ಹಿಂದೂಗಳ ವಿರೋಧದ ಪರಿಣಾಮ!

ಸೂರತ್ (ಗುಜರಾತ್) – ಸೂರತ್ ಜಿಲ್ಲೆಯ ಉಮರಪಾಡಾದ ಬಹಾರ್ ಗ್ರಾಮದಲ್ಲಿ ಆದಿವಾಸಿ ಜನಾಂಗದವರ ಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಿಸಲಾಗುತ್ತಿದ್ದ ಚರ್ಚ್ ಅನ್ನು ತಡೆಯಲಾಗಿದೆ. ಗ್ರಾಮದಲ್ಲಿನ ಹಿಂದೂಗಳಿಗೆ ನಿರ್ಮಾಣದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಅವರು ತೀವ್ರ ವಿರೋಧ ವ್ಯಕ್ತಪಡಿಸಿ, ಅಧಿಕಾರಿಗಳ ಬಳಿ ದೂರು ನೀಡಿದ್ದರು. ಈ ವಿರೋಧದ ನಂತರ ಚರ್ಚ್ ನಿರ್ಮಾಣವನ್ನು ನಿಲ್ಲಿಸಲಾಗಿದೆ.
ಈ ಗ್ರಾಮದಲ್ಲಿ ಹಿಂದೂಗಳ ಜನಸಂಖ್ಯೆ ಗರಿಷ್ಠವಾಗಿದ್ದು, ಕ್ರಿಶ್ಚಿಯನ್ನರು ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಆದರೂ, ಗ್ರಾಮದ ಹೊರಗಿನ ಒಂದು ಹೊಲದಲ್ಲಿ ಚರ್ಚ್ ನಿರ್ಮಾಣವನ್ನು ಪ್ರಾರಂಭಿಸಲಾಗಿತ್ತು. ಇದಕ್ಕಾಗಿ ಪಂಚಾಯತಿಯಿಂದ ಅನುಮತಿ ಪಡೆದಿರಲಿಲ್ಲ, ಹಾಗೂ ಗ್ರಾಮಸ್ಥರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆದಿವಾಸಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ‘ದೇವ್ ಬಿರ್ಸಾ ಸೇನಾ’ ಸಂಘಟನೆಯು ಹಿಂದೂ ನಾಯಕರೊಂದಿಗೆ ಸೇರಿ ಸರ್ಕಾರಕ್ಕೆ ಮನವಿ ಸಲ್ಲಿಸಿ ತಕ್ಷಣವೇ ನಿರ್ಮಾಣ ಕಾರ್ಯ ನಿಲ್ಲಿಸುವಂತೆ ಮನವಿ ಮಾಡಿ, ಶೀಘ್ರವಾಗಿ ಕ್ರಮ ಕೈಗೊಳ್ಳದಿದ್ದರೆ ಆಂದೋಲನ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಹೆಚ್ಚುತ್ತಿರುವ ವಿರೋಧದ ನಂತರ ಕ್ರಿಶ್ಚಿಯನ್ನರು, ಸರಪಂಚರ ಮತ್ತು ಗ್ರಾಮಸ್ಥರ ಮುಂದೆ ಚರ್ಚ್ ಕಟ್ಟದಂತೆ ಲಿಖಿತ ಭರವಸೆ ನೀಡಿದರು ಮತ್ತು ನೀಡಿದ್ದ ಮನವಿಯನ್ನು ಹಿಂಪಡೆಯುವಂತೆ ವಿನಂತಿಸಿದರು. ಭರವಸೆ ಸಿಕ್ಕ ನಂತರ ಗ್ರಾಮಸ್ಥರು ಮನವಿಯನ್ನು ಹಿಂಪಡೆದರು.
ಸಂಪಾದಕೀಯ ನಿಲುವುಚರ್ಚ್ ನಿರ್ಮಾಣ ಮತ್ತೆ ಆರಂಭವಾಗದಂತೆ, ಹಿಂದೂಗಳು ಎಚ್ಚರಿಕೆಯಿಂದಿರಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!