ಭಾರತ ಹಿಂದೂ ರಾಷ್ಟ್ರವಾದರೆ, ಬಾಂಬ್ ಸ್ಫೋಟಗಳು ನಡೆಯುವುದಿಲ್ಲ! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ

ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ

ಪಲ್ವಲ್ (ಹರಿಯಾಣ) – ಭಾರತವು ಹಿಂದೂ ರಾಷ್ಟ್ರವಾದರೆ ಮತ್ತು ಸನಾತನಿಗಳು ಒಗ್ಗೂಡಿದರೆ, ದೆಹಲಿಯ ಬಾಂಬ್ ಸ್ಫೋಟದಂತಹ ಕೃತ್ಯಗಳಲ್ಲಿ ಯಾರೂ ಭಾಗಿಯಾಗುವುದಿಲ್ಲ ಎಂದು ಮಧ್ಯಪ್ರದೇಶದ ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಪತ್ರಕರ್ತರೊಂದಿಗೆ ಮಾತನಾಡುವಾಗ ಪ್ರತಿಕ್ರಿಯಿಸಿದ್ದಾರೆ. ಅವರ ‘ಸನಾತನ ಹಿಂದೂ ಏಕತಾ ಪಾದಯಾತ್ರೆ’ ಇಲ್ಲಿಗೆ ತಲುಪಿದಾಗ ಅವರು ಮಾತನಾಡುತ್ತಿದ್ದರು.

ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು, ಹಿಂದೂಗಳ ಏಕತೆಯ ಅರ್ಥ ‘ವಸುಧೈವ ಕುಟುಂಬಕಂ’ (ಸಂಪೂರ್ಣ ಭೂಮಿಯೇ ಒಂದು ಕುಟುಂಬ) ಮತ್ತು ‘ಅಹಿಂಸಾ ಪರಮೋ ಧರ್ಮಃ’ (ಅಹಿಂಸೆಯೇ ಶ್ರೇಷ್ಠ ಧರ್ಮ) ಎಂಬುದಾಗಿದೆ. ಹಿಂದೂಗಳು ಒಗ್ಗಟ್ಟಾದರೆ, ಅವರು ಎಂದಿಗೂ ಯಾರ ಪ್ರಾಣವನ್ನೂ ತೆಗೆಯುವ ಯೋಚನೆ ಮಾಡುವುದಿಲ್ಲ ಎಂದು ಹೇಳಿದರು.

ಮುಸಲ್ಮಾನರೇ ಯಾವಾಗಲೂ ಭಯೋತ್ಪಾದಕರು ಎಂದು ಸಾಬೀತಾಗುತ್ತಾರೆ!

ಒಂದು ಪ್ರಶ್ನೆಗೆ ಉತ್ತರಿಸಿದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು, ‘ಇದೇ ಜನರು’ (ಮುಸಲ್ಮಾನರು) ಯಾವಾಗಲೂ ಭಯೋತ್ಪಾದಕರು ಎಂದು ಸಾಬೀತಾಗುವುದು ಜಗತ್ತಿನ ದುರದೃಷ್ಟಕರ ಸಂಗತಿಯಾಗಿದೆ. ಅವರ ಶಿಕ್ಷಣ ಪದ್ಧತಿಯಲ್ಲಿ ಎಲ್ಲೋ ಗಂಭೀರ ಲೋಪಗಳಿವೆ. ಮದರಸಾಗಳ ಶಿಕ್ಷಣ ವ್ಯವಸ್ಥೆಯಲ್ಲಿ ಮಾನವೀಯತೆಯ ಶಿಕ್ಷಣವನ್ನು ನೀಡುವುದು ಅತ್ಯಗತ್ಯ ಎಂದು ಹೇಳಿದರು.