ರಾಜ್ಯದಲ್ಲಿ ಬರಲಿರುವ ‘ದ್ವೇಷಪೂರಿತ ಭಾಷಣ’ (ಹೇಟ್ ಸ್ಪೀಚ್) ಮಸೂದೆಗೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್ ವಿರೋಧ! : Pramod Muthalik

  • ಮುಸಲ್ಮಾನರ ತುಷ್ಟೀಕರಣ ಮಾಡುವ ಮಸೂದೆ!

  • ಹಿಂದೂಗಳನ್ನು ಗುರಿ ಮಾಡುವ ಮಸೂದೆ!

ಮಂಗಳೂರು – ‘ದ್ವೇಷಪೂರಿತ ಭಾಷಣ’ (ಹೇಟ್ ಸ್ಪೀಚ್) ಮಸೂದೆಯ ಬಗ್ಗೆ ಶ್ರೀರಾಮ ಸೇನೆಯ ಮುಖ್ಯಸ್ಥ ಶ್ರೀ. ಪ್ರಮೋದ ಮುತಾಲಿಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಇದು ವ್ಯವಸ್ಥಿತವಾಗಿ ಮುಸಲ್ಮಾನರ ತುಷ್ಟೀಕರಣಕ್ಕಾಗಿ ಸಿದ್ಧಪಡಿಸಲಾದ ಮಸೂದೆವಾಗಿದೆ. ಮುಸಲ್ಮಾನರ ಒತ್ತಡಕ್ಕೆ ಮಣಿದು ಈ ಮಸೂದೆಯನ್ನು ಅಂಗೀಕರಿಸಲಾಗಿದೆ. ಈ ಮಸೂದೆದಲ್ಲಿ ಹಿಂದೂಗಳನ್ನು ಗುರಿ ಮಾಡಲಾಗಿದೆ’ ಎಂದು ಶ್ರೀ. ಮುತಾಲಿಕ್ ಹೇಳಿದ್ದಾರೆ.

ಶ್ರೀ. ಮುತಾಲಿಕ್ ಅವರು,

1. ಮುಸಲ್ಮಾನರ ಕೃತ್ಯಗಳ ಬಗ್ಗೆ ಮತ್ತು ಅವರ ದ್ವೇಷಪೂರಿತ ಭಾಷಣಗಳ ಬಗ್ಗೆ ಸರಕಾರ ಗಮನ ಹರಿಸುತ್ತಿಲ್ಲ; ಆದರೆ ಹಿಂದೂಗಳನ್ನು ಗುರಿ ಮಾಡುವ ನೀತಿಯನ್ನು ಕಾಂಗ್ರೆಸ್ ಇಂದಿನವರೆಗೆ ವ್ಯವಸ್ಥಿತವಾಗಿ ಜಾರಿಗೆ ತಂದಿದೆ. ಈ ಮಸೂದೆಯ ಮೂಲಕ ಹಿಂದೂಗಳ ಧ್ವನಿಯನ್ನು ಅಡಗಿಸುವ ಪ್ರಯತ್ನ ಮಾಡಲಾಗುತ್ತಿದೆ.

2. ಮುಸಲ್ಮಾನರು ಮುಂಜಾನೆ 4, 4:30 ಮತ್ತು 5 ಗಂಟೆಗೆ ಅಜಾನ್ ನೀಡುತ್ತಾರೆ, ಪ್ರಾರ್ಥನೆ ಮಾಡುತ್ತಾರೆ. ಪ್ರಾರ್ಥನೆಯಲ್ಲಿ ‘ಅಲ್ಲಾಹನೇ ಏಕೈಕ ದೇವರು ಮತ್ತು ಬೇರೆ ಯಾರೂ ದೇವರಲ್ಲ’ ಎಂದು ಹೇಳುವುದು ದ್ವೇಷವಲ್ಲವೇ? ಶುಕ್ರವಾರದ ನಮಾಜಿನ ಸಮಯದಲ್ಲಿ ದ್ವೇಷಪೂರಿತ ಭಾಷಣಗಳನ್ನು ಮಾಡಲಾಗುತ್ತದೆ. ಈ ಮಸೂದೆದ ಮೂಲಕ ನೀವು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ?

3. ಇಂದು ಹಿಂದೂ ಹುಡುಗಿಯರನ್ನು ವ್ಯವಸ್ಥಿತವಾಗಿ ‘ಲವ್ ಜಿಹಾದ್’ನಲ್ಲಿ ಸಿಲುಕಿಸಿ ಬುರ್ಖಾ ಧರಿಸುವಂತೆ ಒತ್ತಾಯಿಸಲಾಗುತ್ತಿದೆ, ಗೋಮಾಂಸ ತಿನ್ನಿಸಲಾಗುತ್ತಿದೆ, ಅವರನ್ನು ವೇಶ್ಯಾವಾಟಿಕೆ ಮತ್ತು ಜಿಹಾದ್‌ಗೆ ತಳ್ಳಲಾಗುತ್ತಿದೆ. ಇಂತಹ ಸಾವಿರಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಅವರ ರಕ್ಷಣೆಗಾಗಿ ನಾವು ಜಿಹಾದಿಗಳ ವಿರುದ್ಧ (ಅನ್ಯಾಯದ ವಿರುದ್ಧ) ಹೋರಾಡುವುದು ದ್ವೇಷವೇ?

4. ಗೋವಂಶ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಗೋಹತ್ಯೆ ನಡೆಯುತ್ತಿದೆ, ಹಸುಗಳ ಕಳ್ಳತನವಾಗುತ್ತಿದೆ ಮತ್ತು ಗೋಮಾಂಸ ಪೂರೈಕೆಯಾಗುತ್ತಿದೆ. ಅದರ ವಿರುದ್ಧ ನಾವು ಹೋರಾಡಿದರೆ ಅದು ದ್ವೇಷವೇ? ಅದರ ವಿರುದ್ಧ ಮಾತನಾಡಿದರೆ ಅದು ದ್ವೇಷಪೂರಿತ ಭಾಷಣವಾಗುತ್ತದೆಯೇ?

5. ಕ್ರೈಸ್ತ ಮಿಷನರಿಗಳು ಇಂದು ಬಹಿರಂಗವಾಗಿ ಹಳ್ಳಿಹಳ್ಳಿಗಳಿಗೆ ಹೋಗಿ ಹಿಂದೂಗಳನ್ನು ಮತಾಂತರ ಮಾಡುತ್ತಿದ್ದಾರೆ. ಈ ಮತಾಂತರದ ವಿರುದ್ಧ ಹಿಂದೂ ಸಮಾಜವನ್ನು ಜಾಗೃತಗೊಳಿಸುವುದು ಮತ್ತು ಸಂಘಟಿಸುವುದು ದ್ವೇಷವೇ? ನಾವು ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದ್ದೇವೆ. ಹಿಂದೂ ಸಮಾಜದ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಮತ್ತು ಅದನ್ನು ನಾವು ಮಾಡಿಯೇ ತೀರುತ್ತೇವೆ.

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಇದಕ್ಕಿಂತ ಬೇರೆ ಏನು ನಿರೀಕ್ಷಿಸಲು ಸಾಧ್ಯ? ಹಿಂದೂಗಳನ್ನು ಹತ್ತಿಕ್ಕುವ ಕಾಂಗ್ರೆಸ್ ಅನ್ನು ಹಿಂದೂಗಳು ಸಂಘಟಿತರಾಗಿ ಕಾನೂನುಬದ್ಧವಾಗಿ ವಿರೋಧಿಸುವುದು ಅಗತ್ಯ!