|

ನವ ದೆಹಲಿ – ಎಲ್ಲಾ ಮೊಬೈಲ್ ಫೋನ್ಗಳಲ್ಲಿ ‘ಸೈಬರ್ ಸುರಕ್ಷತೆಗೆ ಸಂಬಂಧಿಸಿದ’ ‘ಸಂಚಾರ ಸಾಥಿ’ ಎಂಬ ಈ ‘ಅಪ್ಲಿಕೇಶನ್’ ಅನ್ನು ಕಡ್ಡಾಯವಾಗಿ ‘ಪ್ರೀ-ಇನ್ಸ್ಟಾಲ್’ (ಮೊದಲೇ ಸೇರಿಸುವುದು) ಮಾಡುವಂತೆ ಮೊಬೈಲ್ ಕಂಪನಿಗಳಿಗೆ ನೀಡಿದ್ದ ಆದೇಶವನ್ನು ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಟೀಕೆಯ ನಂತರ ಸರಕಾರವು ಹಿಂಪಡೆದಿದೆ.
ಇಂತಹ ಕಡ್ಡಾಯ ಮಾಡುವುದು ಬಳಕೆದಾರರ ಗೌಪ್ಯತೆಯ ಹಕ್ಕಿನ ಉಲ್ಲಂಘನೆ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು.
ಈ ಹಿಂದೆ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಲೋಕಸಭೆಯಲ್ಲಿ, ‘ಸರಕಾರವು ನವೆಂಬರ್ ೨೮ ರ ಆದೇಶದಲ್ಲಿ ಬದಲಾವಣೆ ಮಾಡಲು ಸಿದ್ಧವಿದೆ. ಈ ಅಪ್ಲಿಕೇಶನ್ ಮೂಲಕ ಬೇಹುಗಾರಿಕೆ ಮಾಡುವುದು ಸಾಧ್ಯವಿಲ್ಲ. ಅಪ್ಲಿಕೇಶನ್ ಅನ್ನು ‘ಇನ್ಸ್ಟಾಲ್’ ಮಾಡುವ ಉದ್ದೇಶವು ಕಡಿಮೆ ಮಾಹಿತಿ ಇರುವ ಜನರ ಬಳಿಗೆ ಅದನ್ನು ಸುಲಭವಾಗಿ ತಲುಪಿಸುವುದು ಆಗಿತ್ತು. ಕಳೆದ ಒಂದು ದಿನದಲ್ಲಿ ೬ ಲಕ್ಷ ಜನರು ಈ ‘ಅಪ್ಲಿಕೇಶನ್’ ಅನ್ನು ತಮ್ಮ ಮೊಬೈಲ್ ಫೋನ್ಗಳಲ್ಲಿ ‘ಡೌನ್ಲೋಡ್’ ಮಾಡಿದ್ದಾರೆ. ಬಳಕೆದಾರರು ಈಗ ಈ ಅಪ್ಲಿಕೇಶನ್ ಅನ್ನು ವ್ಯಾಪಕವಾಗಿ ಸ್ವೀಕರಿಸುತ್ತಿರುವುದರಿಂದ ‘ಪ್ರೀ-ಇನ್ಸ್ಟಾಲ್’ ಆದೇಶದ ಅಗತ್ಯವಿಲ್ಲ. ಅದು ಸ್ವಯಂಪ್ರೇರಿತವಾಗಿ ಡೌನ್ಲೋಡ್ ಮಾಡಲು ಲಭ್ಯವಿರುತ್ತದೆ.’ ‘ಕಳ್ಳತನವಾದ ೨೬ ಲಕ್ಷ ಮೊಬೈಲ್ ಫೋನ್ಗಳನ್ನು ಈ ಅಪ್ಲಿಕೇಶನ್ ಸಹಾಯದಿಂದ ಹುಡುಕಲಾಗಿದೆ ಮತ್ತು ೬ ಲಕ್ಷ ವಂಚನೆಯ ಪ್ರಕರಣಗಳನ್ನು ತಡೆಯಲು ಸಾಧ್ಯವಾಗಿದೆ.’
ಈ ಅಪ್ಲಿಕೇಶನ್ ಮೂಲಕ ಬಳಕೆದಾರರ ಮಾತನ್ನು ಕೇಳಲು ಮತ್ತು ಅವರ ಸಂದೇಶಗಳನ್ನು ಓದಲು ಸಾಧ್ಯವಿದೆ ಎಂದು ವಿರೋಧ ಪಕ್ಷಗಳ ವಾದವಾಗಿತ್ತು. ಮೊಬೈಲ್ ಫೋನ್ಗಳನ್ನು ತಯಾರಿಸುವ ಪ್ರಮುಖ ತಯಾರಕರಾದ ‘ಆಪಲ್’ ಮತ್ತು ‘ಸ್ಯಾಮ್ಸಂಗ್’ ಸಹ ಸರಕಾರದ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದವು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !