ಭಯೋತ್ಪಾದಕ ಚಟುವಟಿಕೆಗಳಿಗೆ ಡಾ. ಶಾಹೀನಳಿಗೆ ತಬ್ಲೀಘಿ ಜಮಾತ್ ನಿಂದ ನಿಧಿ ನೆರವು!

(ತಬ್ಲೀಘಿ ಜಮಾತ್ ಎಂದರೆ ಮುಸಲ್ಮಾನರಲ್ಲಿ ಧಾರ್ಮಿಕ ಆಚಾರ-ವಿಚಾರಗಳನ್ನು ಹೆಚ್ಚಿಸಲು ಪ್ರಚಾರ ಮಾಡುವ ಒಂದು ಇಸ್ಲಾಮಿ ಧಾರ್ಮಿಕ ಚಳುವಳಿ)

ನವ ದೆಹಲಿ – ಜಿಹಾದಿ ವೈದ್ಯರ ಭಯೋತ್ಪಾದಕ ಗುಂಪಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಡಾ. ಶಾಹೀನ ಮತ್ತು ತಬ್ಲೀಘಿ ಜಮಾತ್ ನಡುವಿನ ಸಂಬಂಧಗಳು ಹೊರಬಿದ್ದಿವೆ. ಡಾ. ಶಾಹೀನಳಿಗೆ ತಬ್ಲೀಘಿ ಜಮಾತನಿಂದ ಭಯೋತ್ಪಾದಕ ಚಟುವಟಿಕೆಗಳಿಗಾಗಿ ಹಣಕಾಸಿನ ನೆರವು ಆಗುತ್ತಿತ್ತು. ಈ ಹಣದಿಂದಲೇ ಬಾಂಬ್ ತಯಾರಿಸಲು ಸ್ಫೋಟಕಗಳನ್ನು ಖರೀದಿಸಲಾಗಿತ್ತು ಎಂಬ ಮಾಹಿತಿ ತನಿಖಾ ಸಂಸ್ಥೆಗಳಿಗೆ ದೊರೆತಿದೆ. ಈ ಮಾಹಿತಿ ಲಭ್ಯವಾದ ನಂತರ, ಈಗ ತಬ್ಲೀಘಿ ಜಮಾತ್ ಗೆ ಪ್ರತಿಯೊಬ್ಬ ವ್ಯಕ್ತಿಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಛಾಯಾಚಿತ್ರಗಳನ್ನು ಗುಪ್ತಚರ ಇಲಾಖೆ ಮತ್ತು ಭಯೋತ್ಪಾದನಾ ನಿಗ್ರಹ ತಂಡಕ್ಕೆ ನೀಡುವಂತೆ ಆದೇಶಿಸಲಾಗಿದೆ. ಕೊರೋನಾ ಸಾಂಕ್ರಾಮಿಕದ ಮುನ್ನವೂ ಇಂತಹ ನಿಗಾ ಇಡಲಾಗುತ್ತಿತ್ತು; ಆದರೆ ನಂತರ ಅದರಲ್ಲಿ ಸ್ವಲ್ಪ ಶಿಥಿಲಗೊಳಿಸಲಾಗಿತ್ತು.

1. ಕಳೆದ 7 ವರ್ಷಗಳಲ್ಲಿ ಡಾ. ಶಾಹೀನ್ ಳ 7 ಬ್ಯಾಂಕ್ ಖಾತೆಗಳಲ್ಲಿ 1 ಕೋಟಿ 55 ಲಕ್ಷ ರೂಪಾಯಿಗಳ ಹಣಕಾಸಿನ ವಹಿವಾಟು ನಡೆದಿದೆ. ಇದರಲ್ಲಿ 2014 ರಲ್ಲಿ 9 ಲಕ್ಷ, 2015 ರಲ್ಲಿ 6 ಲಕ್ಷ, 2016 ರಲ್ಲಿ 11 ಲಕ್ಷ ಮತ್ತು 2017 ರಲ್ಲಿ 19 ಲಕ್ಷ ರೂಪಾಯಿಗಳ ವರ್ಗಾವಣೆ ಆಗಿದೆ. ಈಗ ಈ ಹಣವನ್ನು ಯಾರಿಗೆ ಕಳುಹಿಸಲಾಗಿದೆ ಮತ್ತು ಯಾರಿಗೆ ನೀಡಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

2. ಭಯೋತ್ಪಾದಕರ ತನಿಖೆಯಲ್ಲಿ 25 ರಿಂದ 30 ಮೊಬೈಲ್ ಸಂಖ್ಯೆಗಳು ಪತ್ತೆಯಾಗಿದ್ದು, ಅವುಗಳು ಸ್ಥಗಿತಗೊಂಡಿವೆ. ಶ್ರೀನಗರ, ಪಹಲ್ಗಾಮ್, ಪಠಾಣಕೋಟ್, ದೆಹಲಿ, ಸಹಾರನಪುರ, ಹಾಪುಡ್, ಮೊರಾದಾಬಾದ, ಬಿಜನೋರ್ ಸೇರಿದಂತೆ ದುಬೈ, ಓಮಾನ್ ವರೆಗೂ ಭಯೋತ್ಪಾದಕರ ಸಂಪರ್ಕ ಇರುವುದು ತಿಳಿದುಬಂದಿದೆ. ಇಲ್ಲಿ ಭಯೋತ್ಪಾದಕರು ರಹಸ್ಯವಾಗಿ ಸಭೆಗಳಲ್ಲಿ ಭಾಗವಹಿಸಿದ್ದರು. ಗುಪ್ತಚರ ಸಂಸ್ಥೆಗಳಿಗೆ ಇಸ್ಲಾಮಿಕ್ ದೇಶಗಳಲ್ಲಿರುವ ಕೆಲವು ಸಂಸ್ಥೆಗಳ ಬಗ್ಗೆ ಮಾಹಿತಿ ದೊರೆತಿದೆ. ಈ ಸಂಸ್ಥೆಗಳ ಖಾತೆಗಳ ತನಿಖೆಯು ಪ್ರಗತಿಯಲ್ಲಿದೆ.

ತಬ್ಲೀಘಿ ಜಮಾತ್‌ನಿಂದ ‘ಜಕಾತ್’ ಹಣ ಭಯೋತ್ಪಾದಕರಿಗೆ ಪೂರೈಕೆ!

ತಬ್ಲೀಘಿ ಜಮಾತ್ ಗೆ ‘ಜಕಾತ್’ ಮೂಲಕ ಹಣವು ಲಭ್ಯವಾಗುತ್ತದೆ. (ಜಕಾತ್ ಎಂದರೆ ಮುಸಲ್ಮಾನರು ತಮ್ಮ ಸಂಪತ್ತಿನ ಒಂದು ಭಾಗವನ್ನು ಧರ್ಮ ಕಾರ್ಯಕ್ಕಾಗಿ ದಾನ ಮಾಡುವುದು). ಇದೇ ಹಣವನ್ನು ತಬ್ಲೀಘಿ ಜಮಾತ್ ಡಾ. ಶಾಹೀನಳಿಗೆ ನೀಡಿರುವ ಮಾಹಿತಿ ಲಭ್ಯವಾಗಿದೆ.

ಸಂಪಾದಕೀಯ ನಿಲುವು

ಈಗ ‘ತಬ್ಲೀಘಿ ಜಮಾತ್’ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ, ಭಾರತದಲ್ಲಿ ನಿಷೇಧಿಸುವ ಅವಶ್ಯಕತೆಯಿದೆ. ಕೊರೋನಾ ಸಾಂಕ್ರಾಮಿಕದ ಅವಧಿಯಲ್ಲೂ ಈ ಸಂಘಟನೆಯು ಕೊರೋನಾ ಹರಡಲು ಕಾರಣವಾಯಿತು ಎಂಬ ಆರೋಪ ಕೇಳಿಬಂದಿತ್ತು!