ಗುಜರಾತ್‌ನಲ್ಲಿ ಆದಿವಾಸಿಗಳ ಭೂಮಿಯಲ್ಲಿ ಅನಧಿಕೃತ ಚರ್ಚ್ ನಿರ್ಮಾಣ ಸ್ಥಗಿತ

ಹಿಂದೂಗಳ ವಿರೋಧದ ಪರಿಣಾಮ!

ಸೂರತ್ (ಗುಜರಾತ್) – ಸೂರತ್ ಜಿಲ್ಲೆಯ ಉಮರಪಾಡಾದ ಬಹಾರ್ ಗ್ರಾಮದಲ್ಲಿ ಆದಿವಾಸಿ ಜನಾಂಗದವರ ಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಿಸಲಾಗುತ್ತಿದ್ದ ಚರ್ಚ್ ಅನ್ನು ತಡೆಯಲಾಗಿದೆ. ಗ್ರಾಮದಲ್ಲಿನ ಹಿಂದೂಗಳಿಗೆ ನಿರ್ಮಾಣದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಅವರು ತೀವ್ರ ವಿರೋಧ ವ್ಯಕ್ತಪಡಿಸಿ, ಅಧಿಕಾರಿಗಳ ಬಳಿ ದೂರು ನೀಡಿದ್ದರು. ಈ ವಿರೋಧದ ನಂತರ ಚರ್ಚ್ ನಿರ್ಮಾಣವನ್ನು ನಿಲ್ಲಿಸಲಾಗಿದೆ.

ಈ ಗ್ರಾಮದಲ್ಲಿ ಹಿಂದೂಗಳ ಜನಸಂಖ್ಯೆ ಗರಿಷ್ಠವಾಗಿದ್ದು, ಕ್ರಿಶ್ಚಿಯನ್ನರು ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಆದರೂ, ಗ್ರಾಮದ ಹೊರಗಿನ ಒಂದು ಹೊಲದಲ್ಲಿ ಚರ್ಚ್ ನಿರ್ಮಾಣವನ್ನು ಪ್ರಾರಂಭಿಸಲಾಗಿತ್ತು. ಇದಕ್ಕಾಗಿ ಪಂಚಾಯತಿಯಿಂದ ಅನುಮತಿ ಪಡೆದಿರಲಿಲ್ಲ, ಹಾಗೂ ಗ್ರಾಮಸ್ಥರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆದಿವಾಸಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ‘ದೇವ್ ಬಿರ್ಸಾ ಸೇನಾ’ ಸಂಘಟನೆಯು ಹಿಂದೂ ನಾಯಕರೊಂದಿಗೆ ಸೇರಿ ಸರ್ಕಾರಕ್ಕೆ ಮನವಿ ಸಲ್ಲಿಸಿ ತಕ್ಷಣವೇ ನಿರ್ಮಾಣ ಕಾರ್ಯ ನಿಲ್ಲಿಸುವಂತೆ ಮನವಿ ಮಾಡಿ, ಶೀಘ್ರವಾಗಿ ಕ್ರಮ ಕೈಗೊಳ್ಳದಿದ್ದರೆ ಆಂದೋಲನ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಹೆಚ್ಚುತ್ತಿರುವ ವಿರೋಧದ ನಂತರ ಕ್ರಿಶ್ಚಿಯನ್ನರು, ಸರಪಂಚರ ಮತ್ತು ಗ್ರಾಮಸ್ಥರ ಮುಂದೆ ಚರ್ಚ್ ಕಟ್ಟದಂತೆ ಲಿಖಿತ ಭರವಸೆ ನೀಡಿದರು ಮತ್ತು ನೀಡಿದ್ದ ಮನವಿಯನ್ನು ಹಿಂಪಡೆಯುವಂತೆ ವಿನಂತಿಸಿದರು. ಭರವಸೆ ಸಿಕ್ಕ ನಂತರ ಗ್ರಾಮಸ್ಥರು ಮನವಿಯನ್ನು ಹಿಂಪಡೆದರು.

ಸಂಪಾದಕೀಯ ನಿಲುವು

ಚರ್ಚ್ ನಿರ್ಮಾಣ ಮತ್ತೆ ಆರಂಭವಾಗದಂತೆ, ಹಿಂದೂಗಳು ಎಚ್ಚರಿಕೆಯಿಂದಿರಬೇಕು!