1937 ರಲ್ಲಿ ‘ವಂದೇ ಮಾತರಂ’ ಗೀತೆಯ ವಿಭಜನೆಯಿಂದಾಗಿ ದೇಶದ ವಿಭಜನೆಯ ಬೀಜ ಬಿತ್ತಲ್ಪಟ್ಟಿತು! – ಪ್ರಧಾನಿ ನರೇಂದ್ರ ಮೋದಿ

ಆ ಸಮಯದಲ್ಲಿ ಒಡಕು ಮೂಡಿಸಿದ ಸಿದ್ಧಾಂತವು ಇಂದಿಗೂ ದೇಶಕ್ಕೆ ಒಂದು ಸವಾಲಾಗಿದೆ ಎಂದು ಸೂಚನೆ

ನವದೆಹಲಿ – ‘ವಂದೇ ಮಾತರಂ’ ಒಂದು ಮಂತ್ರ, ಒಂದು ಕನಸು, ಒಂದು ಸಂಕಲ್ಪ ಮತ್ತು ಒಂದು ಶಕ್ತಿಯಾಗಿದೆ. ಈ ಹಾಡು ಭಾರತಮಾತೆಯ ಪೂಜೆಯಾಗಿದೆ. ‘ವಂದೇ ಮಾತರಂ’ ಭಾರತದ ಸ್ವಾತಂತ್ರ್ಯದ ಘೋಷಣೆಯಾಗಿತ್ತು. ಆದಾಗ್ಯೂ, 1937 ರಲ್ಲಿ ‘ವಂದೇ ಮಾತರಂ’ನ ಕೆಲವು ಭಾಗವನ್ನು ತೆಗೆದುಹಾಕಲಾಯಿತು. ಆ ಗೀತೆಯನ್ನು ತುಂಡರಿಸಲಾಯಿತು. ‘ವಂದೇ ಮಾತರಂ’ನ ಈ ವಿಭಜನೆಯಿಂದಲೇ ದೇಶದ ವಿಭಜನೆಯ ಬೀಜ ಬಿತ್ತಲ್ಪಟ್ಟಿತು.

ಆ ವಿಭಜನಕಾರಿ ಸಿದ್ಧಾಂತವು ಇಂದಿಗೂ ದೇಶಕ್ಕೆ ಒಂದು ಸವಾಲಾಗಿದೆ, ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಗೆ ನವೆಂಬರ್ 7 ರಂದು 150 ವರ್ಷ ಪೂರ್ಣಗೊಂಡಿತು. ಈ ಹಿನ್ನೆಲೆಯಲ್ಲಿ ನವೆಂಬರ್ 7 ರಂದು ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಈ ಮಾತುಗಳನ್ನಾಡಿದರು.

ಪ್ರಧಾನಿ ಮಾತು ಮುಂದುವರೆಸಿ, ‘ವಂದೇ ಮಾತರಂ’ನ ಮೂಲ ಪಠ್ಯದಲ್ಲಿ ಭಾರತಮಾತೆಯು ಸರಸ್ವತಿ, ಲಕ್ಷ್ಮಿ ಮತ್ತು ದುರ್ಗೆಯಾಗಿದ್ದಾಳೆ ಎಂದು ಹೇಳಲಾಗಿದೆ. ಯಾವಾಗ ಶತ್ರುಗಳು ಭಯೋತ್ಪಾದನೆಯ ಮೂಲಕ ಭಾರತದ ಭದ್ರತೆ ಮತ್ತು ಗೌರವದ ಮೇಲೆ ಆಕ್ರಮಣ ಮಾಡುವ ದುಸ್ಸಾಹಸ ಮಾಡಿದರೋ, ಆಗ ಇಡೀ ಜಗತ್ತು ಕಂಡಿತು, ನವ ಭಾರತಕ್ಕೆ ಭಯೋತ್ಪಾದನೆಯನ್ನು ನಾಶಮಾಡಲು ದುರ್ಗೆಯಾಗುವುದು ಹೇಗೆ? ಎನ್ನುವುದೂ ತಿಳಿದಿದೆ.

‘ವಂದೇ ಮಾತರಂ’ನ 150 ನೇ ವಾರ್ಷಿಕೋತ್ಸವದ ನಿಮಿತ್ತ ಪ್ರಧಾನಿಯವರು ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು. ಪ್ರಧಾನಿಯವರು ‘ವಂದೇ ಮಾತರಂ’ನ ಸಾಮೂಹಿಕ ಗಾಯನದಲ್ಲೂ ಭಾಗವಹಿಸಿದರು.