ಅಲ್-ಫಲಾಹ್ ವಿಶ್ವವಿದ್ಯಾಲಯದ ಸಮಗ್ರ ತನಿಖೆ ನಡೆಸಿದರೆ ದೊಡ್ಡ ಪಿತೂರಿ ಬಯಲಾಗಬಹುದು! : Delhi Blast

  • ಅಲ್-ಫಲಾಹ್ ವಿಶ್ವ ವಿದ್ಯಾಲಯದ ಡಾ. ಮೋನಿಕಾ ಲಾಂಗೇಹ್ ಅವರ ಬೇಡಿಕೆ

  • ವಿಶ್ವ ವಿದ್ಯಾಲಯದಲ್ಲಿ ಭಯೋತ್ಪಾದಕ ವೈದ್ಯರಿಂದ ಹಿಂದೂ ವಿದ್ಯಾರ್ಥಿಗಳಿಗೆ ಹಿಂಸಿಸಲಾಗುತ್ತಿತ್ತು!

ಭಯೋತ್ಪಾದಕ ಡಾ. ಮುಜಮ್ಮಿಲ್ (ಎಡ) ಮತ್ತು ಡಾ. ಮೋನಿಕಾ ಲ್ಯಾಂಗೆ (ಬಲ) (ಛಾಯಾಚಿತ್ರ ಕೃಪೆ: ZNews)

ನವದೆಹಲಿ – ದೆಹಲಿಯ ಕೆಂಪುಕೋಟೆಯ ಬಳಿ ಜಿಹಾದಿ ಭಯೋತ್ಪಾದಕರು ನಡೆಸಿದ ಬಾಂಬ್ ಸ್ಫೋಟದಲ್ಲಿ ಭಾಗಿಯಾದ ಬಹುತೇಕ ಭಯೋತ್ಪಾದಕರು ವೈದ್ಯರಾಗಿದ್ದು, ಅವರು ಹರಿಯಾಣದ ಫರಿದಾಬಾದನಲ್ಲಿರುವ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿದ್ದರು ಹಾಗೂ ಕೆಲವರು ವಿದ್ಯಾರ್ಥಿಗಳಾಗಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ವೈದ್ಯರಾದ ಡಾ. ಮೋನಿಕಾ ಲಾಂಗೇಹ್ ಅವರು, ಬಂಧಿತ ಭಯೋತ್ಪಾದಕ ವೈದ್ಯರು ವಿಶ್ವವಿದ್ಯಾಲಯದಲ್ಲಿ ನಿರ್ದಿಷ್ಟವಾಗಿ ಹಿಂದೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಹಿಂಸಿಸುತ್ತಿದ್ದರು ಇದರಿಂದಾಗಿ ಓರ್ವ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಳು. ಆದ್ದರಿಂದ, ಸರಕಾರವು ಅಲ್-ಫಲಾಹ್ ಕುರಿತು ಸಮಗ್ರ ತನಿಖೆ ನಡೆಸಿದರೆ, ದೊಡ್ಡ ಭಯೋತ್ಪಾದಕ ಪಿತೂರಿ ಬಯಲಾಗಬಹುದು. ಕಾಶ್ಮೀರಕ್ಕೆ ಸಂಬಂಧಿಸಿದ ಹಲವು ಸಾಕ್ಷ್ಯಗಳು ಅಲ್ಲಿ ಲಭ್ಯವಾಗಬಹುದು ಎಂದು ತಿಳಿಸಿದ್ದಾರೆ.

ಡಾ. ಮೋನಿಕಾ ಅವರ ಅಭಿಪ್ರಾಯದಂತೆ,

ಅಲ್ಲಿನ ಕೆಲವು ವೈದ್ಯರು ಮುಸ್ಲಿಂ ವಿದ್ಯಾರ್ಥಿಗಳ ಮನಃಸ್ಥಿತಿಯನ್ನು ಬದಲಾಯಿಸಿ, ಅವರನ್ನು ಜಿಹಾದಿ ಸಂಘಟನೆಗಳಿಗೆ ಸೆಳೆಯುವ ಕೆಲಸ ಮಾಡುತ್ತಿದ್ದರು.

ಭಾರತೀಯ ಸೈನಿಕರ ಮರಣಕ್ಕೆ ಸಂತೋಷ ಆಚರಿಸಲಾಗುತ್ತಿತ್ತು!

ಡಾ. ಮೋನಿಕಾ ಅವರು ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ತಮ್ಮ ಆದೇಶಗಳನ್ನು ಪಾಲಿಸದಿದ್ದರೆ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವ ಬೆದರಿಕೆ ಹಾಕಲಾಗುತ್ತಿತ್ತು. ಡಾ. ಮುಜಮ್ಮಿಲ್ ವಿದ್ಯಾರ್ಥಿಗಳ ಮೇಲೆ ನಿರಂತರವಾಗಿ ಮಾನಸಿಕ ಒತ್ತಡ ಹೇರುತ್ತಿದ್ದರು. ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳನ್ನೇ ಗುರಿಯಾಗಿಸಲಾಗುತ್ತಿತ್ತು. ಹಲವು ವಿದ್ಯಾರ್ಥಿನಿಯರು ಒತ್ತಡದಿಂದ ನರಳುತ್ತಿದ್ದರು, ಕೆಲವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು, ಮತ್ತು ಒಬ್ಬಳು ಸಾವಿಗೀಡಾಗಿದ್ದಳು. ಭಾರತದ ಸೈನಿಕರು ಗಡಿಯಲ್ಲಿ ವೀರಮರಣ ಹೊಂದಿದಾಗ, ಈ ಜನರು ವಿಶ್ವವಿದ್ಯಾಲಯದಲ್ಲಿ ಸಂತೋಷ ವ್ಯಕ್ತಪಡಿಸುತ್ತಿದ್ದರು. ಈ ಭಯೋತ್ಪಾದಕ ವೈದ್ಯರು ಪ್ಯಾಲೆಸ್ಟೈನ್ ಮತ್ತು ಗಾಜಾಗೆ ಬೆಂಬಲ ನೀಡುತ್ತಿದ್ದರು ಎಂದು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ‘ಲವ್ ಜಿಹಾದ್’

ಡಾ. ಮೋನಿಕಾ ಅವರು, ಕಾಶ್ಮೀರದ ಪರಿಸ್ಥಿತಿ ಈಗಲೂ ಬಹಳ ಗಂಭೀರವಾಗಿದೆ. ವಿಶ್ವವಿದ್ಯಾಲಯದಲ್ಲಿನ ಉಗ್ರ ಪ್ರವೃತ್ತಿಯ ಜನರು ಪಾಕಿಸ್ತಾನದ ಜೊತೆಗೆ ಭಾರತ ವಿರೋಧಿ ಗುಂಪುಗಳನ್ನು ಬೆಂಬಲಿಸುತ್ತಿದ್ದರು. ಡಾ. ಮುಜಮ್ಮಿಲ್ ಮೊದಲಿನಿಂದಲೂ ಭಾರತ ವಿರೋಧಿ ವಿಚಾರಗಳನ್ನು ಪ್ರತಿಪಾದಿಸುತ್ತಿದ್ದರು ಮತ್ತು ಹೆಚ್ಚಿನ ಪ್ರಮಾಣದಲ್ಲಿ ‘ಲವ್ ಜಿಹಾದ್’ ನಡೆಯುತ್ತಿದೆ ಎಂದು ಹೇಳುತ್ತಿದ್ದರು.

ಡಾ. ಮುಜಮ್ಮಿಲ್ ಮತ್ತು ಮೋನಿಕಾ ಒಂದೇ ವೈದ್ಯಕೀಯ ಕಾಲೇಜಿನಲ್ಲಿ ಓದಿದ್ದರು. ಕೆಂಪುಕೋಟೆ ಸ್ಫೋಟದ ಪಿತೂರಿಯ ಪ್ರಮುಖ ಆರೋಪಿಗಳಲ್ಲಿ ಮುಜಮ್ಮಿಲ್ ಕೂಡ ಒಬ್ಬನಾಗಿದ್ದಾನೆ. ಆತ ಡಾ. ಮೋನಿಕಾ ಅವರ ಕಿರಿಯ ವಿದ್ಯಾರ್ಥಿಯಾಗಿದ್ದ.

ಸಂಪಾದಕೀಯ ನಿಲುವು

ಇಂತಹ ಘಟನೆಗಳು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದರೂ ಪೊಲೀಸರಿಗೆ ಹೇಗೆ ತಿಳಿಯಲಿಲ್ಲ? ಇಂತಹ ಘಟನೆಗಳು ಇನ್ನು ಎಷ್ಟು ಇಸ್ಲಾಮಿಕ್ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿವೆ ಎಂಬುದನ್ನು ಈಗ ಪತ್ತೆ ಮಾಡಬೇಕು!