ಹಿಂದೂಗಳ ಸಮಯಪ್ರಜ್ಞೆಯಿಂದ 3 ಜನರ ಬಂಧನ

ಬೆಂಗಳೂರು – ಇಲ್ಲಿನ ಹೆಣ್ಣೂರು ಪ್ರದೇಶದಲ್ಲಿ ದೀಪಾವಳಿ ಪಟಾಕಿಯ ಕಿಡಿಯೊಂದು ಹಾರಿದ ಕಾರಣಕ್ಕೆ ಮುಸ್ಲಿಮರ ಗುಂಪೊಂದು ಮಾರಕಾಯುಧಗಳೊಂದಿಗೆ ಹಿಂದೂಗಳ ಮೇಲೆ ದಾಳಿ ನಡೆಸಿದರು. ಈ ವೇಳೆ ಹಿಂದೂಗಳು ತೋರಿದ ಸಮಯಪ್ರಜ್ಞೆಯಿಂದ 3 ಜನರನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಅವರ ಹೆಸರು ಅಮೀನ ಷರೀಫ್, ಸೈಯದ ಅರ್ಬಾಜ್ ಮತ್ತು ಶೀದ ಖಾದರ ಆಗಿದೆ. ಈ ಘಟನೆ ಅಕ್ಟೋಬರ 20 ರಂದು ರಾತ್ರಿ 10 ಗಂಟೆಗೆ ಸಂಭವಿಸಿದೆ.
ಆರೋಪಿಗಳಲ್ಲಿ ಒಬ್ಬನಾದ ಅಮೀನ ಷರೀಫ್ ರಾತ್ರಿ 10 ಗಂಟೆಗೆ ಬೈಕ್ನಲ್ಲಿ ಹೋಗುತ್ತಿದ್ದಾಗ, ಸ್ಥಳೀಯರು ಸಿಡಿಸಿದ ಪಟಾಕಿಯ ಸಣ್ಣ ಕಿಡಿಯೊಂದು ಷರೀಫ್ ಮೇಲೆ ಬಿದ್ದಿದೆ. ಇದರಿಂದ ಷರೀಫ್ ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಣ್ಣ ಜಗಳ ನಡೆದ ಕೆಲವೇ ನಿಮಿಷಗಳಲ್ಲಿ ಷರೀಫ್ ತನ್ನ ಸಹಚರರು ಮತ್ತು ಸಂಬಂಧಿಕರನ್ನು ಕತ್ತಿಯಂತಹ ಮಾರಕ ಆಯುಧಗಳೊಂದಿಗೆ ಕರೆಸಿಕೊಂಡಿದ್ದಾನೆ. ಅವರು ಸ್ಥಳೀಯರ ಮೇಲೆ ದಾಳಿ ಮಾಡಿದರು ಮತ್ತು ಕೆಲವರಿಗೆ ಬೆದರಿಕೆ ಹಾಕಿದರು. ಅವರ ಕೃತ್ಯದಿಂದ ಭಯಪಡದ ಸ್ಥಳೀಯ ಯುವಕರು ಒಗ್ಗೂಡಿ 3 ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದು ಮತಾಂಧ ಮುಸ್ಲಿಮರು ಬಹಿರಂಗವಾಗಿ ಹಿಂದೂಗಳ ಮೇಲೆ ದಾಳಿ ಮಾಡಬಹುದು; ಆದರೆ ಸಂಘದ ಶಿಸ್ತುಬದ್ಧ ಪಥಸಂಚಲಕ್ಕೆ ಮಾತ್ರ ನಿರ್ಬಂಧವಿರುತ್ತದೆ! |
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ