ಜುಬಿನ್ ಗರ್ಗ್ ಅವರ ಸಾವು ಅಪಘಾತವಲ್ಲ, ಅದೊಂದು ಕೊಲೆ! – ಮುಖ್ಯಮಂತ್ರಿ ಹಿಮಂತ್ ಸರಮಾ ಅವರ ದಾವೆ !

ಗುವಾಹಟಿ (ಅಸ್ಸಾಂ) – ಅಸ್ಸಾಂನ ಸುಪ್ರಸಿದ್ಧ ಗಾಯಕ ಮತ್ತು ರಾಜ್ಯದ ಸಾಂಸ್ಕೃತಿಕ ಪ್ರತೀಕವೆಂದು ಪರಿಗಣಿಸಲ್ಪಟ್ಟಿರುವ ಜುಬಿನ್ ಗರ್ಗ್ ಅವರ ಸಿಂಗಾಪುರದಲ್ಲಿ ಸಂಭವಿಸಿದ ಅನುಮನಾಸ್ಪದ ಸಾವಿನ ಪ್ರಕರಣದಲ್ಲಿ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಅವರು ದೊಡ್ಡ ಬಹಿರಂಗಪಡಿಸಿದ್ದಾರೆ. ಅವರು, ಜುಬಿನ್ ಗರ್ಗ್ ಅವರದ್ದು ಕೊಲೆಯಾಗಿದೆ; ಆದರೆ ತನಿಖೆ ಇನ್ನೂ ನಡೆಯುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರು ೭ ಜನರನ್ನು ಬಂಧಿಸಿದ್ದಾರೆ. ಸಿಂಗಾಪುರ ಪೊಲೀಸರು ಸಹ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ ೮ ರೊಳಗೆ ಆರೋಪಪಟ್ಟಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಪೊಲೀಸರು ಜುಬಿನ್ ಗರ್ಗ್ ಅವರ ಸಂಬಂಧಿ ಮತ್ತು ಅಸ್ಸಾಂನ ಪೊಲೀಸ್ ಉಪಾಧೀಕ್ಷಕ ಸಂದೀಪನ್ ಗರ್ಗ್ ಅವರನ್ನು ಬಂಧಿಸಿದ್ದಾರೆ. ಸಿಂಗಾಪುರದ ಕಾರ್ಯಕ್ರಮದ ಆಯೋಜಕ ಶ್ಯಾಮಕನು ಮಹಂತ, ವ್ಯವಸ್ಥಾಪಕ ಸಿದ್ಧಾರ್ಥ ಶರ್ಮಾ ಮತ್ತು ಬ್ಯಾಂಡ್‌ನ ಸದಸ್ಯರಾದ ಶೇಖರ್ ಜ್ಯೋತಿ ಮತ್ತು ಅಮೃತ್ ಪ್ರಭಾ ಮಹಂತ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ, ಹಾಗೆಯೇ ಜುಬಿನ್ ಗರ್ಗ್ ಅವರ ಅಂಗರಕ್ಷಕರಾದ ನಂದೇಶ್ವರ ಬೋರಾ ಮತ್ತು ಪ್ರಬೀರ್ ವೈಶ್ಯ ಅವರನ್ನು ಸಹ ಬಂಧಿಸಲಾಗಿದೆ. ಜುಬಿನ್ ಗರ್ಗ್ ಅವರ ಬ್ಯಾಂಕ್ ಖಾತೆಗಳಿಂದ ಕೆಲವು ದಿನಗಳಲ್ಲಿ ಸುಮಾರು ೧ ಕೋಟಿ ೧೦ ಲಕ್ಷ ರೂಪಾಯಿಗಳ ವಹಿವಾಟುಗಳು ನಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಅಸ್ಸಾಂನ ಸುಪುತ್ರರಾದ ಜುಬಿನ್ ಗರ್ಗ್ ಅವರು ಸೆಪ್ಟೆಂಬರ್ ೧೯, ೨೦೨೫ ರಂದು ಸಿಂಗಾಪುರದಲ್ಲಿ ‘ಸ್ಕೂಬಾ ಡೈವಿಂಗ್’ ಮಾಡುವಾಗ ಮೃತಪಟ್ಟಿದ್ದರು. ಅವರು ಸೆಪ್ಟೆಂಬರ್ ೨೦-೨೧ ರಂದು ನಡೆಯಲಿರುವ ಸಂಗೀತ ಕಾರ್ಯಕ್ರಮಕ್ಕಾಗಿ ಅಲ್ಲಿಗೆ ಹೋಗಿದ್ದರು.