ಸಾಮಾಜಿಕ ಮಾಧ್ಯಮಗಳಲ್ಲಿ ಶಂಖ ಊದುವ ವೀಡಿಯೊಗಳನ್ನು ಮಾಡುವ ‘ಟ್ರೆಂಡ್’! : SRSmahotsav Delhi 2025

ನವದೆಹಲಿಯಲ್ಲಿ ಡಿಸೆಂಬರ್ 13 ಮತ್ತು 14 ರಂದು ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಯೋಜನೆ!

(‘ಟ್ರೆಂಡ್’ ಎಂದರೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಲ್ಲಿರುವ ವಿಷಯ)

ನವದೆಹಲಿ – ನವದೆಹಲಿಯ ‘ಭಾರತ್ ಮಂಟಪಂ’ನಲ್ಲಿ ಡಿಸೆಂಬರ್ 13 ರಿಂದ 15 ರವರೆಗೆ ಆಯೋಜಿಸಲಾಗಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಕುತೂಹಲವು ಎಲ್ಲಾ ಸ್ತರಗಳಲ್ಲಿ ಹೆಚ್ಚುತ್ತಿದೆ. ಶಂಖನಾದ ಮಹೋತ್ಸವದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ‘#liveShankhnadChallenge’ ಎಂಬ ‘ಹ್ಯಾಶ್‌ಟ್ಯಾಗ್’ ಮೂಲಕ (‘ಹ್ಯಾಶ್‌ಟ್ಯಾಗ್’ ಎಂದರೆ ಸಾಮಾಜಿಕ ಮಾಧ್ಯಮಗಳಲ್ಲಿ ಒಂದೇ ವಿಷಯದ ಮೇಲೆ ಚರ್ಚೆ ನಡೆಸುವುದು) ಒಂದು ಅಭಿಯಾನ ನಡೆಯುತ್ತಿದ್ದು, ಆಸಕ್ತರು ಸ್ವತಃ ಶಂಖ ಊದಿ, ಅದರ ವೀಡಿಯೊ ತಯಾರಿಸಿ ಅದನ್ನು ಶಂಖನಾದ ಮಹೋತ್ಸವದ ‘ಇನ್‌ಸ್ಟಾಗ್ರಾಮ್’ ಖಾತೆಗೆ ಕಳುಹಿಸಬೇಕೆಂದು ಆಹ್ವಾನಿಸಲಾಗಿದೆ.

ಫೇಸ್‌ಬುಕ್, ಎಕ್ಸ್ (ಟ್ವಿಟರ್) ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಕುರಿತು ಅನೇಕ ವೀಡಿಯೊಗಳು ಮತ್ತು ಚಿತ್ರಗಳು ಪ್ರಸಾರವಾಗುತ್ತಿದ್ದು, ಹಿಂದುತ್ವನಿಷ್ಠರು ಮತ್ತು ಧರ್ಮಾಭಿಮಾನಿಗಳು ಅವುಗಳ ಪ್ರಚಾರ ಮಾಡುತ್ತಿದ್ದಾರೆ.