ದೆಹಲಿ ಗಲಭೆಗಳ ಮೂಲಕ ಭಾರತದಲ್ಲಿ ಸರಕಾರ ಬದಲಾಯಿಸುವ ಸಂಚು ಇತ್ತು. – Conspiracy to Change Government in India

  • ದೆಹಲಿ ಪೊಲೀಸರಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಕೆ

  • ನೇಪಾಳ ಮತ್ತು ಬಾಂಗ್ಲಾದೇಶಗಳಲ್ಲಿ ಇದೇ ರೀತಿ ಅಧಿಕಾರ ಬದಲಾವಣೆಗಳಾಗಿವೆಯೆಂದು ಮಾಹಿತಿ ನೀಡಿದ್ದಾರೆ.

ನವದೆಹಲಿ: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ 2020 ರಲ್ಲಿ ದೆಹಲಿಯಲ್ಲಿ ನಡೆದ ಚಳುವಳಿಯು ಕೇವಲ ಸಾಧಾರಣ ಧರಣಿ ಅಥವಾ ಪ್ರತಿಭಟನೆ ಆಗಿರಲಿಲ್ಲ. ಈ ಆಂದೋಲನದ ಹೆಸರಿನಲ್ಲಿ ಗಲಭೆಗಳನ್ನು ಸೃಷ್ಟಿಸಿ, ಆ ಮೂಲಕ ಸರಕಾರವನ್ನು ಬದಲಾಯಿಸುವ ಸಂಚು ರೂಪಿಸಲಾಗಿತ್ತು. ಬಾಂಗ್ಲಾದೇಶ ಮತ್ತು ನೇಪಾಳ ದೇಶಗಳಲ್ಲೂ ನಂತರ ಇದೇ ರೀತಿಯ ಪ್ರಯತ್ನಗಳನ್ನು ಮಾಡಲಾಯಿತು. ದೆಹಲಿ ಗಲಭೆಗಳ ಸಮಯದಲ್ಲಿ ಪ್ರತಿಭಟನೆಗೆ ಬಂದ ಜನರು ಕೋಲುಗಳು ಮತ್ತು ಆಮ್ಲದ (ಆ್ಯಸಿಡ್) ಬಾಟಲಿಗಳನ್ನು ಹಿಡಿದು ಬಂದಿದ್ದರು. ಅವರು ದೊಡ್ಡ ದಾಳಿಗೆ ಸಿದ್ಧತೆ ಮಾಡಿಕೊಂಡು ಬಂದಿದ್ದರು ಎಂದು ದೆಹಲಿ ಪೊಲೀಸರು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಿದ್ದಾರೆ.

ಪೊಲೀಸರು ಸರ್ವೋಚ್ಚ ನ್ಯಾಯಾಲಯದಲ್ಲಿ ಉಮರ ಖಾಲಿದ್ ನನ್ನು ‘ದೇಶದ್ರೋಹಿಗಳ ಬೆಂಬಲಿಗ’ ಎಂದು ಕರೆದಿದ್ದಾರೆ.

1. ವಿಚಾರಣೆಯ ಸಮಯದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು, ಈ ಪ್ರಕರಣ ವಿಳಂಬವಾಗುತ್ತಿರುವುದರಿಂದ ಆರೋಪಿಗಳ ಜಾಮೀನು ಮಂಜೂರಾಗಿಲ್ಲ. ಇದಕ್ಕೆ ಆರೋಪಿಗಳೇ ಸ್ವತಃ ಜವಾಬ್ದಾರರು. ಅವರು ಸಹಕರಿಸಿದರೆ, ಎರಡು ವರ್ಷಗಳಲ್ಲಿ ಎಲ್ಲವೂ ಮುಗಿಯುತ್ತದೆ ಎಂದು ಹೇಳಿದರು.

2. ಈ ವಿಚಾರಣೆಯಲ್ಲಿ ಶರಜೀಲ ಇಮಾಮ್ ಅವರ ಪ್ರಚೋದನಕಾರಿ ಭಾಷಣಗಳನ್ನು ಉಲ್ಲೇಖಿಸಲಾಗಿದೆ. ಜೊತೆಗೆ, ಉಮರ ಖಾಲಿದ್ ಅವರ ಮೇಲೆ ‘ಭಾರತ ತೇರೇ ತುಕ್ಡೇ ಹೋಂಗೆ’ ಎಂಬ ಘೋಷಣೆಗಳನ್ನು ಕೂಗಿದ ಆರೋಪವನ್ನು ಪುನರುಚ್ಚರಿಸಲಾಯಿತು. ಖಾಲಿದ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ.

3. ಖಾಲಿದ್ ಅನೇಕ ಮುಸ್ಲಿಂ ವಿದ್ಯಾರ್ಥಿಗಳ ವಾಟ್ಸ್ ಆ್ಯಪ್ ಗುಂಪುಗಳನ್ನು ರಚಿಸಿದ್ದ ವಿಷಯ ಪೊಲೀಸ ತನಿಖೆಯಲ್ಲಿ ಬಹಿರಂಗವಾಗಿದೆಯೆಂದು ರಾಜು ಅವರು ಹೇಳಿದರು.

4. ಪೊಲೀಸರು ಈ ಸಂದರ್ಭದಲ್ಲಿ ತಾಹಿರ್ ಹುಸೇನ್, ಇಶ್ರತ್ ಜಹಾನ್, ಖಾಲಿದ್ ಸೈಫಿ, ಶಿಫಾ ಉರ್ ರೆಹಮಾನ್ ಮತ್ತು ಮೀರಾನ್ ಹೈದರ್ ಅವರ ಮೇಲೆ ಗಲಭೆಗಳಿಗಾಗಿ ಹಣಕಾಸು ಒದಗಿಸಿರುವ ಆರೋಪ ಹೊರಿಸಿದ್ದಾರೆ. ತಾಹಿರ್ ಹುಸೇನ್ 1 ಕೋಟಿ 30 ಲಕ್ಷ ಮತ್ತು ಶಿಫಾ 89 ಲಕ್ಷ ನೀಡಿರುವ ಆರೋಪವಿದೆ.

ಸಂಪಾದಕೀಯ ನಿಲುವು

ಈ ಸಂಚಿನ ಹಿಂದೆ ಇರುವ ಪ್ರತಿಯೊಬ್ಬರಿಗೂ ಗಲ್ಲು ಶಿಕ್ಷೆ ನೀಡಿದರೆ, ಮುಂದೆ ಇಂತಹ ಸಂಚು ರೂಪಿಸಲು ಯಾರೂ ಪ್ರಯತ್ನಿಸುವುದಿಲ್ಲ!