ಆಫ್ಘಾನಿಸ್ತಾನದ ತಾಲಿಬಾನ್ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರ ೫ ದಿನಗಳ ಭಾರತ ಪ್ರವಾಸ ! : India-Afghan Trade

ಪಾಕಿಸ್ತಾನದೊಂದಿಗೆ ವ್ಯಾಪಾರ ಸ್ಥಗಿತಗೊಂಡ ನಂತರ ಈ ಪ್ರವಾಸ ಆಫ್ಘಾನಿಸ್ತಾನಕ್ಕೆ ಐತಿಹಾಸಿಕ!

ನವದೆಹಲಿ – ಕಳೆದ ತಿಂಗಳಲ್ಲಿ ಆಫ್ಘಾನಿಸ್ತಾನದ ತಾಲಿಬಾನ್ ಸರಕಾರದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರ ಭಾರತ ಭೇಟಿಯ ನಂತರ, ಈಗ ಅವರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಅಲ್ಹಾಜ್ ನೂರುದ್ದೀನ್ ಅಝೀಝಿ ಈಗ ೫ ದಿನಗಳ ಭಾರತ ಪ್ರವಾಸಕ್ಕೆ ಬಂದಿದ್ದಾರೆ. ನವೆಂಬರ್ ೧೯ ರಿಂದ ಪ್ರಾರಂಭವಾದ ಈ ಪ್ರವಾಸ ನವೆಂಬರ್ ೨೩ ರವರೆಗೆ ನಡೆಯಲಿದೆ. ಈ ಭೇಟಿಯ ಸಮಯದಲ್ಲಿ, ಅಝೀಝಿ ಅವರು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರನ್ನೂ ಭೇಟಿ ಮಾಡಲಿದ್ದಾರೆ.

. ಈ ಭೇಟಿಯ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಮಾತನಾಡಿ, ಎರಡೂ ದೇಶಗಳ ನಡುವೆ ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

. ಭಾರತವು ಇತ್ತೀಚೆಗೆ ಕಾಬೂಲ್‌ನಲ್ಲಿ ತನ್ನ ರಾಯಭಾರ ಕಚೇರಿಯನ್ನು ಮರು ಸ್ಥಾಪಿಸಿದೆ.

. ಪ್ರಸ್ತುತ, ಭಾರತವು ಆಫ್ಘಾನಿಸ್ತಾನದ ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಒಂದಾಗಿದೆ. ಭಾರತವು ಆಫ್ಘಾನಿಸ್ತಾನಕ್ಕೆ ಔಷಧಗಳು, ಬಟ್ಟೆ, ಸಕ್ಕರೆ, ಚಹಾ, ಅಕ್ಕಿ ಮತ್ತು ಯಂತ್ರೋಪಕರಣಗಳನ್ನು ರಫ್ತು ಮಾಡುತ್ತದೆ, ಆದರೆ ಒಣ ಹಣ್ಣುಗಳು, ಹಣ್ಣುಗಳು ಮತ್ತು ಖನಿಜಗಳನ್ನು ಆಮದು ಮಾಡಿಕೊಳ್ಳುತ್ತದೆ.

ಉದ್ವಿಗ್ನತೆಯಿಂದಾಗಿ ಆಫ್ಘಾನಿಸ್ತಾನ-ಪಾಕಿಸ್ತಾನ ವ್ಯಾಪಾರ ಸ್ಥಗಿತ!

ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ, ವ್ಯಾಪಾರಕ್ಕಾಗಿ ಗಡಿಗಳನ್ನು ಮುಚ್ಚಿರುವ ಈ ಸಮಯದಲ್ಲಿ ತಾಲಿಬಾನ್ ಸಚಿವರು ಭಾರತ ಭೇಟಿ ನಡೆಸುತ್ತಿದ್ದಾರೆ. ತಾಲಿಬಾನ್ ಸರಕಾರವು ವ್ಯಾಪಾರಕ್ಕಾಗಿ ಇತರ ಆಯ್ಕೆಗಳನ್ನು ಹುಡುಕುತ್ತಿರುವುದರಿಂದ, ಈ ಪ್ರವಾಸವು ಆಫ್ಘಾನಿಸ್ತಾನಕ್ಕೆ ಐತಿಹಾಸಿಕ ಎಂದು ಪರಿಗಣಿಸಲಾಗಿದೆ. ಪಾಕಿಸ್ಥಾನವು ತನ್ನ ಗಡಿಗಳನ್ನು ಮುಚ್ಚಿರುವುದು, ‘ಆರ್ಥಿಕ ಯುದ್ಧ’ವಾಗಿದೆ ಎಂದು ತಾಲಿಬಾನ್ ಸರಕಾರದ ಉಪ ಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರಾದರ್ ಈ ಹಿಂದೆ ಹೇಳಿದ್ದರು.