ಪ್ರತಿ ಸೆಂಟರ್ ಸಾಮರ್ಥ್ಯ 15 ಸಾವಿರ ಜನರನ್ನು ಇರಿಸುವಷ್ಟು ಇರಲಿದೆ
(ಡಿಟೆನ್ಷನ್ ಸೆಂಟರ್ ಎಂದರೆ ಬಂಧಿತ ನುಸುಳುಕೋರರನ್ನು ನಿರ್ದಿಷ್ಟ ಅವಧಿಗೆ ಇರಿಸುವ ಸ್ಥಳ)

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶ ರಾಜ್ಯದಲ್ಲಿ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ನುಸುಳುಕೋರರನ್ನು ಹುಡುಕಿ, ಅವರನ್ನು ತಾತ್ಕಾಲಿಕವಾಗಿ ಡಿಟೆನ್ಷನ್ ಸೆಂಟರ್ನಲ್ಲಿ ಇರಿಸಿ, ನಂತರ ಅವರನ್ನು ಭಾರತದಿಂದ ಹೊರಹಾಕಲು ಸರಕಾರವು ಸಮರೋಪಾದಿಯಲ್ಲಿ ಕೆಲಸವನ್ನು ಆರಂಭಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆದೇಶದ ಮೇರೆಗೆ, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಈ ರೀತಿಯ ಕೇಂದ್ರಗಳನ್ನು ನಿರ್ಮಿಸುವ ಕೆಲಸ ಪ್ರಾರಂಭವಾಗಿದೆ.
ಸದ್ಯ ಹಳೆಯ ಮತ್ತು ಪಾಳುಬಿದ್ದ ಕಟ್ಟಡಗಳನ್ನು ಇದಕ್ಕಾಗಿ ಬಳಸಲಾಗುತ್ತಿದೆ. ಅದೇ ಸಮಯದಲ್ಲಿ, ಹೊಸ ಕೇಂದ್ರಗಳನ್ನು ನಿರ್ಮಿಸುವ ಪ್ರಕ್ರಿಯೆಯು ನಡೆಯುತ್ತಿದೆ. ಈ ಹೊಸ ಕೇಂದ್ರಗಳಲ್ಲಿ ೧೫ ಸಾವಿರ ಜನರನ್ನು ಇರಿಸಲು ವ್ಯವಸ್ಥೆ ಇರಲಿದೆ. ಈ ಕೇಂದ್ರಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರಲಿವೆ.
ಮತ್ತೊಂದೆಡೆ, ಸರಕಾರವು ರಾಜ್ಯಾದ್ಯಂತ ನುಸುಳುಕೋರರನ್ನು ಹುಡುಕುವ ಅಭಿಯಾನವನ್ನು ಪ್ರಾರಂಭಿಸಿದೆ. ಪೊಲೀಸರು ಮತ್ತು ಆಡಳಿತವು ಪ್ರತಿ ಹಳ್ಳಿಗೆ ಭೇಟಿ ನೀಡಿ ಜನರನ್ನು ಪರಿಶೀಲಿಸುತ್ತಿದ್ದಾರೆ. ಅದೇ ಸಮಯದಲ್ಲಿ, ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ಆಳವಾದ ಪರಿಶೀಲನೆಯೂ ನಡೆಯುತ್ತಿದೆ. ಇದರ ಮೂಲಕ ಯಾರಿಗೆ ಭಾರತದ ಪ್ರಜೆಗಳು ಎಂದು ದಾಖಲೆಗಳನ್ನು ಸಲ್ಲಿಸಲು ಸಾಧ್ಯವಿಲ್ಲವೋ, ಅವರನ್ನು ಈ ಕೇಂದ್ರಗಳಲ್ಲಿ ಇರಿಸಲಾಗುತ್ತಿದೆ.
ಡಿಟೆನ್ಷನ್ ಸೆಂಟರ್ ಹೇಗಿರಲಿದೆ?
ಡಿಟೆನ್ಷನ್ ಸೆಂಟರ್ ನ ಮಾದರಿ ವಿನ್ಯಾಸದ ಪ್ರಕಾರ, ಈ ಕೇಂದ್ರಗಳಲ್ಲಿ ಜೈವಿಕ ಗುರುತಿನ ವ್ಯವಸ್ಥೆ ಮುಖ ಗುರುತಿಸುವ ತಂತ್ರಜ್ಞಾನ, ಬೆರಳಚ್ಚು ಪರಿಶೀಲನೆ ಮತ್ತು ನಿರಂತರ ದೃಶ್ಯ ನಿಯಂತ್ರಣ (ಸಿಸಿಟಿವಿ) ವ್ಯವಸ್ಥೆ ಇರಲಿದೆ. ಪ್ರವೇಶಕ್ಕಾಗಿ ೩ ಹಂತದ ಭದ್ರತೆಯನ್ನು ಇಡಲಾಗುವುದು ಮತ್ತು ನಿಯಂತ್ರಣ ಕೊಠಡಿಯಿಂದ ಅನುಮತಿ ದೊರೆತ ನಂತರವೇ ಅಧಿಕೃತ ವ್ಯಕ್ತಿಗಳು ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.
ಪ್ರಸ್ತಾವಿತ ಮಾದರಿಯು ಒಟ್ಟು ೧೫ ಸಾವಿರ ವ್ಯಕ್ತಿಗಳ ಸಾಮರ್ಥ್ಯವನ್ನು ಹೊಂದಿದೆ. ಪುರುಷರು ಮತ್ತು ಮಹಿಳೆಯರನ್ನು ಒಂದೇ ಆವರಣದಲ್ಲಿ ಇರಿಸಿದರೂ, ಕಣ್ಗಾವಲು ಮತ್ತು ಭದ್ರತಾ ವ್ಯವಸ್ಥೆ ಪ್ರತ್ಯೇಕವಾಗಿರುತ್ತದೆ. ಇಲ್ಲಿ ಕನಿಷ್ಠ ೫೦ ಕೇಂದ್ರ ಭದ್ರತಾ ಸಿಬ್ಬಂದಿಯ ನಿಯೋಜನೆ, ಅತ್ಯಾಧುನಿಕ ನಿಯಂತ್ರಣ ಕೊಠಡಿ ಮತ್ತು ನಿಯಂತ್ರಿತ ಪ್ರವೇಶದ್ವಾರಗಳು ಸೇರಿವೆ. ರಾಜ್ಯ ಸರಕಾರವು ಈ ಮಾದರಿಯನ್ನು ಗೃಹ ಇಲಾಖೆಗೆ ಕಳುಹಿಸಿ, ಭದ್ರತೆಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಆದೇಶಿಸಿದೆ. ಅಂಕಿ-ಅಂಶಗಳು ಭದ್ರತಾ ಮಾನದಂಡಗಳಿಗೆ ಸೂಕ್ತವೆಂದು ನಿರ್ಧರಿಸಿದರೆ, ರಾಜ್ಯದ ಎಲ್ಲಾ ೧೭ ಮಹಾನಗರಪಾಲಿಕೆಗಳಲ್ಲಿ ಇಂತಹ ಕೇಂದ್ರಗಳನ್ನು ನಿರ್ಮಿಸಲಾಗುವುದು. ನುಸುಳುವಿಕೆಯ ಪ್ರಮಾಣ ಹೆಚ್ಚಿರುವ ಸ್ಥಳಗಳಲ್ಲಿ ಒಂದಕ್ಕಿಂತ ಹೆಚ್ಚು ಕೇಂದ್ರಗಳನ್ನು ನಿರ್ಮಿಸಲು ಸಿದ್ಧತೆ ನಡೆಸಲಾಗಿದೆ.
ಸಂಪಾದಕೀಯ ನಿಲುವುಇಷ್ಟು ದೊಡ್ಡ ಸಾಮರ್ಥ್ಯದ ಕೇಂದ್ರಗಳ ನಿರ್ಮಾಣದಿಂದ ರಾಜ್ಯದಲ್ಲಿ ಎಷ್ಟು ನುಸುಳುಕೋರರಿರಬಹುದು ಎಂದು ಊಹಿಸಬಹುದು. ಉತ್ತರ ಪ್ರದೇಶದಲ್ಲಿ ಈ ಪರಿಸ್ಥಿತಿಯಿದ್ದರೆ, ಇತರ ರಾಜ್ಯಗಳ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿರುವುದಿಲ್ಲ; ಆದರೆ ಇತರ ರಾಜ್ಯಗಳು ಇಂತಹ ಕ್ರಮ ಕೈಗೊಳ್ಳುತ್ತಿರುವುದು ಕಂಡುಬರುತ್ತಿಲ್ಲ, ಇದು ನಾಚಿಕೆಗೇಡಿನ ಸಂಗತಿ! |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಆಗಸ್ಟ್ ೯ ರ ಒಳಗಾಗಿಯೇ ಶ್ರೀಕೃಷ್ಣ ಮಂದಿರದ ನಿರ್ಮಾಣದ ದಿನಾಂಕವನ್ನು ಘೋಷಿಸಿದರೆ, ಕರಸೇವೆಯ ಅಗತ್ಯವೇ ಇರುವುದಿಲ್ಲ ! – ಕಾಳಿ ಸೇನಾ : Kali Sena
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ