ಉತ್ತರಪ್ರದೇಶದಲ್ಲಿ ಶಬ್ದಮಾಲಿನ್ಯದ ವಿರುದ್ಧ ಅಭಿಯಾನ!

  • ಲಕ್ಷ್ಮಣಪುರಿಯಲ್ಲಿ ಪೊಲೀಸರು 40 ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆದುಹಾಕಿದರು!

  • ಮಂದಿರಗಳೂ ಸೇರಿವೆ: ರಾಜ್ಯದಾದ್ಯಂತ ಈವರೆಗೆ 1 ಲಕ್ಷಕ್ಕೂ ಹೆಚ್ಚು ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ!

ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಲ್ಲಿ ಮಸೀದಿಗಳ ಮೇಲೆ ಅನಧಿಕೃತವಾಗಿ ಅಳವಡಿಸಲಾಗಿದ್ದ ಧ್ವನಿವರ್ಧಕಗಳನ್ನು ತೆಗೆದುಹಾಕುವ ಅಭಿಯಾನವನ್ನು ಪ್ರಾರಂಭಿಸಲಾಯಿತು. ಈ ವೇಳೆ ಪೊಲೀಸರು ನಗರದ 40 ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆದುಹಾಕಿದರು. ಶಬ್ದಮಾಲಿನ್ಯ ಉಂಟುಮಾಡುವ ಧ್ವನಿವರ್ಧಕಗಳನ್ನು ಬಳಸುವುದು ಕಾನೂನುಬಾಹಿರ ಎಂದು ಪೊಲೀಸರು ಮಸೀದಿಗಳ ಇಮಾಮ್‌ ಗಳಿಗೆ (ಇಮಾಮ್ ಎಂದರೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸುವವರು) ತಿಳಿಸಿದರು.

ಪೊಲೀಸರ ಒಂದು ತಂಡವು ವಜೀರಗಂಜನಲ್ಲಿರುವ ಗೋಲಾಗಂಜ ಮಸೀದಿಗೆ ಹೋದರು. ಇಮಾಮ್‌ರನ್ನು ಕರೆದು ಮಸೀದಿಯ ಮೇಲಿನ ಧ್ವನಿವರ್ಧಕಗಳನ್ನು ತೆಗೆಯಲು ಸೂಚಿಸಲಾಯಿತು. ಧ್ವನಿವರ್ಧಕಗಳು ಎತ್ತರದಲ್ಲಿ ಅಳವಡಿಸಲಾಗಿದ್ದವು. ಪೊಲೀಸರ ಸಹಾಯದಿಂದ ಅವುಗಳನ್ನು ಕೆಳಕ್ಕೆ ಇಳಿಸಲಾಯಿತು. ಇದರ ನಂತರ ಪೊಲೀಸರ ತಂಡವು ಮಲ್ಕಾ ಜಮಾನಿ ಮಸೀದಿ ಹಾಗೂ ಗುಯಿನ್ ಮಾರ್ಗದ ಮಸೀದಿಗೆ ಭೇಟಿ ನೀಡಿ, ಅಲ್ಲಿನ ಧ್ವನಿವರ್ಧಕಗಳನ್ನು ತೆಗೆದುಹಾಕಿದರು. ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆದ ನಂತರ ಪೊಲೀಸರು ಬಟುಕ್ ಭೈರವ ಮಂದಿರಕ್ಕೆ ತೆರಳಿ, ಅಲ್ಲಿ ಅಳವಡಿಸಿದ್ದ ಧ್ವನಿವರ್ಧಕಗಳನ್ನೂ ತೆಗೆದುಹಾಕಿದರು.

ಉತ್ತರ ಪ್ರದೇಶದ ಯೋಗಿ ಸರಕಾರವು 2022 ರಿಂದ ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವ ಅಭಿಯಾನವನ್ನು ಪ್ರಾರಂಭಿಸಿದ್ದು, ಇಲ್ಲಿಯವರೆಗೆ ರಾಜ್ಯದಾದ್ಯಂತ ಧಾರ್ಮಿಕ ಸ್ಥಳಗಳಿಂದ 1 ಲಕ್ಷಕ್ಕೂ ಹೆಚ್ಚು ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ.