ಅಸ್ಸಾಂ: ಅಕ್ಬರ್ ಮತ್ತು ಟಿಪ್ಪು ಅವರನ್ನು ‘ಮಹಾನ್’ ಎಂದು ಹೇಳುವ ಪದವನ್ನು ತೆಗೆದ ಎನ್.ಸಿ.ಇ.ಆರ್.ಟಿ!

ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಬೆಂಬಲ

(ಎನ್.ಸಿ.ಇ.ಆರ್.ಟಿ. ಎಂದರೆ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ)

ಗುವಾಹಟಿ (ಅಸ್ಸಾಂ) – ರಾಷ್ಟ್ರೀಯ ಸ್ವಯಂಸೇವಕ ಸಂಘದ ಪದಾಧಿಕಾರಿಗಳಾದ ಸುನೀಲ್ ಅಂಬೇಕರ್ ಅವರು ಎನ್.ಸಿ.ಇ.ಆರ್.ಟಿ. ಇತಿಹಾಸದ ಪಠ್ಯಪುಸ್ತಕಗಳಲ್ಲಿ ಕೆಲವು ಬದಲಾವಣೆಗಳನ್ನು ಹೇಳಿದ್ದರು. ಮೊಘಲ್ ಚಕ್ರವರ್ತಿ ಅಕ್ಬರ್ ಅಥವಾ ಮೈಸೂರಿನ ಆಡಳಿತಗಾರ ಟಿಪ್ಪು ಸುಲ್ತಾನ್ ಅವರ ಹೆಸರಿನ ಮುಂದೆ ‘ಮಹಾನ್’ ಎಂಬ ಪದ ಬಳಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇತಿಹಾಸ ಪುಸ್ತಕದಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ; ಆದರೆ ಯಾರ ಹೆಸರನ್ನೂ ತೆಗೆಯಲಿಲ್ಲ; ಯಾಕೆಂದರೆ ಮುಂದಿನ ಪೀಳಿಗೆಗೆ ಇಂತಹ ರಾಜರ ಕುಕೃತ್ಯಗಳ ಬಗ್ಗೆ ಮಾಹಿತಿ ಸಿಗಬೇಕು. ನಾವು ಯಾರಿಂದ ಶೋಷಣೆಗೆ ಒಳಗಾದೆವು ಮತ್ತು ಯಾರಿಂದ ಮುಕ್ತರಾಗಬೇಕೆಂಬುದು ಮುಂದಿನ ಪೀಳಿಗೆ ಅರ್ಥಮಾಡಿಕೊಳ್ಳಬೇಕು.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಎನ್.ಸಿ.ಇ.ಆರ್.ಟಿ. ಸರಿಯಾದ ಕೆಲಸ ಮಾಡಿದೆ ಎಂದು ಅವರು ಶ್ಲಾಘಿಸಿದರು. “ನಾನು ವೈಯಕ್ತಿಕವಾಗಿ ನೋಡಲಿಲ್ಲ; ಆದರೆ ಅವರು ಈ ಕೆಲಸ ಮಾಡಿದ್ದರೆ, ನನ್ನ ಕಡೆಯಿಂದ ಅವರಿಗೆ ಧನ್ಯವಾದಗಳು” ಎಂದು ಶರ್ಮಾ ಹೇಳಿದರು.