ದೀಪಾವಳಿ ಪಟಾಕಿ ಕಿಡಿ ಹಾರಿದಕ್ಕೆ ಮುಸ್ಲಿಮರಿಂದ ಮಾರಕಾಯುಧದಿಂದ ಹಿಂದೂಗಳ ಮೇಲೆ ದಾಳಿ : Attack on Hindus with Weapons

ಹಿಂದೂಗಳ ಸಮಯಪ್ರಜ್ಞೆಯಿಂದ 3 ಜನರ ಬಂಧನ

ಬಂಧಿತ ಮುಸ್ಲಿಮರು (ಬಲ)

ಬೆಂಗಳೂರು – ಇಲ್ಲಿನ ಹೆಣ್ಣೂರು ಪ್ರದೇಶದಲ್ಲಿ ದೀಪಾವಳಿ ಪಟಾಕಿಯ ಕಿಡಿಯೊಂದು ಹಾರಿದ ಕಾರಣಕ್ಕೆ ಮುಸ್ಲಿಮರ ಗುಂಪೊಂದು ಮಾರಕಾಯುಧಗಳೊಂದಿಗೆ ಹಿಂದೂಗಳ ಮೇಲೆ ದಾಳಿ ನಡೆಸಿದರು. ಈ ವೇಳೆ ಹಿಂದೂಗಳು ತೋರಿದ ಸಮಯಪ್ರಜ್ಞೆಯಿಂದ 3 ಜನರನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಅವರ ಹೆಸರು ಅಮೀನ ಷರೀಫ್, ಸೈಯದ ಅರ್ಬಾಜ್ ಮತ್ತು ಶೀದ ಖಾದರ ಆಗಿದೆ. ಈ ಘಟನೆ ಅಕ್ಟೋಬರ 20 ರಂದು ರಾತ್ರಿ 10 ಗಂಟೆಗೆ ಸಂಭವಿಸಿದೆ.

ಆರೋಪಿಗಳಲ್ಲಿ ಒಬ್ಬನಾದ ಅಮೀನ ಷರೀಫ್ ರಾತ್ರಿ 10 ಗಂಟೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಸ್ಥಳೀಯರು ಸಿಡಿಸಿದ ಪಟಾಕಿಯ ಸಣ್ಣ ಕಿಡಿಯೊಂದು ಷರೀಫ್ ಮೇಲೆ ಬಿದ್ದಿದೆ. ಇದರಿಂದ ಷರೀಫ್ ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಣ್ಣ ಜಗಳ ನಡೆದ ಕೆಲವೇ ನಿಮಿಷಗಳಲ್ಲಿ ಷರೀಫ್ ತನ್ನ ಸಹಚರರು ಮತ್ತು ಸಂಬಂಧಿಕರನ್ನು ಕತ್ತಿಯಂತಹ ಮಾರಕ ಆಯುಧಗಳೊಂದಿಗೆ ಕರೆಸಿಕೊಂಡಿದ್ದಾನೆ. ಅವರು ಸ್ಥಳೀಯರ ಮೇಲೆ ದಾಳಿ ಮಾಡಿದರು ಮತ್ತು ಕೆಲವರಿಗೆ ಬೆದರಿಕೆ ಹಾಕಿದರು. ಅವರ ಕೃತ್ಯದಿಂದ ಭಯಪಡದ ಸ್ಥಳೀಯ ಯುವಕರು ಒಗ್ಗೂಡಿ 3 ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದು ಮತಾಂಧ ಮುಸ್ಲಿಮರು ಬಹಿರಂಗವಾಗಿ ಹಿಂದೂಗಳ ಮೇಲೆ ದಾಳಿ ಮಾಡಬಹುದು; ಆದರೆ ಸಂಘದ ಶಿಸ್ತುಬದ್ಧ ಪಥಸಂಚಲಕ್ಕೆ ಮಾತ್ರ ನಿರ್ಬಂಧವಿರುತ್ತದೆ!