‘ಪದ್ಮಶ್ರೀ’, ‘ಪದ್ಮಭೂಷಣ’, ‘ಪದ್ಮವಿಭೂಷಣ’, ‘ಭಾರತರತ್ನ’ ಇವು ನಾಗರಿಕ ಪ್ರಶಸ್ತಿಗಳು ಬಿರುದುಗಳಲ್ಲ! – ಮುಂಬಯಿ ಉಚ್ಚ ನ್ಯಾಯಾಲಯ

ಮುಂಬಯಿ – ‘ಪದ್ಮಶ್ರೀ’, ‘ಪದ್ಮಭೂಷಣ’, ‘ಪದ್ಮವಿಭೂಷಣ’ ಮತ್ತು ‘ಭಾರತರತ್ನ’ ಈ ನಾಗರಿಕ ಪ್ರಶಸ್ತಿಗಳು ಬಿರುದುಗಳಲ್ಲ, ಎಂದು ಮುಂಬಯಿ ಉಚ್ಚ ನ್ಯಾಯಾಲಯವು ಹೇಳಿದೆ. ಆದ್ದರಿಂದ ಅವುಗಳನ್ನು ಯಾವುದೇ ವ್ಯಕ್ತಿಯ ಹೆಸರಿನ ಮೊದಲು ಅಥವಾ ನಂತರ ಬಳಸಲು ಬರುವುದಿಲ್ಲ. ನ್ಯಾಯಾಲಯವು ಒಂದು ಅರ್ಜಿಯ ಮೊಕದ್ದಮೆಯ ಶೀರ್ಷಿಕೆಯಲ್ಲಿ ‘ಪದ್ಮಶ್ರೀ’ ಪದದ ಬಳಕೆಯ ಬಗ್ಗೆ ಈ ಅಭಿಪ್ರಾಯವನ್ನು ನೀಡಿದೆ. ನ್ಯಾಯಮೂರ್ತಿ ಸೋಮಶೇಖರ್ ಸುಂದರೇಸನ್ ಅವರ ವಿಭಾಗೀಯ ಪೀಠದ ಮುಂದೆ ಒಂದು ಅರ್ಜಿಯ ವಿಚಾರಣೆ ನಡೆಯುತ್ತಿತ್ತು. ೨೦೦೪ ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿಯಿಂದ ಗೌರವಿಸಲ್ಪಟ್ಟಿದ್ದ ಡಾ. ಶರದ್ ಮೋರೆಶ್ವರ ಹರ್ಡೀಕರ್ ಅವರ ಹೆಸರು ಶೀರ್ಷಿಕೆಯಲ್ಲಿ ‘ಪದ್ಮಶ್ರೀ ಡಾ. ಶರದ್ ಮೋರೆಶ್ವರ ಹರ್ಡೀಕರ್’ ಎಂದು ಪಟ್ಟಿ ಮಾಡಲಾಗಿತ್ತು. ನ್ಯಾಯಾಧೀಶರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಇದು ಕಾನೂನಿನ ಪ್ರಕಾರ ಕಾನೂನು ಬಾಹಿರ ಎಂದು ಹೇಳಿದ್ದಾರೆ.