ಕೇರಳ ಉಚ್ಚ ನ್ಯಾಯಾಲಯದಿಂದ ಕೇರಳ ವಕ್ಫ್ ಮಂಡಳಿಗೆ ಛೀಮಾರಿ!

ತಿರುವನಂತಪುರಂ (ಕೇರಳ) – ಮುನಂಬಮ್ನ ಭೂಮಿಯನ್ನು ವಕ್ಫ್ (ಇಸ್ಲಾಮಿಕ್ ಧಾರ್ಮಿಕ ನಿಧಿ ಭೂಮಿ) ಎಂದು ಅಧಿಸೂಚಿಸುವ ಕೇರಳ ವಕ್ಫ್ ಮಂಡಳಿಯ ನಿರ್ಧಾರವನ್ನು ಕೇರಳ ಉಚ್ಚ ನ್ಯಾಯಾಲಯ ತೀವ್ರವಾಗಿ ಟೀಕಿಸಿದೆ. ನ್ಯಾಯಾಲಯವು ಈ ನಿರ್ಧಾರವು ‘ವಕ್ಫ್ ಕಾಯ್ದೆ 1954 ಮತ್ತು 1995’ ರ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದು, ಇದನ್ನು ‘ಈ ನಿರ್ಧಾರವು ಭೂ ಕಬಳಿಕೆಯ ಪ್ರಯತ್ನವಾಗಿದೆ’ ಎಂಬ ಕಠಿಣ ಪದಗಳಲ್ಲಿ ತರಾಟೆಗೆ ತೆಗೆದುಕೊಂಡಿದೆ. ಸರಕಾರ ರಚಿಸಿದ ವಿಚಾರಣಾ ಆಯೋಗವನ್ನು ನ್ಯಾಯಾಲಯವು ಎತ್ತಿಹಿಡಿದಿದೆ. ಈ ವಿವಾದದ ಎಲ್ಲಾ ಅಂಶಗಳನ್ನು ಪರಿಶೀಲಿಸುವುದು ಈ ಆಯೋಗದ ಉದ್ದೇಶವಾಗಿದೆ.
ವಕ್ಫ್ ಮಂಡಳಿಯು ಈ ಆಸ್ತಿಯನ್ನು ‘ವಕ್ಫ್’ ಎಂದು ಘೋಷಿಸಲು ಅಗತ್ಯವಾದ ಪ್ರಕ್ರಿಯೆಯನ್ನು ಅನುಸರಿಸದೆ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಂಡಿದೆ, ಆದರೆ ಈ ಆಸ್ತಿಯನ್ನು ಈ ಹಿಂದೆ ಆ ಪ್ರದೇಶದ ಅನೇಕ ಖರೀದಿದಾರರು ಬಳಸುತ್ತಿದ್ದರು ಮತ್ತು ಅದರಲ್ಲಿ ವಾಸಿಸುತ್ತಿದ್ದರು ಎಂದು ನ್ಯಾಯಾಲಯ ಹೇಳಿದೆ. ಈ ನಿರ್ಧಾರದಿಂದ ಆ ಭೂಮಿಯನ್ನು ಖರೀದಿಸಿದ ನಿಜವಾದ ಮಾಲೀಕರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಿದೆ. ಈ ರೀತಿಯ ಅನಿಯಂತ್ರಿತ ಘೋಷಣೆಗಳಿಗೆ ಮಾನ್ಯತೆ ನೀಡಿದರೆ, ನಾಳೆ ಯಾವುದೇ ಐತಿಹಾಸಿಕ ಅಥವಾ ಸಾರ್ವಜನಿಕ ಕಟ್ಟಡಗಳನ್ನು, ಉದಾಹರಣೆಗೆ ತಾಜ್ ಮಹಲ್, ಕೆಂಪು ಕೋಟೆ, ವಿಧಾನಸಭೆಯ ಕಟ್ಟಡ ಇಂತಹ ಯಾವುದೇ ಸ್ಥಳವನ್ನು ವಕ್ಫ್ ಎಂದು ಘೋಷಿಸಬಹುದು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ