ಅತ್ಯಾಚಾರದ ಆರೋಪ ಎದುರಿಸುತ್ತಿರುವ ಪಂಜಾಬ್‌ನ ಆಮ್ ಆದ್ಮಿ ಪಕ್ಷದ ಶಾಸಕ ಆಸ್ಟ್ರೇಲಿಯಾಗೆ ಪರಾರಿ!

ಪಟಿಯಾಲಾ (ಪಂಜಾಬ್) – ಅತ್ಯಾಚಾರದ ಪ್ರಕರಣದ ಆರೋಪಿಯಾಗಿರುವ ಪಟಿಯಾಲಾ ಜಿಲ್ಲೆಯ ಸನೌರ್ (ಮತದಾರರ) ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಶಾಸಕ ಹರ್ಮೀತ್ ಸಿಂಗ್ ಪಠಾಣ್‌ಮಾಜ್ರಾ ದೇಶ ಬಿಟ್ಟು ಆಸ್ಟ್ರೇಲಿಯಾಗೆ ಪರಾರಿಯಾಗಿದ್ದಾರೆ. ಕಳೆದ 2 ತಿಂಗಳಿಂದ ಪಂಜಾಬ್ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದರು.

ಆಸ್ಟ್ರೇಲಿಯಾದಲ್ಲಿ ಪಠಾಣ್‌ಮಾಜ್ರಾ ಅವರು ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, ಈ ಪ್ರಕರಣವನ್ನು ಸುಳ್ಳು ಎಂದು ಕರೆದು, ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸರಕಾರದ ವಿರುದ್ಧ ಟೀಕೆ ಮಾಡಿದರು. ಮುಖ್ಯಮಂತ್ರಿ ಭಗವಂತ ಮಾನ್ ಅವರಿಗೆ ಪಂಜಾಬ್‌ನ ಸಮಸ್ಯೆಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ. ಆಪ್ ನ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಏನು ಹೇಳುತ್ತಾರೋ ಅದನ್ನೇ ಮಾನ್ ಅವರು ಮಾಡುತ್ತಾರೆ. ಸರಕಾರದಲ್ಲಿ ಶಾಸಕರಿಗೆ ಯಾವುದೇ ಬೆಲೆ ಇಲ್ಲ. ಶಾಸಕರ ಧ್ವನಿಯನ್ನು ಅಡಗಿಸಲು ಸರಕಾರ ಈ ಎಲ್ಲಾ ಪಿತೂರಿಯನ್ನು ಸೃಷ್ಟಿಸಿದೆ” ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಇದು ಭದ್ರತಾ ಏಜೆನ್ಸಿಗಳಿಗೆ ನಾಚಿಕೆಗೇಡಿನ ಸಂಗತಿ!
  • ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಸರಕಾರ ಇರುವುದರಿಂದ ಶಾಸಕನಿಗೆ ಪರಾರಿಯಾಗಲು ಸುಲಭವಾಯಿತೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ!