ಮುನಂಬಮ್ (ಕೇರಳ) ನ ಭೂಮಿಯನ್ನು ‘ವಕ್ಫ್’ ಎಂದು ಅಧಿಸೂಚಿಸುವ ನಿರ್ಧಾರವು ಭೂ ಕಬಳಿಕೆಯ ಪ್ರಯತ್ನವಾಗುತ್ತದೆ! Waqf Notice Kerala High Court Condemn

ಕೇರಳ ಉಚ್ಚ ನ್ಯಾಯಾಲಯದಿಂದ ಕೇರಳ ವಕ್ಫ್ ಮಂಡಳಿಗೆ ಛೀಮಾರಿ!

ತಿರುವನಂತಪುರಂ (ಕೇರಳ) – ಮುನಂಬಮ್‌ನ ಭೂಮಿಯನ್ನು ವಕ್ಫ್ (ಇಸ್ಲಾಮಿಕ್ ಧಾರ್ಮಿಕ ನಿಧಿ ಭೂಮಿ) ಎಂದು ಅಧಿಸೂಚಿಸುವ ಕೇರಳ ವಕ್ಫ್ ಮಂಡಳಿಯ ನಿರ್ಧಾರವನ್ನು ಕೇರಳ ಉಚ್ಚ ನ್ಯಾಯಾಲಯ ತೀವ್ರವಾಗಿ ಟೀಕಿಸಿದೆ. ನ್ಯಾಯಾಲಯವು ಈ ನಿರ್ಧಾರವು ‘ವಕ್ಫ್ ಕಾಯ್ದೆ 1954 ಮತ್ತು 1995’ ರ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದು, ಇದನ್ನು ‘ಈ ನಿರ್ಧಾರವು ಭೂ ಕಬಳಿಕೆಯ ಪ್ರಯತ್ನವಾಗಿದೆ’ ಎಂಬ ಕಠಿಣ ಪದಗಳಲ್ಲಿ ತರಾಟೆಗೆ ತೆಗೆದುಕೊಂಡಿದೆ. ಸರಕಾರ ರಚಿಸಿದ ವಿಚಾರಣಾ ಆಯೋಗವನ್ನು ನ್ಯಾಯಾಲಯವು ಎತ್ತಿಹಿಡಿದಿದೆ. ಈ ವಿವಾದದ ಎಲ್ಲಾ ಅಂಶಗಳನ್ನು ಪರಿಶೀಲಿಸುವುದು ಈ ಆಯೋಗದ ಉದ್ದೇಶವಾಗಿದೆ.

ವಕ್ಫ್ ಮಂಡಳಿಯು ಈ ಆಸ್ತಿಯನ್ನು ‘ವಕ್ಫ್’ ಎಂದು ಘೋಷಿಸಲು ಅಗತ್ಯವಾದ ಪ್ರಕ್ರಿಯೆಯನ್ನು ಅನುಸರಿಸದೆ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಂಡಿದೆ, ಆದರೆ ಈ ಆಸ್ತಿಯನ್ನು ಈ ಹಿಂದೆ ಆ ಪ್ರದೇಶದ ಅನೇಕ ಖರೀದಿದಾರರು ಬಳಸುತ್ತಿದ್ದರು ಮತ್ತು ಅದರಲ್ಲಿ ವಾಸಿಸುತ್ತಿದ್ದರು ಎಂದು ನ್ಯಾಯಾಲಯ ಹೇಳಿದೆ. ಈ ನಿರ್ಧಾರದಿಂದ ಆ ಭೂಮಿಯನ್ನು ಖರೀದಿಸಿದ ನಿಜವಾದ ಮಾಲೀಕರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಿದೆ. ಈ ರೀತಿಯ ಅನಿಯಂತ್ರಿತ ಘೋಷಣೆಗಳಿಗೆ ಮಾನ್ಯತೆ ನೀಡಿದರೆ, ನಾಳೆ ಯಾವುದೇ ಐತಿಹಾಸಿಕ ಅಥವಾ ಸಾರ್ವಜನಿಕ ಕಟ್ಟಡಗಳನ್ನು, ಉದಾಹರಣೆಗೆ ತಾಜ್ ಮಹಲ್, ಕೆಂಪು ಕೋಟೆ, ವಿಧಾನಸಭೆಯ ಕಟ್ಟಡ ಇಂತಹ ಯಾವುದೇ ಸ್ಥಳವನ್ನು ವಕ್ಫ್ ಎಂದು ಘೋಷಿಸಬಹುದು.