‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ‘ವಂದೇ ಮಾತರಂ’ ಕುರಿತು ಭವ್ಯ ಪ್ರದರ್ಶನ

ದೆಹಲಿ, ಡಿಸೆಂಬರ್ ೧೦ (ವಾರ್ತೆ) – ರಾಷ್ಟ್ರ ಜಾಗೃತಿಯ ಪವಿತ್ರ ಗೀತೆಯಾದ ‘ವಂದೇ ಮಾತರಂ’ ಗೆ ಈ ವರ್ಷ ೧೫೦ ವರ್ಷಗಳು ಪೂರ್ಣಗೊಳ್ಳುತ್ತಿವೆ. ರಾಷ್ಟ್ರ ರಕ್ಷಣೆ ಮತ್ತು ಧರ್ಮ ಜಾಗೃತಿಗಾಗಿ ಕಾರ್ಯನಿರ್ವಹಿಸುತ್ತಿರುವ ಸನಾತನ ಸಂಸ್ಥೆಯು ೨೫ ವರ್ಷಗಳನ್ನು ಪೂರ್ಣಗೊಳಿಸಿದೆ. ಈ ಸುವರ್ಣ ಸಂಗಮವನ್ನು ಆಧರಿಸಿ, ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ಸಹಯೋಗದೊಂದಿಗೆ ಭಾರತ್ ಮಂಟಪಂನಲ್ಲಿ ಡಿಸೆಂಬರ್ ೧೩ ರಿಂದ ೧೫ ರವರೆಗೆ ಆಯೋಜಿಸಲಾದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಭವ್ಯ ‘ವಂದೇ ಮಾತರಂ’ ಪ್ರದರ್ಶನ ಮತ್ತು ವಿಶೇಷ ಗೋಷ್ಠಿಯನ್ನು ಆಯೋಜಿಸಲಾಗಿದೆ.

ಈ ಪ್ರದರ್ಶನದಲ್ಲಿ ಮಾತೃಭೂಮಿಯ ಮೇಲಿನ ಪ್ರೀತಿ, ರಾಷ್ಟ್ರಕ್ಕಾಗಿ ತ್ಯಾಗ ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕರು ನೀಡಿದ ಅಮೂಲ್ಯ ಕೊಡುಗೆಯನ್ನು ಸಾರ್ವಜನಿಕರು ಅನುಭವಿಸಬಹುದು.

‘ವಂದೇ ಮಾತರಂ’ ಇಡೀ ಭಾರತವನ್ನು ರಾಷ್ಟ್ರಭಾವನೆಯ ಸೂತ್ರದಲ್ಲಿ ಬಂಧಿಸಿತು. ಸ್ವಾತಂತ್ರ್ಯ ಹೋರಾಟದ ಪ್ರೇರಕ ಸ್ಮರಣೆಗಳು, ತ್ಯಾಗ, ರಾಷ್ಟ್ರಕ್ಕಾಗಿ ಸಮರ್ಪಣೆ ಮತ್ತು ಅಸಂಖ್ಯಾತ ಕ್ರಾಂತಿಕಾರಿಗಳ ಹೃದಯದಲ್ಲಿರುವ ಶಕ್ತಿಯನ್ನು ಈ ಗೀತೆ ಜೀವಂತಗೊಳಿಸಿದೆ. ಈ ಪ್ರೇರಣೆಯನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ ವರ್ತಕ್ ಅವರು ಹೇಳಿದರು.

ಈ ವಿಶೇಷ ಕಾರ್ಯಕ್ರಮದ ಆಕರ್ಷಣೆಗಳು 

  • ೧೦೦೦ ಜನರ ಸಾಮೂಹಿಕ ಗಾಯನ: ‘ವಂದೇ ಮಾತರಂ’ ರಾಷ್ಟ್ರಭಾವನೆಯ ಮಹಾ ಅಭಿಯಾನ.
  • ‘ವಂದೇ ಮಾತರಂ’ನ ಉಗಮ, ಸಂಘರ್ಷದ ಕಥೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅದರ ಪಾತ್ರವನ್ನು ತಿಳಿಸುವ ಇತಿಹಾಸದ ಚಲನಚಿತ್ರ ಪ್ರಸಾರ.
  • ಕೇಂದ್ರ ಸಂಸ್ಕೃತಿ ಸಚಿವ ಶ್ರೀ. ಗಜೇಂದ್ರ ಸಿಂಹ ಶೇಖಾವತ್ ಅವರ ಮಾರ್ಗದರ್ಶನ: ‘ವಂದೇ ಮಾತರಂ’ನ ಸಾಂಸ್ಕೃತಿಕ, ಐತಿಹಾಸಿಕ ಮತ್ತು ರಾಷ್ಟ್ರೀಯ ಮಹತ್ವದ ಕುರಿತು ಭಾಷಣ.