‘ಸಂಚಾರ ಸಾಥಿ’ ಅಪ್ಲಿಕೇಶನ್ ಕಡ್ಡಾಯಗೊಳಿಸುವ ಆದೇಶವನ್ನು ಸರಕಾರದಿಂದ ಹಿಂಪಡೆ! – Government Withdraws Sanchar Saathi Mandate

  • ವಿರೋಧ ಪಕ್ಷಗಳ ಟೀಕೆಯ ನಂತರ ಸರಕಾರದ ನಿರ್ಧಾರ!

  • ಅಪ್ಲಿಕೇಶನ್ ಮೂಲಕ ಬೇಹುಗಾರಿಕೆ ಸಾಧ್ಯವಿಲ್ಲ ಎಂದು ಸರಕಾರದಿಂದ ಮಾಹಿತಿ!

ನವ ದೆಹಲಿ – ಎಲ್ಲಾ ಮೊಬೈಲ್ ಫೋನ್‌ಗಳಲ್ಲಿ ‘ಸೈಬರ್ ಸುರಕ್ಷತೆಗೆ ಸಂಬಂಧಿಸಿದ’ ‘ಸಂಚಾರ ಸಾಥಿ’ ಎಂಬ ಈ ‘ಅಪ್ಲಿಕೇಶನ್’ ಅನ್ನು ಕಡ್ಡಾಯವಾಗಿ ‘ಪ್ರೀ-ಇನ್‌ಸ್ಟಾಲ್’ (ಮೊದಲೇ ಸೇರಿಸುವುದು) ಮಾಡುವಂತೆ ಮೊಬೈಲ್ ಕಂಪನಿಗಳಿಗೆ ನೀಡಿದ್ದ ಆದೇಶವನ್ನು ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಟೀಕೆಯ ನಂತರ ಸರಕಾರವು ಹಿಂಪಡೆದಿದೆ.

ಇಂತಹ ಕಡ್ಡಾಯ ಮಾಡುವುದು ಬಳಕೆದಾರರ ಗೌಪ್ಯತೆಯ ಹಕ್ಕಿನ ಉಲ್ಲಂಘನೆ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು.

ಈ ಹಿಂದೆ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಲೋಕಸಭೆಯಲ್ಲಿ, ‘ಸರಕಾರವು ನವೆಂಬರ್ ೨೮ ರ ಆದೇಶದಲ್ಲಿ ಬದಲಾವಣೆ ಮಾಡಲು ಸಿದ್ಧವಿದೆ. ಈ ಅಪ್ಲಿಕೇಶನ್ ಮೂಲಕ ಬೇಹುಗಾರಿಕೆ ಮಾಡುವುದು ಸಾಧ್ಯವಿಲ್ಲ. ಅಪ್ಲಿಕೇಶನ್ ಅನ್ನು ‘ಇನ್‌ಸ್ಟಾಲ್’ ಮಾಡುವ ಉದ್ದೇಶವು ಕಡಿಮೆ ಮಾಹಿತಿ ಇರುವ ಜನರ ಬಳಿಗೆ ಅದನ್ನು ಸುಲಭವಾಗಿ ತಲುಪಿಸುವುದು ಆಗಿತ್ತು. ಕಳೆದ ಒಂದು ದಿನದಲ್ಲಿ ೬ ಲಕ್ಷ ಜನರು ಈ ‘ಅಪ್ಲಿಕೇಶನ್’ ಅನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ‘ಡೌನ್‌ಲೋಡ್’ ಮಾಡಿದ್ದಾರೆ. ಬಳಕೆದಾರರು ಈಗ ಈ ಅಪ್ಲಿಕೇಶನ್ ಅನ್ನು ವ್ಯಾಪಕವಾಗಿ ಸ್ವೀಕರಿಸುತ್ತಿರುವುದರಿಂದ ‘ಪ್ರೀ-ಇನ್‌ಸ್ಟಾಲ್’ ಆದೇಶದ ಅಗತ್ಯವಿಲ್ಲ. ಅದು ಸ್ವಯಂಪ್ರೇರಿತವಾಗಿ ಡೌನ್‌ಲೋಡ್ ಮಾಡಲು ಲಭ್ಯವಿರುತ್ತದೆ.’ ‘ಕಳ್ಳತನವಾದ ೨೬ ಲಕ್ಷ ಮೊಬೈಲ್ ಫೋನ್‌ಗಳನ್ನು ಈ ಅಪ್ಲಿಕೇಶನ್ ಸಹಾಯದಿಂದ ಹುಡುಕಲಾಗಿದೆ ಮತ್ತು ೬ ಲಕ್ಷ ವಂಚನೆಯ ಪ್ರಕರಣಗಳನ್ನು ತಡೆಯಲು ಸಾಧ್ಯವಾಗಿದೆ.’

ಈ ಅಪ್ಲಿಕೇಶನ್ ಮೂಲಕ ಬಳಕೆದಾರರ ಮಾತನ್ನು ಕೇಳಲು ಮತ್ತು ಅವರ ಸಂದೇಶಗಳನ್ನು ಓದಲು ಸಾಧ್ಯವಿದೆ ಎಂದು ವಿರೋಧ ಪಕ್ಷಗಳ ವಾದವಾಗಿತ್ತು. ಮೊಬೈಲ್ ಫೋನ್‌ಗಳನ್ನು ತಯಾರಿಸುವ ಪ್ರಮುಖ ತಯಾರಕರಾದ ‘ಆಪಲ್’ ಮತ್ತು ‘ಸ್ಯಾಮ್‌ಸಂಗ್’ ಸಹ ಸರಕಾರದ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದವು.