ದೆಹಲಿಯಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’

ದೆಹಲಿ – ಗೋವಾದಲ್ಲಿ ನಡೆದ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಯಶಸ್ವಿ ಆಯೋಜನೆಯ ನಂತರ ದೆಹಲಿಯಲ್ಲಿ ಈಗಿನಿಂದಲೇ ಧರ್ಮಜಾಗೃತಿಯ ಒಂದು ಜ್ವಲಂತ ಉತ್ಸಾಹವು ನಿರ್ಮಾಣವಾಗಿದೆ. ಈ ಭವ್ಯ ಆಯೋಜನೆಯ ಸಿದ್ಧತೆಯು ಸಮಾರೋಪಾದಿಯಲ್ಲಿ ಶುರುವಾಗಿದೆ ಮತ್ತು ದೆಹಲಿಯ ಪ್ರಮುಖ ವೃತ್ತಗಳು, ಮುಖ್ಯ ರಸ್ತೆಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಕರ್ಷಕ ಫಲಕಗಳು ರಾರಾಜಿಸಲು ಆರಂಭಿಸಿವೆ. ಈ ಫಲಕಗಳಿಂದಾಗಿ ಸಾಮಾನ್ಯ ಜನರಲ್ಲಿ ಈ ಮಹೋತ್ಸವದ ಬಗ್ಗೆ ಕುತೂಹಲ ಹೆಚ್ಚಾಗಿದೆ.

ದೆಹಲಿಯು ಕೇವಲ ರಾಜಧಾನಿಯಷ್ಟೇ ಅಲ್ಲ, ರಾಷ್ಟ್ರೀಯ ನಿರ್ಧಾರಗಳ ದಿಕ್ಕನ್ನು ನಿರ್ಧರಿಸುವ ಕೇಂದ್ರವಾಗಿರುವುದರಿಂದ, ಇಲ್ಲಿಂದ ಸನಾತನ ಸಂಸ್ಕೃತಿ ಮತ್ತು ರಾಷ್ಟ್ರಭಕ್ತಿಯ ಸಂದೇಶವು ಪರಿಣಾಮಕಾರಿಯಾಗಿ ತಲುಪಬೇಕು ಎಂಬ ಉದ್ದೇಶದಿಂದ ಸನಾತನ ಸಂಸ್ಥೆಯ ಸಾಧಕರೊಂದಿಗೆ ಹಿಂದುತ್ವನಿಷ್ಟರು, ಧರ್ಮಪ್ರೇಮಿಗಳು ಈ ಮಹೋತ್ಸವದ ವಿಚಾರವನ್ನು ಜನರಿಗೆ ತಲುಪಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅವರ ಈ ನಿಸ್ವಾರ್ಥ ಪ್ರಯತ್ನಗಳು ಹಿಂದೂ ರಾಷ್ಟ್ರದ ಸ್ಥಾಪನೆಯ ಗುರಿಯ ಮೇಲಿನ ಅವರ ದೃಢ ನಿಷ್ಠೆಯ ಸಂಕೇತವಾಗಿವೆ.

ಈ ವರ್ಷ ದೆಹಲಿಯಲ್ಲಿ ನಡೆಯಲಿರುವ ಈ ಮಹೋತ್ಸವವು ಧರ್ಮಾಭಿಮಾನ ಮತ್ತು ರಾಷ್ಟ್ರಭಕ್ತಿಗಳ ಭವ್ಯ ಸಮನ್ವಯವನ್ನು ಸಾಧಿಸಲಿದೆ. ಈ ‘ಶಂಖನಾದ’ವು ಇಡೀ ರಾಷ್ಟ್ರಕ್ಕೆ ಹೊಸ ದಿಕ್ಕನ್ನು ನೀಡಲಿದೆ. ದೆಹಲಿಯ ಈ ಸಾಧನೆ ಮತ್ತು ಸಂಘಟನಾ ಶಕ್ತಿಯು ಮುಂಬರುವ ಮಹೋತ್ಸವವನ್ನು ಐತಿಹಾಸಿಕ ಎತ್ತರಕ್ಕೆ ಕೊಂಡೊಯ್ಯಲಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!