ಕರ್ಣಾವತಿ ವಿಮಾನ ಅಪಘಾತದಲ್ಲಿ ಪೈಲಟ್‌ ನ ತಪ್ಪಿದೆ ಎಂದು ದೇಶದಲ್ಲಿ ಯಾರೂ ಒಪ್ಪುವುದಿಲ್ಲ! – ಸರ್ವೋಚ್ಚ ನ್ಯಾಯಾಲಯ : Air India Plane Crash

ಪೈಲಟ್ ಸುಮಿತ್ ಸಬರ್ವಾಲ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ

ನವ ದೆಹಲಿ – ಕರ್ಣಾವತಿಯಲ್ಲಿ ಜೂನ್ 12, 2025 ರಂದು ನಡೆದ ವಿಮಾನ ಅಪಘಾತಕ್ಕೆ ಪೈಲಟ್ ಅನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ದೇಶದಲ್ಲಿ ಯಾರೂ ಕೂಡ ಪೈಲಟ್‌ ನ ತಪ್ಪಿದೆ ಎಂದು ಒಪ್ಪುವುದಿಲ್ಲ. ಪ್ರಾಥಮಿಕ ತನಿಖಾ ವರದಿಯಲ್ಲೂ ಪೈಲಟ್ ವಿರುದ್ಧ ಯಾವುದೇ ಆರೋಪಗಳಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ. ಈ ಅಪಘಾತದಲ್ಲಿ ಮೃತಪಟ್ಟ ಪೈಲಟ್‌ ರಲ್ಲಿ ಒಬ್ಬರಾದ ಸುಮಿತ್ ಸಭರವಾಲ್ ಅವರ 91 ವರ್ಷದ ತಂದೆ ಪುಷ್ಕರ ರಾಜ ಸಭರವಾಲ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯವು ಈ ಹೇಳಿಕೆ ನೀಡಿದೆ. ಅವರು ಈ ಅಪಘಾತದ ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದು, ನ್ಯಾಯಾಲಯವು ಕೇಂದ್ರ ಸರಕಾರ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದಿಂದ ಉತ್ತರಗಳನ್ನು ಕೇಳಿದೆ. ಈ ಅರ್ಜಿಯ ಮುಂದಿನ ವಿಚಾರಣೆ ನವೆಂಬರ್ 10 ರಂದು ನಡೆಯಲಿದೆ. ಕರ್ಣಾವತಿಯಿಂದ ಲಂಡನ್‌ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ‘ಎಐ 171’ ಪತನಗೊಂಡ ಅಪಘಾತದಲ್ಲಿ 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 241 ಜನರು ಸಾವನ್ನಪ್ಪಿದ್ದರು. ಇದರಲ್ಲಿ ಗುಜರಾತಿನ ಮಾಜಿ ಮುಖ್ಯಮಂತ್ರಿ ವಿಜಯ ರೂಪಾಣಿ ಅವರೂ ಸೇರಿದ್ದರು.

ವಿದೇಶಿ ವೃತ್ತಪತ್ರಿಕೆಗಳ ಕಳಪೆ ವರದಿಗಾರಿಕೆ! – ಅಮೆರಿಕದ ದಿನಪತ್ರಿಕೆಯ ವಿರುದ್ಧ ನ್ಯಾಯಾಲಯದ ಟೀಕೆ

ಪುಷ್ಕರ ಸಭರವಾಲ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ, ಅಮೆರಿಕಾದ ‘ವಾಲ್ ಸ್ಟ್ರೀಟ್ ಜರ್ನಲ್’ನ ಒಂದು ವರದಿಯಲ್ಲಿ, ಈ ಅಪಘಾತವು ಪೈಲಟ್‌ ನ ತಪ್ಪಿನಿಂದಾಗಿದೆ ಎಂದು ಹೇಳಲಾಗಿದೆ ಎಂದು ತಿಳಿಸಿದ್ದರು. ವರದಿಯಲ್ಲಿ ಭಾರತ ಸರಕಾರದ ಹೆಸರಿಸದ ಮೂಲವೊಂದನ್ನು ಉಲ್ಲೇಖಿಸಲಾಗಿದೆ. ಆದಾಗ್ಯೂ, ನ್ಯಾಯಪೀಠವು ಇದು ಕಳಪೆ ವರದಿ ಎಂದು ಸ್ಪಷ್ಟಪಡಿಸಿದೆ. (ಪತನಗೊಂಡ ವಿಮಾನವು ಅಮೆರಿಕಾದ ಸಂಸ್ಥೆಗೆ ಸೇರಿದ್ದಾಗಿತ್ತು. ಆದ್ದರಿಂದ, ಆ ಸಂಸ್ಥೆಯ ಹೆಸರಿಗೆ ಕೆಟ್ಟ ಹೆಸರು ಬರಬಾರದು ಎಂದು ಆ ದೇಶದ ವೃತ್ತಪತ್ರಿಕೆಯು ಸಂಸ್ಥೆಯನ್ನು ಸಮರ್ಥಿಸಿಕೊಳ್ಳಲು ಭಾರತೀಯ ಪೈಲಟ್‌ ನ ಮೇಲೆ ಆರೋಪ ಮಾಡಿದೆ ಎಂಬುದು ಸ್ಪಷ್ಟವಾಗಿದೆ. – ಸಂಪಾದಕರು)