ಉತ್ತರ ಬಂಗಾಳದಲ್ಲಿ ವರುಣದ ಆರ್ಭಟ : ೯ ಜನರ ಸಾವು

ಕೆಲವು ಭಾಗಗಳಲ್ಲಿ ಭೂಕುಸಿತ, ೧ ಸೇತುವೆಯೂ ಕುಸಿತ

ಡಾರ್ಜಿಲಿಂಗ್ (ಬಂಗಾಳ) – ಉತ್ತರ ಬಂಗಾಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯು ಇಲ್ಲಿಯವರೆಗೆ ೯ ಜನರ ಜೀವವನ್ನು ತೆಗೆದುಕೊಂಡಿದೆ. ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ಮತ್ತು ಸೇತುವೆ ಕುಸಿತದ ಘಟನೆಗಳಿಂದಾಗಿ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

೧. ಮಿರಿಕ್ ಮತ್ತು ಸುಖಿಯಾ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದ ಹಲವು ಮನೆಗಳು ಕೊಚ್ಚಿಹೋಗಿವೆ ಮತ್ತು ರಸ್ತೆಗಳು ಮುಚ್ಚಿಹೋಗಿವೆ.

೨. ಕಾಲಿಂಪಾಂಗ್‌ನಲ್ಲಿ ನಿರಂತರ ಮಳೆಯಿಂದಾಗಿ ಅಲ್ಲಿನ ಹಲವು ಪ್ರದೇಶಗಳ ಸಂಪರ್ಕ ಕಡಿತಗೊಂಡಿದೆ.

೩. ದುಧಿಯಾ ಇಲ್ಲಿ ಕಬ್ಬಿಣದ ಸೇತುವೆಯ ಒಂದು ಭಾಗ ಕುಸಿದ ಕಾರಣ ‘ಸಿಲಿಗುರಿ-ಡಾರ್ಜಿಲಿಂಗ್ ರಾಜ್ಯ ಹೆದ್ದಾರಿ’ಯಲ್ಲಿ ವಾಹನ ಸಂಚಾರ ನಿಂತಿದೆ.

ಪ್ರಧಾನಮಂತ್ರಿ ಮೋದಿ ದುಃಖ ವ್ಯಕ್ತ !

‘ಡಾರ್ಜಿಲಿಂಗ್‌ನಲ್ಲಿನ ಸೇತುವೆ ದುರಂತದಲ್ಲಿ ಆದ ಜೀವಹಾನಿಯ ಬಗ್ಗೆ ನನಗೆ ತೀವ್ರ ದುಃಖವಾಗಿದೆ. ಡಾರ್ಜಿಲಿಂಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಪರಿಸ್ಥಿತಿಯ ಮೇಲೆ ಸೂಕ್ಷ್ಮವಾಗಿ ನಿಗಾ ಇಡಲಾಗಿದೆ. ಸಂತ್ರಸ್ತರಿಗೆ ಎಲ್ಲ ರೀತಿಯ ಸಹಾಯ ಮಾಡಲು ನಾವು ಬದ್ಧರಾಗಿದ್ದೇವೆ’ ಎಂಬ ಶಬ್ದಗಳಲ್ಲಿ ಪ್ರಧಾನಮಂತ್ರಿ ಮೋದಿ ಅವರು ‘ಎಕ್ಸ್’ (X) ನಲ್ಲಿನ ಪೋಸ್ಟ್ ಮೂಲಕ ದುಃಖ ವ್ಯಕ್ತಪಡಿಸಿದ್ದಾರೆ.