
ಕೋಲ್ಹಾಪುರದಲ್ಲಿ ನಡೆದ ಕಾಮ್ರೇಡ್ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಯಾವುದೇ ಬಲವಾದ ಪುರಾವೆ ಇಲ್ಲದಿದ್ದರೂ ಮತ್ತು ಯಾವುದೇ ಅಪರಾಧ ಹಿನ್ನೆಲೆ ಇಲ್ಲದಿದ್ದರೂ ನಿರಪರಾಧಿ ಹಿಂದೂತ್ವನಿಷ್ಠರನ್ನು ಬಂಧಿಸಿ ಹಿಂದೂಗಳನ್ನು ಭಯೋತ್ಪಾದಕರು ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು. ಈ ಪ್ರಕರಣ ನಡೆದು ೧೦ ವರ್ಷಗಳಾದರೂ, ಕೋಲ್ಹಾಪುರದ ಪ್ರಗತಿಪರ ಗುಂಪುಗಳಿಂದ ಒತ್ತಡ ಹೇರಿ ಪ್ರಕರಣವನ್ನು ವಿಳಂಬಗೊಳಿಸುವ ಮತ್ತು ಈ ಯುವಕರನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡುವ ಷಡ್ಯಂತ್ರ ನಡೆಯುತ್ತಿತ್ತು; ಆದರೆ ಮುಂಬಯಿ ಉಚ್ಚ ನ್ಯಾಯಾಲಯದ ಕೋಲ್ಹಾಪುರದ ‘ಸರ್ಕ್ಯೂಟ್ ಬೆಂಚ್’ ಇಂದು ಈ ಪ್ರಕರಣದ ಕೊನೆಯ ೩ ಶಂಕಿತರಿಗೆ ಜಾಮೀನು ಮಂಜೂರು ಮಾಡಿದೆ. ಇದರಿಂದ ಅವರ ಷಡ್ಯಂತ್ರ ವಿಫಲವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಈ ಪತ್ರಿಕಾ ಪ್ರಕಟಣೆಯಲ್ಲಿ ಶ್ರೀ. ರಮೇಶ ಶಿಂದೆ ಅವರು, ಈ ಶಂಕಿತರಲ್ಲಿ ಈ ಹಿಂದೆ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯ ನಿರ್ವಹಿಸುತ್ತಿದ್ದ ಮತ್ತು ಕಿವಿ-ಮೂಗು-ಗಂಟಲು ತಜ್ಞರಾದ ಡಾ. ವೀರೇಂದ್ರಸಿಂಹ ತಾವಡೆ ಅವರೂ ಸೇರಿದ್ದಾರೆ. ಅವರೊಂದಿಗೆ ಶ್ರೀ. ಅಮೋಲ ಕಾಳೆ ಮತ್ತು ಶರದ್ ಕಳಸ್ಕರ್ ಎಂಬ ಹಿಂದೂತ್ವನಿಷ್ಠರಿಗೂ ಜಾಮೀನು ಮಂಜೂರಾಗಿದೆ. ‘ಜಾಮೀನು ಒಂದು ನಿಯಮ; ಜೈಲಿನಲ್ಲಿ ಒಂದು ಅಪವಾದ’ ಎಂಬಂತಹ ವಾಕ್ಯವನ್ನು ನ್ಯಾಯಾಧೀಶರು ಅನೇಕ ತೀರ್ಪುಗಳಲ್ಲಿ ಬಳಸಿದ್ದಾರೆ; ಆದರೆ ಈ ಮೊಕದ್ದಮೆಯಲ್ಲಿ ಪುರಾವೆ ಇಲ್ಲದಿದ್ದರೂ, ಈ ಹಿಂದೂತ್ವನಿಷ್ಠರನ್ನು ಮಾತ್ರ ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಯುವಂತೆ ಮಾಡಲಾಯಿತು. ಇದರ ವಿರುದ್ಧ ಹೋರಾಡಿದ ಅನೇಕ ಗಣ್ಯ ನ್ಯಾಯವಾದಿಗಳು ದಣಿವರಿಯದ ಪ್ರಯತ್ನ ಮಾಡಿ, ಅವರ ಸರಿಯಾದ ಪಕ್ಷವನ್ನು ಮಂಡಿಸಿ, ಅವರ ಮೇಲಾದ ಅನ್ಯಾಯವನ್ನು ನ್ಯಾಯಾಲಯದ ಗಮನಕ್ಕೆ ತಂದರು. ಆ ಎಲ್ಲಾ ನ್ಯಾಯವಾದಿಗಳಿಗೂ ಹಿಂದೂ ಜನಜಾಗೃತಿ ಸಮಿತಿಯ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇವೆ. ದೀಪಾವಳಿಯ ಹಬ್ಬದ ಮೊದಲು ಬಂದ ಈ ಸುದ್ದಿ ಸಮಸ್ತ ಹಿಂದೂತ್ವನಿಷ್ಠರಿಗೇ ಸಂತೋಷದ ಸುದ್ದಿಯಾಗಿದೆ, ಎಂದು ಹೇಳಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !