಪಟ್ಟ ತಹಶೀಲ್ದಾರರ ಆಸ್ತಿಯ ಬಗ್ಗೆ ಆಳವಾದ ತನಿಖೆ ನಡೆಸುವಂತೆ ಒತ್ತಾಯಿಸಿದ್ದೇವೆ, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಇನ್ನೇನು ನಿರೀಕ್ಷಿಸಲು ಸಾಧ್ಯ?