ಈಶ್ವರೇಚ್ಛೆಯ ಭಾವವನ್ನು ಮನಸ್ಸಿನಲ್ಲಿಟ್ಟುಕೊಂಡರೆ ಅಹಂಕಾರವು ದೂರವಾಗುವುದು !

ಮುಂಬಯಿ – ನಮ್ಮೆಲ್ಲರನ್ನು ನಡೆಸುವ ತತ್ತ್ವ ಒಂದೇ, ಅದುವೇ ಧರ್ಮ! ಎಲ್ಲಿಯವರೆಗೆ ಧರ್ಮವು ಭಾರತವರ್ಷವನ್ನು ನಡೆಸುತ್ತದೆಯೋ, ಅಲ್ಲಿಯವರೆಗೆ ಭಾರತವು ವಿಶ್ವಗುರುವಾಗಿ ಉಳಿಯುವುದು; ಏಕೆಂದರೆ ಜಗತ್ತಿನ ಬಳಿ ಇಂತಹ ಧರ್ಮವೇ ಇಲ್ಲ. ಸಾವಿರಾರು ವರ್ಷಗಳಿಂದ ಅನೇಕ ಸಂತರು ಈ ಧರ್ಮವನ್ನು ಜಾಗೃತಗೊಳಿಸಿದ್ದಾರೆ. ಈಗ ಭಾರತವೇ ಈ ಧರ್ಮವನ್ನು ಜಗತ್ತಿಗೆ ನೀಡುವ ಕಾರ್ಯವನ್ನು ಮಾಡಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನಜೀ ಭಾಗವತ ಅವರು ಅಭಿಪ್ರಾಯಪಟ್ಟರು. ಅವರು ಘಾಟಕೊಪರ (ಪೂರ್ವ) ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದ ಸಂದರ್ಭದಲ್ಲಿ ಆಚಾರ್ಯಶ್ರೀ ವಿಜಯ ಅಕ್ಷಯಬೋಧಿಸೂರಿಶ್ವರಜೀ ಮಹಾರಾಜರು ಮತ್ತು ಆಚಾರ್ಯಶ್ರೀ ವಿಜಯ ಮಹಾಬೋಧಿಸೂರಿಶ್ವರಜೀ ಮಹಾರಾಜರು ಉಪಸ್ಥಿತರಿದ್ದರು.
ಪ.ಪೂ. ಸರಸಂಘಚಾಲಕರು ತಮ್ಮ ಮಾತನ್ನು ಮುಂದುವರೆಸಿಹೀಗೆಂದರು:
೧. ಭಾರತದಲ್ಲಿ ರಾಜಕೀಯ ಅಥವಾ ಸಾಮಾಜಿಕ ಜನರಲ್ಲ, ಬದಲಿಗೆ ಆಧ್ಯಾತ್ಮಿಕ ಜನರೇ ನೇತೃತ್ವ ವಹಿಸುತ್ತಾರೆ. ಆದ್ದರಿಂದಲೇ ಸಂತರ ಪ್ರವಚನಗಳು ನಡೆಯುತ್ತಿರುವಾಗ, ಅವರ ರಕ್ಷಣೆಯ ಕಾರ್ಯವನ್ನು ಸಂಘವು ಮಾಡುತ್ತದೆ.
೨. ನಾವು ಮಾಡುತ್ತಿರುವ ಕಾರ್ಯಕ್ಕೆ ನಾವು ಕೇವಲ ವಾಹಕರು ಅಷ್ಟೆ. ಈ ಕಾರ್ಯವು ಈಶ್ವರನದ್ದಾಗಿದೆ. ಆದ್ದರಿಂದ ಅಹಂಕಾರದಿಂದ ಮುಕ್ತರಾಗಿ ನಾವು ಈ ಕಾರ್ಯವನ್ನು ಮಾಡುತ್ತಿರಬೇಕು. ಅಹಂಕಾರದಿಂದ ಮುಕ್ತರಾಗುವುದು ಕಠಿಣವಾಗಿರುತ್ತದೆ; ಆದರೆ ‘ಈಶ್ವರನ ಇಚ್ಛೆಯಿಂದಲೇ ಈ ಕಾರ್ಯಕ್ಕಾಗಿ ನಮ್ಮ ಆಯ್ಕೆಯಾಗಿದೆ’ ಎನ್ನುವ ಭಾವವನ್ನು ಮನಸ್ಸಿನಲ್ಲಿಟ್ಟುಕೊಂಡರೆ ಅಹಂಕಾರವು ದೂರವಾಗಲು ಸಾಧ್ಯವಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ