ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂವಿನ ಹತ್ಯೆ : Bangladesh Hindu Murder

ಕಳ್ಳತನದ ಉದ್ದೇಶದಿಂದ ಹತ್ಯೆ ನಡೆದಿದೆ ಎಂದು ಪೊಲೀಸರ ವಾದ

ಕೊಲೆಯಾದ ಹಿಂದೂ ಯುವಕ ಸಮೀರ್ ಕುಮಾರ್ ದಾಸ್ (ಎಡ)

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಚಿತ್ತಗಾಂಗ್ನ ದಾಗನಭಯಿಯಾ ಎಂಬಲ್ಲಿ ಮತಾಂಧ ಮುಸಲ್ಮಾನರು ೨೮ ವರ್ಷದ ಹಿಂದೂ ರಿಕ್ಷಾ ಚಾಲಕ ಸಮೀರ್ ಕುಮಾರ್ ದಾಸ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಅವನ ರಿಕ್ಷಾವನ್ನೂ ಕಳ್ಳತನ ಮಾಡಲಾಗಿದೆ. ಉಪ ಜಿಲ್ಲಾ ಆಸ್ಪತ್ರೆಯ ಹೊರಗೆ ಸಮೀರ ದಾಸನ ಮೃತದೇಹ ಪತ್ತೆಯಾಗಿದೆ. ಇದು ಕಳ್ಳತನದ ಉದ್ದೇಶದಿಂದ ನಡೆದ ಹತ್ಯೆ ಎಂದು ಪೊಲೀಸರು ತಿಳಿಸಿದ್ದಾರೆ.

. ಕುಟುಂಬದವರ ಪ್ರಕಾರ, ಸಮೀರನು ಜನವರಿ ೧೧ ರಂದು ಸಂಜೆ ೭ ಗಂಟೆಗೆ ರಿಕ್ಷಾ ತೆಗೆದುಕೊಂಡು ಮನೆಯಿಂದ ಹೊರಬಂದಿದ್ದನು. ತಡರಾತ್ರಿಯಾದರೂ ಆತ ಮನೆಗೆ ಹಿಂತಿರುಗದ ಕಾರಣ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ರಾತ್ರಿ ೨ ಗಂಟೆಗೆ ಜಗತ್ಪುರ ಗ್ರಾಮದ ಹೊಲವೊಂದರಲ್ಲಿ ಸ್ಥಳೀಯರಿಗೆ ಅವನ ಮೃತದೇಹ ಪತ್ತೆಯಾಗಿದೆ.

. ಪೊಲೀಸರ ಪ್ರಕಾರ, ಈ ಹತ್ಯೆಯು ಪೂರ್ವಯೋಜಿತವಾಗಿ ನಡೆದಂತೆ ಕಾಣುತ್ತಿದೆ. ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

ಒಂದು ತಿಂಗಳೊಳಗೆ ೧೨ ಹಿಂದೂಗಳ ಹತ್ಯೆ!

ಕಳೆದ ಒಂದು ತಿಂಗಳಲ್ಲಿ ಬಾಂಗ್ಲಾದೇಶದಲ್ಲಿ ೧೨ ಹಿಂದೂಗಳ ಹತ್ಯೆಯಾಗಿದೆ. ಕಳೆದ ಎರಡು ವಾರಗಳಿಂದ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಹೆಚ್ಚಾಗಿವೆ ಎಂದು ‘ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಯುನಿಟಿ ಕೌನ್ಸಿಲ್’ ಆರೋಪಿಸಿದೆ. ಒಬ್ಬ ಹಿಂದೂ ವಿಧವೆಯ ಮೇಲೆ ಅತ್ಯಾಚಾರ, ಹಿಂದೂಗಳ ಚಿನ್ನದ ಅಂಗಡಿಗಳ ಲೂಟಿ, ಕುರಿಗ್ರಾಮ್ ಜಿಲ್ಲೆಯಲ್ಲಿ ಹಿಂದೂ ಚುನಾವಣಾ ಅಧಿಕಾರಿಗೆ ಕೆಲಸ ಮಾಡದಂತೆ ತಡೆದ ಘಟನೆ ಹೀಗೆ ಸಾಲು ಸಾಲು ಘಟನೆಗಳು ಜರುಗಿವೆ.

‘ಹಿಂದೂಗಳ ಹತ್ಯೆ ಧಾರ್ಮಿಕ ದ್ವೇಷದಿಂದ ನಡೆದಿದ್ದಲ್ಲ!’ – ಮೊಹಮ್ಮದ್ ಯುನೂಸ್

ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮೊಹಮ್ಮದ್ ಯುನೂಸ್ ನೇತೃತ್ವದ ಆಡಳಿತವು ಅಲ್ಪಸಂಖ್ಯಾತರ ಹತ್ಯೆಗಳನ್ನು ಖಂಡಿಸಿದ್ದರೂ, ಪದೇ ಪದೇ ನಡೆಯುತ್ತಿರುವ ಈ ಘಟನೆಗಳನ್ನು ‘ಧಾರ್ಮಿಕ ದ್ವೇಷ’ ಎಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಮೃತರ ಸಂಖ್ಯೆಯಲ್ಲಾಗಿರುವ ಹೆಚ್ಚಳವು ಕೇವಲ ಒಂದು ಅಪವಾದ ಎಂದು ಅವರು ಹೇಳುತ್ತಿದ್ದಾರೆ ಎಂದು ಸಂಘಟನೆಯು ತಿಳಿಸಿದೆ.

ಸಂಪಾದಕೀಯ ನಿಲುವು

  • ಕಳ್ಳತನದ ನೆಪವೊಡ್ಡಿ ಬಾಂಗ್ಲಾದೇಶದ ಪೊಲೀಸರು ಈ ಘಟನೆಯ ಗಾಂಭೀರ್ಯವನ್ನು ಕುಗ್ಗಿಸಲು ಮತ್ತು ಮತಾಂಧ ಮುಸಲ್ಮಾನರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ!
  • ಬಾಂಗ್ಲಾದೇಶದಲ್ಲಿ ಒಬ್ಬ ಹಿಂದೂವಿನ ಹತ್ಯೆಯಾದಾಗ ಭಾರತದಲ್ಲಿ ೧೦೦ ಬಾಂಗ್ಲಾದೇಶಿ ನುಸುಳುಕೋರರ ಮೇಲೆ ಆಕ್ರಮಣ ಮಾಡುತ್ತೇವೆ’ ಎಂದು ಯಾರಾದರೂ ಭಾರತೀಯರು ಹೇಳಿದರೆ, ಅಂತಹ ಹೇಳಿಕೆಗೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು?