
ಪಂಢರಪುರ – ಇಲ್ಲಿನ ಶ್ರೀ ವಿಠ್ಠಲ ಮತ್ತು ರುಕ್ಮಿಣಿ ದೇವಿಯ ವಿಗ್ರಹಗಳಿಗೆ ಮತ್ತೊಮ್ಮೆ ವಜ್ರಲೇಪನ ಮಾಡಲಾಗುವುದು ಮತ್ತು ಇದಕ್ಕೆ ಕಾನೂನು ಮತ್ತು ನ್ಯಾಯ ಇಲಾಖೆಯು ಅನುಮತಿ ನೀಡಿದೆ. ಈ ಕುರಿತು ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನ ಸಮಿತಿಯ ಸಭೆಯಲ್ಲಿ ವಜ್ರಲೇಪನ ಮಾಡುವ ದಿನಾಂಕವನ್ನು ನಿರ್ಧರಿಸಲಾಗುವುದು.
ಈ ವಿಷಯದ ಬಗ್ಗೆ ದೇವಸ್ಥಾನ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಶೆಳ್ಕೆ ಮಾತನಾಡಿ, “ವಿಗ್ರಹಗಳ ಪಾದಗಳ ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಸವೆತ ಉಂಟಾಗಿದೆ. ಆದ್ದರಿಂದ ವಿಗ್ರಹಗಳನ್ನು ಸಂರಕ್ಷಿಸಲು ಈ ಪ್ರಕ್ರಿಯೆಯನ್ನು ಮಾಡುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ದೇವಸ್ಥಾನ ಸಮಿತಿಯ ಅನುಮತಿ ಪಡೆದು ಪ್ರಸ್ತಾವನೆಯನ್ನು ಕಾನೂನು ಮತ್ತು ನ್ಯಾಯ ಇಲಾಖೆಯ ಅನುಮೋದನೆಗೆ ಕಳುಹಿಸಲಾಗಿತ್ತು. ಅನುಮತಿ ದೊರೆತಿದ್ದು, ಶೀಘ್ರದಲ್ಲೇ ಈ ವಜ್ರಲೇಪನ ಮಾಡಲಾಗುವುದು” ಎಂದು ತಿಳಿಸಿದರು.
2020 ರಲ್ಲಿ ಶ್ರೀ ವಿಠ್ಠಲ ಮತ್ತು ರುಕ್ಮಿಣಿ ದೇವಿಯ ವಿಗ್ರಹಗಳ ಮೇಲಿನ ವಜ್ರಲೇಪನವು ಅಲ್ಪಕಾಲದಲ್ಲೇ ಕಿತ್ತುಬಂದಿತ್ತು!
23 ಮತ್ತು 24 ಜುಲೈ 2020 ರ ಅವಧಿಯಲ್ಲಿ ಶ್ರೀ ವಿಠ್ಠಲ ಮತ್ತು ರುಕ್ಮಿಣಿ ದೇವಿಯ ವಿಗ್ರಹಗಳ ಚರಣಗಳಿಗೆ ‘ಸಿಲಿಕಾನ್’ ಲೇಪನವನ್ನು ಮಾಡಲಾಗಿತ್ತು; ಆದರೆ ಅದು ಅಲ್ಪ ಕಾಲದಲ್ಲೇ ಕಿತ್ತುಬರಲು ಆರಂಭವಾಯಿತು. ಇಲ್ಲಿಯವರೆಗೆ ಪುರಾತತ್ವ ಇಲಾಖೆಯಿಂದ ಎರಡೂ ವಿಗ್ರಹಗಳ ಮೇಲೆ 4 ಬಾರಿ ವಿವಿಧ ರೀತಿಯ ರಾಸಾಯನಿಕ ಲೇಪನಗಳನ್ನು ಮಾಡಲಾಗಿದೆ. ಪ್ರತಿ ಬಾರಿಯೂ ‘ಮತ್ತೆ ವಜ್ರಲೇಪನ ಮಾಡುವ ಅಗತ್ಯವಿರುವುದಿಲ್ಲ’ ಎಂದು ಹೇಳಲಾಗುತ್ತದೆ; ಆದರೆ ಅದರ ವೈಫಲ್ಯವು ಪದೇ ಪದೇ ಮುನ್ನೆಲೆಗೆ ಬರುತ್ತಿದ್ದು, ಒಂದು ನಿರ್ದಿಷ್ಟ ಅವಧಿಯ ನಂತರ ಅದನ್ನು ಮತ್ತೆ ಮಾಡಲಾಗುತ್ತಿದೆ!
ಸಂಪಾದಕೀಯ ನಿಲುವು
|
ಇದನ್ನೂ ಓದಿ – ಶ್ರೀ ವಿಠ್ಠಲ ಮತ್ತು ರುಕ್ಮಿಣಿಯ ವಿಗ್ರಹಗಳ ಮೇಲಿನ ವಜ್ರಲೇಪವು ಸ್ವಲ್ಪ ಸಮಯದೊಳಗೆ ಹೊರಬರಲು ಪ್ರಾರಂಭಿಸುತ್ತದೆ! –
https://sanatanprabhat.org/marathi/570206.html |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ