ಈಶ್ವರೇಚ್ಛೆಯ ಭಾವವನ್ನು ಮನಸ್ಸಿನಲ್ಲಿಟ್ಟುಕೊಂಡರೆ ಅಹಂಕಾರವು ದೂರವಾಗುವುದು !

ಮುಂಬಯಿ – ನಮ್ಮೆಲ್ಲರನ್ನು ನಡೆಸುವ ತತ್ತ್ವ ಒಂದೇ, ಅದುವೇ ಧರ್ಮ! ಎಲ್ಲಿಯವರೆಗೆ ಧರ್ಮವು ಭಾರತವರ್ಷವನ್ನು ನಡೆಸುತ್ತದೆಯೋ, ಅಲ್ಲಿಯವರೆಗೆ ಭಾರತವು ವಿಶ್ವಗುರುವಾಗಿ ಉಳಿಯುವುದು; ಏಕೆಂದರೆ ಜಗತ್ತಿನ ಬಳಿ ಇಂತಹ ಧರ್ಮವೇ ಇಲ್ಲ. ಸಾವಿರಾರು ವರ್ಷಗಳಿಂದ ಅನೇಕ ಸಂತರು ಈ ಧರ್ಮವನ್ನು ಜಾಗೃತಗೊಳಿಸಿದ್ದಾರೆ. ಈಗ ಭಾರತವೇ ಈ ಧರ್ಮವನ್ನು ಜಗತ್ತಿಗೆ ನೀಡುವ ಕಾರ್ಯವನ್ನು ಮಾಡಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನಜೀ ಭಾಗವತ ಅವರು ಅಭಿಪ್ರಾಯಪಟ್ಟರು. ಅವರು ಘಾಟಕೊಪರ (ಪೂರ್ವ) ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದ ಸಂದರ್ಭದಲ್ಲಿ ಆಚಾರ್ಯಶ್ರೀ ವಿಜಯ ಅಕ್ಷಯಬೋಧಿಸೂರಿಶ್ವರಜೀ ಮಹಾರಾಜರು ಮತ್ತು ಆಚಾರ್ಯಶ್ರೀ ವಿಜಯ ಮಹಾಬೋಧಿಸೂರಿಶ್ವರಜೀ ಮಹಾರಾಜರು ಉಪಸ್ಥಿತರಿದ್ದರು.
ಪ.ಪೂ. ಸರಸಂಘಚಾಲಕರು ತಮ್ಮ ಮಾತನ್ನು ಮುಂದುವರೆಸಿಹೀಗೆಂದರು:
೧. ಭಾರತದಲ್ಲಿ ರಾಜಕೀಯ ಅಥವಾ ಸಾಮಾಜಿಕ ಜನರಲ್ಲ, ಬದಲಿಗೆ ಆಧ್ಯಾತ್ಮಿಕ ಜನರೇ ನೇತೃತ್ವ ವಹಿಸುತ್ತಾರೆ. ಆದ್ದರಿಂದಲೇ ಸಂತರ ಪ್ರವಚನಗಳು ನಡೆಯುತ್ತಿರುವಾಗ, ಅವರ ರಕ್ಷಣೆಯ ಕಾರ್ಯವನ್ನು ಸಂಘವು ಮಾಡುತ್ತದೆ.
೨. ನಾವು ಮಾಡುತ್ತಿರುವ ಕಾರ್ಯಕ್ಕೆ ನಾವು ಕೇವಲ ವಾಹಕರು ಅಷ್ಟೆ. ಈ ಕಾರ್ಯವು ಈಶ್ವರನದ್ದಾಗಿದೆ. ಆದ್ದರಿಂದ ಅಹಂಕಾರದಿಂದ ಮುಕ್ತರಾಗಿ ನಾವು ಈ ಕಾರ್ಯವನ್ನು ಮಾಡುತ್ತಿರಬೇಕು. ಅಹಂಕಾರದಿಂದ ಮುಕ್ತರಾಗುವುದು ಕಠಿಣವಾಗಿರುತ್ತದೆ; ಆದರೆ ‘ಈಶ್ವರನ ಇಚ್ಛೆಯಿಂದಲೇ ಈ ಕಾರ್ಯಕ್ಕಾಗಿ ನಮ್ಮ ಆಯ್ಕೆಯಾಗಿದೆ’ ಎನ್ನುವ ಭಾವವನ್ನು ಮನಸ್ಸಿನಲ್ಲಿಟ್ಟುಕೊಂಡರೆ ಅಹಂಕಾರವು ದೂರವಾಗಲು ಸಾಧ್ಯವಿದೆ.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein