‘ಲವ್ ಜಿಹಾದ್‌’ಗೆ ಹಣ ಒದಗಿಸಿದ ಕಾಂಗ್ರೆಸ್ ನಾಯಕ ಅನ್ವರ್ ಖಾದ್ರಿ ಮುನ್ಸಿಪಲ್ ಕೌನ್ಸಿಲರ್ ಸ್ಥಾನದಿಂದ ವಜಾ Congress Leader Anwar Qadri Love Jihad Case

ಮುಂದಿನ 5 ವರ್ಷಗಳ ಕಾಲ ಚುನಾವಣೆ ಸ್ಪರ್ಧಿಸಲು ನಿಷೇಧ

ಇಂದೋರ್ (ಮಧ್ಯಪ್ರದೇಶ) – ಲವ್ ಜಿಹಾದ್ ಪ್ರಕರಣದಲ್ಲಿ ಬಂಧಿತರಾಗಿರುವ ಕೌನ್ಸಿಲರ್ ಅನ್ವರ್ ಖಾದ್ರಿ ಅವರನ್ನು 5 ವರ್ಷಗಳ ಕಾಲ ಹುದ್ದೆಯಿಂದ ವಜಾಗೊಳಿಸಲಾಗಿದ್ದು, ಅವರು ಇನ್ನು ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲವೆಂದು ಮಹಾನಗರ ಪಾಲಿಕೆ ಆಯುಕ್ತ ಸುಧಾಮ ಖಾಡೆ ಅವರು ಆದೇಶ ಹೊರಡಿಸಿದ್ದಾರೆ. ಮೇಯರ್ ಪುಷ್ಯಮಿತ್ರ ಭಾರ್ಗವ ಅವರು ಖಾದ್ರಿ ವಿರುದ್ಧ ದಾಖಲಾಗಿರುವ ಗಂಭೀರ ಅಪರಾಧಗಳನ್ನು ಪರಿಗಣಿಸಿ ಅವರನ್ನು ಹುದ್ದೆಯಿಂದ ವಜಾಗೊಳಿಸಲು ಶಿಫಾರಸು ಮಾಡಿದ್ದರು. ಅನ್ವರ್ ಖಾದ್ರಿ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 23 ಪ್ರಕರಣಗಳು ದಾಖಲಾಗಿವೆ. ಕೊಲೆ, ಕೊಲೆ ಯತ್ನ, ಶಸ್ತ್ರಾಸ್ತ್ರ ಕಾಯಿದೆ ಉಲ್ಲಂಘನೆ ಮತ್ತು ‘ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಅಧಿನಿಯಮ’ದ ವಿವಿಧ ಸೆಕ್ಷನ್‌ಗಳನ್ನು ಸೇರಿಸಲಾಗಿವೆ.

ಹಿಂದೂ ಹುಡುಗಿಯರನ್ನು ಬಲೆಗೆ ಸಿಲುಕಿಸಲು ಹಣಕಾಸು ನೆರವು!

ಹಿಂದೂ ಹುಡುಗಿಯರನ್ನು ವಂಚಿಸಲು ಮುಸ್ಲಿಂ ಯುವಕರಿಗೆ ಅನ್ವರ್ ಖಾದ್ರಿ ಆರ್ಥಿಕ ನೆರವು ನೀಡುತ್ತಿದ್ದನು. ಹಾಗಾಗಿ ಅವನ ಮೇಲೆ ಲವ್ ಜಿಹಾದ್‌ಗೆ ಹಣಕಾಸು ನೆರವು ನೀಡಿದ ಆರೋಪ ಹೊರಿಸಲಾಗಿತ್ತು.