
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಹೊಟೇಲ್ನಲ್ಲಿ ಸಂತ್ರಸ್ತರ ಅಶ್ಲೀಲ ವಿಡಿಯೋಗಳನ್ನು ಮಾಡಿ ಅವರಿಂದ ಹಣ ಸುಲಿಗೆ ಮಾಡುತ್ತಿದ್ದ ರಿಯಾಜ್ ಎಂಬ ಪೋಲೀಸ್ ಕಾನ್ಸ್ಟೆಬಲ್ನನ್ನು ಬಂಧಿಸಲಾಗಿದೆ. ನ್ಯಾಯಾಲಯವು ಆತನಿಗೆ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಈ ಗ್ಯಾಂಗ್ನಲ್ಲಿದ್ದ ೧ ಯುವತಿ ಮತ್ತು ೧ ಯುವಕನನ್ನು ಈಗಾಗಲೇ ಜೈಲಿಗೆ ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರವೇಶ ಭಾರದ್ವಾಜ್ ಸೇರಿದಂತೆ ಇತರರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
೧. ಕಮಲಾನಗರ ಪೊಲೀಸರು ರಿಯಾಜ್ನನ್ನು ಕಾನ್ಪುರದಿಂದ ಬಂಧಿಸಿದ್ದಾರೆ. ಸಂತ್ರಸ್ತರ ಅಶ್ಲೀಲ ಫೋಟೋಗಳನ್ನು ತೆಗೆದು ನಂತರ ಬೆದರಿಸಿ ಅವರಿಂದ ಹಣ ಸುಲಿಗೆ ಮಾಡುವ ಗ್ಯಾಂಗ್ನ ಸದಸ್ಯ ರಿಯಾಜ್ ಎಂದು ತಿಳಿದುಬಂದಿದೆ.
೨. ಪೋಲೀಸ್ ಹುದ್ದೆಯ ದುರುಪಯೋಗ ಪಡೆದು, ರಿಯಾಜ್ ಸಂತ್ರಸ್ತರಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ನ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದ್ದನೆಂದು ಸ್ಪಷ್ಟವಾಗಿದೆ.
೩. ಈ ಹಿಂದೆ ಪೋಲೀಸರು ಮೈನ್ಪುರಿಯ ಒಬ್ಬ ಯುವತಿ ಮತ್ತು ಬಾಹ್ ಇಲ್ಲಿಯ ಗಣೇಶ್ ಎಂಬ ಅಪರಾಧಿಯನ್ನು ಬಂಧಿಸಿದ್ದರು. ‘ಅವರು ಒಬ್ಬ ಯುವಕನೊಂದಿಗೆ ಸ್ನೇಹ ಬೆಳೆಸಿ ಆತನ ಅಶ್ಲೀಲ ವಿಡಿಯೋ ಮಾಡಿ ೪ ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು’ ಎಂದು ಆರೋಪಿಸಲಾಗಿದೆ.
೪. ಆಗ್ರಾದಲ್ಲಿ ಪೋಲೀಸ್ ಕಾನ್ಸ್ಟೆಬಲ್ ಆಗಿ ನೇಮಕಗೊಂಡಿದ್ದಾಗ ರಿಯಾಜ್ ರೈಫಲ್ನೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದ ಕಾರಣ ಚರ್ಚೆಯಲ್ಲಿದ್ದ. ಆತನ ವರ್ಗಾವಣೆ ಎಲ್ಲಾದರೂ ಆದರೂ, ಆತ ಯಾವಾಗಲೂ ಸಮವಸ್ತ್ರ ಧರಿಸದೆ ಸಾಮಾನ್ಯ ಬಟ್ಟೆಗಳಲ್ಲಿ ಓಡಾಡುತ್ತಿದ್ದ.
೫. ರಿಯಾಜ್ ಹಫ್ತಾ ವಸೂಲಿ ಮಾಡುತ್ತಿದ್ದನೆಂದು ಹಲವು ಬಾರಿ ಆರೋಪಗಳಾದರೂ, ಆತನ ಮೇಲಿನ ಕ್ರಮ ತಪ್ಪುತ್ತಿತ್ತು. ನಗರದ ವ್ಯಾಪಾರಿಗಳು, ನ್ಯಾಯವಾದಿಗಳು, ರಾಜಕೀಯ ವ್ಯಕ್ತಿಗಳು ಮತ್ತು ಅಪರಾಧ ಜಗತ್ತಿನೊಂದಿಗೆ ಆತನಿಗೆ ಸಂಬಂಧವಿತ್ತು.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!