ರಾಷ್ಟ್ರೀಯ ಸ್ವಯಂಸೇವಕ ಸಂಘ ಒಂದು ರಾಷ್ಟ್ರ ವಿರೋಧಿ ಭಯೋತ್ಪಾದಕ ಸಂಘಟನೆ!'(ಅಂತೆ) Sujat Ambedkar Anti Hindu Statement

ವಂಚಿತ ಬಹುಜನ ಒಕ್ಕೂಟದ ಸುಜಾತ ಅಂಬೇಡ್ಕರ ಅವರ ಹಿಂದೂ ದ್ವೇಷಿ ಹೇಳಿಕೆ!

ನಾಗಪುರ – ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತೀಯ ಸಂವಿಧಾನವನ್ನು ಒಪ್ಪುವುದಿಲ್ಲ. ಸ್ವಾತಂತ್ರ್ಯ ದಿನಾಚರಣೆಯಂದು ಅವರ ಪ್ರಧಾನ ಕಛೇರಿಯ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವುದಿಲ್ಲ. ಈ ಸಂಘಟನೆಯು ಭಾರತೀಯ ಕಾನೂನಿನ ಪ್ರಕಾರ ನೋಂದಾಯಿತವಾಗಿಲ್ಲ. ಆದ್ದರಿಂದ, ಈ ಸಂಘಟನೆಯು ರಾಷ್ಟ್ರವಿರೋಧಿ ಭಯೋತ್ಪಾದಕ ಸಂಘಟನೆಯಾಗಿದೆ ಎಂದು ಹಿಂದೂ ದ್ವೇಷಿ ಹೇಳಿಕೆಯನ್ನು ವಂಚಿತ ಬಹುಜನ ಒಕ್ಕೂಟದ ಸುಜಾತ ಅಂಬೇಡ್ಕರ ಅವರು ನೀಡಿದ್ದಾರೆ. ಅವರು ಮಹಾನಗರ ಪಾಲಿಕೆ ಮತ್ತು ನಗರ ಪಂಚಾಯತ ಚುನಾವಣಾ ಪ್ರಚಾರಕ್ಕಾಗಿ ಇಲ್ಲಿಗೆ ಬಂದಿದ್ದಾಗ, ನಾಗಪುರ ಪತ್ರಕರ್ತರ ಸಂಘದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುತ್ತಿದ್ದರು.

ಈ ಸಂಘಟನೆಯು ನೋಂದಣಿ ಮಾಡಿಕೊಳ್ಳುವವರೆಗೆ, ಸಂವಿಧಾನ ಮತ್ತು ತ್ರಿವರ್ಣ ಧ್ವಜವನ್ನು ಸ್ವೀಕರಿಸುವವರೆಗೆ, ವಂಚಿತ ಬಹುಜನ ಒಕ್ಕೂಟ ಸಂಘದ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದೂ ಅವರು ಹೇಳಿದರು.

ಸಂಪಾದಕೀಯ ನಿಲುವು

ಇಂತಹವರು ಎಂದಾದರೂ ಯಾವುದೇ ಮುಸ್ಲಿಂ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಕರೆಯುವ ಧೈರ್ಯ ತೋರಿಸಿದ್ದಾರೆಯೇ?