ಹಿಂದೂ ಧರ್ಮದಲ್ಲಿ ಹಸುವನ್ನು ಪವಿತ್ರವೆಂದು ಪರಿಗಣಿಸಲಾಗಿದ್ದರೂ, ಗೋಹತ್ಯೆ ಮಾಡಲಾಯಿತು! – ಸೆಷನ್ಸ್ ನ್ಯಾಯಾಧೀಶೆ ರಿಜ್ವಾನಾ ಬುಖಾರಿ

ಅಮ್ರೇಲಿ (ಗುಜರಾತ್) – ಅಮ್ರೇಲಿ ಜಿಲ್ಲೆಯ ಸೆಷನ್ಸ್ ನ್ಯಾಯಾಲಯವು ನವೆಂಬರ್ 10 ರಂದು ಗೋಹತ್ಯೆ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಹಿಂದೂ ಧರ್ಮದಲ್ಲಿ ಹಸುವನ್ನು ಪವಿತ್ರವೆಂದು ಪರಿಗಣಿಸಲಾಗಿದೆ ಎಂಬುದು ತಿಳಿದಿದ್ದರೂ ಸಹ, ಮೂವರು ಉದ್ದೇಶಪೂರ್ವಕವಾಗಿ ಈ ಅಪರಾಧ ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಈ ತೀರ್ಪನ್ನು ರಾಜ್ಯ ಸರಕಾರವು ‘ಐತಿಹಾಸಿಕ ನಿರ್ಧಾರ’ ಎಂದು ಬಣ್ಣಿಸಿದ್ದು, ‘ಇಂತಹ ಅಪರಾಧಗಳ ಮೇಲೆ ಯಾವುದೇ ಮೃದುತ್ವವನ್ನು ತೋರಿಸಲಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.
Strong Message from Gujarat – Cow Killers Get Life in Jail
Gujarat court sentences Kasim, Sattar & Akram Solanki to life imprisonment for cow slaughter ⚖️
Judge Rizwana Bukhari noted: “They knew the cow is sacred in the Hindu religion, yet they slaughtered it.” – ₹6.08 lakh… pic.twitter.com/dXxFfj7jeO
— Sanatan Prabhat (@SanatanPrabhat) November 13, 2025
ಮೊದಲ ಬಾರಿಗೆ ಗೋಹತ್ಯೆಗೆ ಜೀವಾವಧಿ
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ರಿಜ್ವಾನಾ ಬುಖಾರಿ ಅವರು ಆರೋಪಿಗಳಾದ ಖಾಸಿಮ್ ಹಾಜಿ ಸೋಲಂಕಿ, ಸತ್ತಾರ್ ಇಸ್ಮಾಯಿಲ್ ಸೋಲಂಕಿ ಮತ್ತು ಅಕ್ರಮ್ ಹಾಜಿ ಸೋಲಂಕಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದರು. ಮೂವರಿಗೆ ಒಟ್ಟು ₹18 ಲಕ್ಷ ದಂಡವನ್ನೂ ಸಹ ವಿಧಿಸಲಾಗಿದೆ. ಗೋಹತ್ಯೆಗಾಗಿ ಗುಜರಾತ್ ನಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾದ ಮೊದಲ ಪ್ರಕರಣ ಇದಾಗಿದೆ.
ಘಟನೆಯ ವಿವರ
2023 ರಲ್ಲಿ, ಆರ್ಥಿಕ ಲಾಭಕ್ಕಾಗಿ ಈ ಮೂವರು ಅಮ್ರೇಲಿ ನಗರದಲ್ಲಿ ಹಸುಗಳನ್ನು ಕೊಂದಿದ್ದರು. ಸ್ಥಳದಿಂದ ಅಂದಾಜು 40 ಕೆಜಿ ಗೋಮಾಂಸ ಮತ್ತು ಹತ್ಯೆಗೆ ಬಳಸಿದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ರಾಜ್ಯದ ಕಾನೂನಿನಲ್ಲಿ ಗೋಹತ್ಯೆಗೆ ಜೀವಾವಧಿ ಶಿಕ್ಷೆಯ ಅವಕಾಶ
ರಾಜ್ಯ ಸರಕಾರದ ವಕ್ತಾರರಾದ ಜಿತು ವಾಘಾನಿ ಅವರು ಈ ಕುರಿತು ಮಾತನಾಡಿ, ಗೋರಕ್ಷಣೆಗಾಗಿ ರಾಜ್ಯ ಸರಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ತಿಳಿಸಿದರು. ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ 2011 ರಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಕಠಿಣಗೊಳಿಸಲಾಗಿತ್ತು. 2017 ರಲ್ಲಿ, ಈ ಕಾನೂನಿನಲ್ಲಿ ತಿದ್ದುಪಡಿ ತಂದು ಜೀವಾವಧಿ ಶಿಕ್ಷೆಯ ಅವಕಾಶ ಕಲ್ಪಿಸಲಾಯಿತು ಎಂದು ವಾಘಾನಿ ಅವರು ವಿವರಿಸಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!