ರಾಯಸೇನ (ಮಧ್ಯಪ್ರದೇಶ) ಇಲ್ಲಿ 6 ವರ್ಷದ ಬಾಲಕಿ ಮೇಲೆ ಸಲ್ಮಾನ ಹೆಸರಿನ ಯುವಕನಿಂದ ಬಲಾತ್ಕಾರ :

  • 5 ದಿನಗಳ ನಂತರವೂ ಆರೋಪಿಯನ್ನು ಬಂಧಿಸದ ಕಾರಣ ಹಿಂದುತ್ವನಿಷ್ಠರು ಮತ್ತು ನಾಗರಿಕರಿಂದ ಹಿಂಸಾತ್ಮಕ ಪ್ರತಿಭಟನೆ

  • ಮುಖ್ಯಮಂತ್ರಿ ಮೋಹನ ಯಾದವ ಅವರಿಂದ ಪೊಲೀಸ್ ಅಧೀಕ್ಷಕರ ವರ್ಗಾವಣೆ


ರಾಯಸೇನ (ಮಧ್ಯಪ್ರದೇಶ) – ಇಲ್ಲಿ ನವೆಂಬರ್ 21 ರಂದು ಸಲ್ಮಾನ್ ಹೆಸರಿನ ಮುಸಲ್ಮಾನ ಯುವಕನು 6 ವರ್ಷದ ಬಾಲಕಿಗೆ ಆಸೆ ತೋರಿಸಿ ಕಾಡಿಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ನಂತರ ಆಕೆಯನ್ನು ಕಾಡಿನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. 6 ದಿನಗಳ ನಂತರವೂ ಆತನನ್ನು ಬಂಧಿಸದ ಕಾರಣ ನವೆಂಬರ್ 26 ರಂದು ಹಿಂದುತ್ವನಿಷ್ಠರು ಆಕ್ರೋಶಗೊಂಡರು ಮತ್ತು ಅವರು ಪೊಲೀಸ ಠಾಣೆಯ ಮುಂದೆ ಹಿಂಸಾತ್ಮಕ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಪೊಲೀಸರು ಜನಸಮೂಹದ ಮೇಲೆ ಲಾಠಿ ಪ್ರಹಾರ ಮಾಡಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮೋಹನ ಯಾದವ ಅವರು ಉನ್ನತ ಮಟ್ಟದ ಸಭೆ ನಡೆಸಿ ಅಧಿಕಾರಿಗಳನ್ನು ಕಠಿಣ ಪದಗಳಲ್ಲಿ ತರಾಟೆಗೆ ತೆಗೆದುಕೊಂಡರು. ಅಲ್ಲದೇ, ರಾಯಸೇನ ಪೊಲೀಸ್ ಅಧೀಕ್ಷಕ ಪಂಕಜ ಪಾಂಡೆ ಅವರನ್ನು ವರ್ಗಾವಣೆ ಮಾಡಿದ್ದಾರೆ.

ಹಿಂದುತ್ವ ಭಕ್ತ ಚಳುವಳಿ

1. ಆರೋಪಿ ಸಲ್ಮಾನ ಅಪರಾಧ ಮಾಡುವ 8 ದಿನಗಳ ಮುಂಚೆಯೇ ತನ್ನ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿದ್ದನು. ಆದ್ದರಿಂದ ಈ ಘಟನೆಯನ್ನು ಮೊದಲೇ ಯೋಜಿಸಲಾಗಿತ್ತು ಎಂಬ ಸಂಶಯ ವ್ಯಕ್ತವಾಗಿದೆ. ಸಂತ್ರಸ್ತ ಬಾಲಕಿಗೆ ಭೋಪಾಲನ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

2. ಇಲ್ಲಿನ ಮಂಡದೀಪ ಪ್ರದೇಶದ ಗೌಹರಗಂಜ ಪೊಲೀಸ್ ಠಾಣೆಯ ಹೊರಗೆ ಸತತ 5 ನೇ ದಿನವೂ ಸ್ಥಳೀಯ ನಾಗರಿಕರು, ಮಹಿಳೆಯರು ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ಪ್ರತಿಭಟನೆ ನಡೆಸಿದರು. ಅವರು ಆರೋಪಿಯನ್ನು ಕೊಲ್ಲಬೇಕೆಂದು ಬೇಡಿಕೆ ಇಟ್ಟರು. ಸಲ್ಮಾನ್ ಬಗ್ಗೆ ಮಾಹಿತಿ ನೀಡಿದವರಿಗೆ 30 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ.

ಸಂಪಾದಕೀಯ ನಿಲುವು

  • ಪೊಲೀಸರ ನಿಷ್ಕ್ರಿಯತೆಯಿಂದ ಸಮಾಜವು ಹಿಂಸಾತ್ಮಕವಾಗುತ್ತಿದ್ದರೆ, ಅದು ಸಮಾಜದ ತಪ್ಪಲ್ಲ, ಪೊಲೀಸರ ತಪ್ಪು.
  • ಬಲಾತ್ಕಾರಿಗಳ ವಿರುದ್ಧ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ವಿಧಿಸುವ ಕಾನೂನನ್ನು ರೂಪಿಸುವುದು ಅತ್ಯಾವಶ್ಯಕವಾಗಿದೆ!