ಭಾರತದೊಂದಿಗೆ ಸಂಬಂಧ ಕಡಿದುಕೊಳ್ಳುವುದು ಮಹಮ್ಮದ್ ಯೂನುಸ್ ಅವರ ಮೂರ್ಖತನ! : Sheikh Hasina Slams Muhammad Yunus

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಹೇಳಿಕೆ

ಎಡ, ಮಾಜಿ ಪ್ರಧಾನಿ ಶೇಖ್ ಹಸೀನಾ

ನವದೆಹಲಿ – ಭಾರತವು ಬಾಂಗ್ಲಾದೇಶದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಮುಖ ಪಾಲುದಾರನಾಗಿದೆ. ಹಂಗಾಮಿ ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ್ ಯೂನುಸ್ ಅವರ ಭಾರತ ವಿರೋಧಿ ನಿಲುವು ಅವರ ದೌರ್ಬಲ್ಯ ಮತ್ತು ಅಸ್ಥಿರ ಆಡಳಿತವನ್ನು ತೋರಿಸುತ್ತದೆ. ಅವರು ಮತಾಂಧ ಗುಂಪುಗಳ ಬೆಂಬಲದ ಮೇಲೆ ನಿಂತಿರುವ ಚುನಾಯಿತರಲ್ಲದ ಆಡಳಿತಗಾರರಾಗಿದ್ದಾರೆ. ಯೂನುಸ್ ಅವರ ಭಾರತದ ಮೇಲಿನ ದ್ವೇಷವು ಮೂರ್ಖತನದ ಮತ್ತು ಆತ್ಮಹತ್ಯಾ ದೃಷ್ಟಿಕೋನವಾಗಿದೆ. ಭಾರತದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವುದು ಮಹಮ್ಮದ್ ಯೂನುಸ್ ಅವರ ಮೂರ್ಖತನವಾಗಿದೆ. ಭಾರತ-ಬಾಂಗ್ಲಾದೇಶದ ಸಂಬಂಧಗಳು ಬಹಳ ಗಟ್ಟಿಯಾಗಿವೆ ಮತ್ತು ಯೂನುಸ್ ಅವರ ಇಂತಹ ಅವಿವೇಕದ ನಡವಳಿಕೆಯಿಂದ ಆ ಸಂಬಂಧಗಳು ದುರ್ಬಲಗೊಳ್ಳುವುದಿಲ್ಲ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಹೇಳಿದ್ದಾರೆ. ಭಾರತದ ಒಂದು ಅಜ್ಞಾತ ಸ್ಥಳದಿಂದ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಹಂಗಾಮಿ ಸರಕಾರವು ಜನರ ಪ್ರತಿನಿಧಿಯಲ್ಲ!

ಭಾರತ-ಬಾಂಗ್ಲಾದೇಶ ಸಂಬಂಧಗಳಲ್ಲಿ ಉಂಟಾಗಿರುವ ಬಿಗುವಿನ ಕುರಿತು ಶೇಖ್ ಹಸೀನಾ ಅವರು, ‘ಪ್ರಸ್ತುತ ಹಂಗಾಮಿ ಸರಕಾರವು ಬಾಂಗ್ಲಾದೇಶದ ಜನರ, ವಿಶೇಷವಾಗಿ ಮಹಿಳೆಯರನ್ನು, ಪ್ರತಿನಿಧಿಸುವುದಿಲ್ಲ. ಭಾರತ ನಮ್ಮ ನಿಜವಾದ ಸ್ನೇಹಿತ ಮತ್ತು ಮುಂದೆಯೂ ಹಾಗೆಯೇ ಇರುತ್ತದೆ’ ಎಂದು ಹೇಳಿದರು. ಭಾರತವು ಆಶ್ರಯ ನೀಡಿದ್ದಕ್ಕಾಗಿ ಮತ್ತು ಆತಿಥ್ಯ ನೀಡಿದ್ದಕ್ಕಾಗಿ ಅವರು ಭಾರತ ಸರಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

ಯೂನುಸ್‌ ಗೆ ಪಾಶ್ಚಿಮಾತ್ಯ ನಾಯಕರ ಬೆಂಬಲ!

ಶೇಖ್ ಹಸೀನಾ ಅವರು ಮಾತನಾಡುತ್ತಾ, ಮಹಮ್ಮದ್ ಯೂನುಸ್ ಅವರಿಗೆ ಕೆಲವು ಪಾಶ್ಚಿಮಾತ್ಯ ಉದಾರವಾದಿ ನಾಯಕರು ಗುಪ್ತ ಬೆಂಬಲ ನೀಡಿದ್ದರು. ಅವರು ಯೂನುಸ್ ತಮ್ಮವರೇ ಎಂದು ತಪ್ಪಾಗಿ ಊಹಿಸಿದ್ದರು; ಆದರೆ ಈಗ ಅವರು ಯೂನುಸ್ ಕಟ್ಟರವಾದಿಗಳನ್ನು ಮಂತ್ರಿಗಳನ್ನಾಗಿ ಮಾಡುತ್ತಿರುವುದು, ಅಲ್ಪಸಂಖ್ಯಾತರ ಮೇಲೆ ಅನ್ಯಾಯ ಮಾಡುತ್ತಿರುವುದು ಮತ್ತು ಸಂವಿಧಾನವನ್ನು ನಾಶಪಡಿಸುತ್ತಿರುವುದನ್ನು ನೋಡುತ್ತಿದ್ದಾರೆ, ಆದ್ದರಿಂದ ಅವರು ಯೂನುಸ್ ಅವರ ಬೆಂಬಲವನ್ನು ಹಿಂತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ, ಎಂದು ಹೇಳಿದರು.

ಪ್ರಜಾಪ್ರಭುತ್ವ ಮರುಸ್ಥಾಪನೆಯಾದ ನಂತರವೇ ಬಾಂಗ್ಲಾದೇಶಕ್ಕೆ ಮರಳುತ್ತೇನೆ!

ಶೇಖ್ ಹಸೀನಾ ಅವರು, ‘ನಾನು ಬಾಂಗ್ಲಾದೇಶಕ್ಕೆ ಮರಳಲು ಒಂದೇ ಒಂದು ಷರತ್ತು ಇದೆ, ಮತ್ತು ಅದೆಂದರೆ ದೇಶದಲ್ಲಿ ಭಾಗವಹಿಸುವ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಬೇಕು. ಆವಾಮಿ ಲೀಗ್ ಮೇಲಿನ ನಿಷೇಧವನ್ನು ತೆಗೆದುಹಾಕಬೇಕು ಮತ್ತು ಚುನಾವಣೆಗಳು ಸ್ವತಂತ್ರ, ನ್ಯಾಯಸಮ್ಮತ ಹಾಗೂ ಸರ್ವಸಮಾವೇಶಕ ರೀತಿಯಲ್ಲಿ ನಡೆಯಬೇಕು’ ಎಂದು ಹೇಳಿದರು. ಮುಂಬರುವ ಚುನಾವಣೆಗಳ ಬಹಿಷ್ಕಾರಕ್ಕೆ ಸಂಬಂಧಿಸಿದ ಸುದ್ದಿಗಳ ಬಗ್ಗೆ ಶೇಖ್ ಹಸೀನಾ ಅವರು, ಆವಾಮಿ ಲೀಗ್ ಅನ್ನು ರಾಜಕೀಯ ಪ್ರಕ್ರಿಯೆಯಿಂದ ದೂರವಿಡುವುದು ತಪ್ಪು ಎಂದು ಹೇಳಿದರು. ನಾವು ಅಧಿಕಾರದಲ್ಲಿರಲಿ ಅಥವಾ ವಿರೋಧ ಪಕ್ಷದಲ್ಲಿರಲಿ, ಆವಾಮಿ ಲೀಗ್ ಬಾಂಗ್ಲಾದೇಶದ ರಾಜಕೀಯದ ಭಾಗವಾಗಿ ಉಳಿಯುತ್ತದೆ, ಎಂದು ಹೇಳಿದರು.

ಹಿಂಸಾತ್ಮಕ ಆಂದೋಲನವನ್ನು ನಿಯಂತ್ರಿಸದಿರುವುದು ತಪ್ಪೆಂದು ಒಪ್ಪಿಕೊಂಡರು!

ವಿದ್ಯಾರ್ಥಿಗಳ ಆಂದೋಲನದ ಸಮಯದ ಪರಿಸ್ಥಿತಿಯನ್ನು ನಾವು ನಿಭಾಯಿಸಲು ಸಾಧ್ಯವಾಗಲಿಲ್ಲ ಮತ್ತು ಇದಕ್ಕಾಗಿ ನಮಗೆ ವಿಷಾದವಿದೆ ಎಂದು ಶೇಖ್ ಹಸೀನಾ ಅವರು ಒಪ್ಪಿಕೊಂಡರು. ಈ ಘಟನೆಯಿಂದ ಕಲಿಯುವುದು ಬಹಳಷ್ಟಿದೆ; ಆದರೆ ಜನರನ್ನು ಪ್ರಚೋದಿಸುವ ತಥಾಕಥಿತ ವಿದ್ಯಾರ್ಥಿ ನಾಯಕರು ಸಹ ಅದರ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಬೇಕು!

ಮಹಮ್ಮದ್ ಯೂನುಸ್ ನನ್ನ ವಿರುದ್ಧ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಬೇಕು. ಅವರು ಎಂದಿಗೂ ಹಾಗೆ ಮಾಡುವುದಿಲ್ಲ; ಏಕೆಂದರೆ ನ್ಯಾಯಾಲಯವು ನನ್ನನ್ನು ನಿರ್ದೋಷಿ ಎಂದು ತೀರ್ಮಾನಿಸುತ್ತದೆ ಎಂದು ಅವರಿಗೆ ತಿಳಿದಿದೆ ಎಂದು ಶೇಖ್ ಹಸೀನಾ ಅವರು ಹೇಳಿದರು. ಅವರು ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಧಿಕರಣದ ನಿಷ್ಪಕ್ಷಪಾತವನ್ನು ನಿರಾಕರಿಸಿ ಅದನ್ನು ‘ಕಾಂಗರೂ ನ್ಯಾಯಾಲಯ’ (ಸಂವಿಧಾನ ವಿರೋಧಿ ನ್ಯಾಯಾಲಯ) ಎಂದು ಕರೆದರು ಮತ್ತು ಅದು ವಿರೋಧ ಪಕ್ಷಗಳ ನಿಯಂತ್ರಣದಲ್ಲಿದೆಯೆಂದು ಆರೋಪಿಸಿದರು.

ಬಾಂಗ್ಲಾದೇಶವು ಅಸಮಾಧಾನ ವ್ಯಕ್ತಪಡಿಸಿ ಭಾರತದ ಉಪ-ಉನ್ನತ ಆಯುಕ್ತರಿಗೆ ವಿಚಾರಣೆ ಮಾಡಿದೆ!

ಶೇಖ್ ಹಸೀನಾ ಅವರು ಸಂದರ್ಶನವೊಂದರಲ್ಲಿ ಮೊಹಮ್ಮದ್ ಯೂನುಸ್ ಅವರನ್ನು ಟೀಕಿಸಿದ ಕೆಲವೇ ಗಂಟೆಗಳ ನಂತರ, ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಭಾರತೀಯ ಉಪ-ಉನ್ನತ ಆಯುಕ್ತ ಪವನ್ ಬಧೆ ಅವರನ್ನು ಮಧ್ಯಂತರ ಸರಕಾರವು ವಿದೇಶಾಂಗ ಸಚಿವಾಲಯಕ್ಕೆ ಕರೆಸಿ ಅಸಮಾಧಾನ ವ್ಯಕ್ತಪಡಿಸುತ್ತಾ ಈ ಕುರಿತು ವಿಚಾರಣೆ ನಡೆಸಿದೆ.