
ವಾರಣಾಸಿ (ಉತ್ತರ ಪ್ರದೇಶ) –ಪ್ರಸ್ತುತ ಶ್ರಾದ್ಧ ಪಕ್ಷ (ಪಿತೃಪಕ್ಷ) ನಡೆಯುತ್ತಿದೆ. ಅನೇಕರಿಗೆ ಕಾಶಿ ಅಥವಾ ಗಯಾಗೆ ಹೋಗಿ ಶ್ರಾದ್ಧ ಮಾಡಲು ಇಚ್ಛೆ ಇರುತ್ತದೆ; ಆದರೆ ಅದು ಸಾಧ್ಯವಾಗುವುದಿಲ್ಲ. ಇಂತಹವರಿಗಾಗಿ ಕಾಶಿಯಲ್ಲಿ ಪುರೋಹಿತರು ಆನ್ಲೈನ್ ಮೂಲಕ ಶ್ರಾದ್ಧ ಮಾಡಿಸುವ ವ್ಯವಸ್ಥೆ ಒದಗಿಸಿದ್ದಾರೆ. ಇದರ ಲಾಭವನ್ನು ವಿದೇಶದಲ್ಲಿರುವ ಹಿಂದೂಗಳೂ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿ ಕ್ಯಾಮರಾ ಜೋಡಿಸಲಾಗಿರುತ್ತದೆ ಮತ್ತು ಪುರೋಹಿತರು ಸಂಬಂಧಪಟ್ಟ ವ್ಯಕ್ತಿಗಳಿಗಾಗಿ ಶ್ರಾದ್ಧ ಮಾಡಿ, ಅದರ ಲೈವ್ ಪ್ರಸಾರ ಮಾಡುತ್ತಾರೆ. ಕೆಲವು ಪುರೋಹಿತರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಮಾಡಿ ಅದನ್ನು ಸಂಬಂಧಪಟ್ಟವರಿಗೆ ಕಳುಹಿಸುತ್ತಿದ್ದಾರೆ. ಈ ಆನ್ಲೈನ್ ವಿಧಿಗಾಗಿ ಆ್ಯಪ್ ಮೂಲಕ ಬುಕಿಂಗ್ ಮಾಡಲಾಗುತ್ತದೆ ಮತ್ತು ಕ್ಯೂಆರ್ ಕೋಡ್ ಮೂಲಕ ಹಣ ಕಳುಹಿಸಲಾಗುತ್ತದೆ.
💻🕉️ Online Pind Daan in Kashi!
▪️ Priests in Varanasi now perform rituals via livestream 🎥
▪️ Families abroad (UK, US, Australia, Singapore) watch on their phones 📱
▪️ Booking through apps, QR code payments 💳
▪️ Gotra, name, address taken online ➝ Sankalp & Shraddh Karma… pic.twitter.com/dvnAwprjVY
— Sanatan Prabhat (@SanatanPrabhat) September 20, 2025
ಈ ಕುರಿತು ಆಚಾರ್ಯ ಮೋಹಿತ್ ಉಪಾಧ್ಯಾಯ ಅವರನ್ನು ವಿಚಾರಿಸಿದಾಗ ಅವರು, “ಪೂಜೆ ಮಾಡಿಸಿಕೊಳ್ಳುವವರು ವಿದೇಶದಲ್ಲಿ ಕುಳಿತು ನೇರವಾಗಿ ವಿಧಿಗಳನ್ನು ನೋಡುತ್ತಿದ್ದಾರೆ. ಆಸ್ಟ್ರೇಲಿಯಾ, ಯುಕೆ, ಅಥವಾ ಅಮೆರಿಕಾದಲ್ಲಿ ಅನೇಕ ಭಾರತೀಯರು ಇದ್ದಾರೆ. ಅವರು ಅಲ್ಲಿ ನೆಲೆಸಿದ್ದಾರೆ; ಆದರೆ ಅವರಿಗೆ ಕಾಶಿಯಲ್ಲಿ ತಮ್ಮ ಪೂರ್ವಜರಿಗಾಗಿ ಪಿಂಡದಾನ ಮಾಡಿಸಬೇಕಿದೆ. ಅವರಿಗೆ ಇಲ್ಲಿಗೆ ಬರಲು ತೊಂದರೆ ಆಗುತ್ತದೆ. ಅನೇಕ ಜನರು ಆರೋಗ್ಯ ಸಮಸ್ಯೆಗಳಿಂದ ಬರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವರು ನಮ್ಮನ್ನು ಸಂಪರ್ಕಿಸುತ್ತಾರೆ. ನಾವು ಯಾರಿಗೆ ಪಿಂಡದಾನ ಮಾಡಬೇಕಿದೆಯೋ ಅವರ ಗೋತ್ರ, ವಂಶ, ಹೆಸರು ಮತ್ತು ವಿಳಾಸವನ್ನು ಕೇಳುತ್ತೇವೆ. ಮೊಬೈಲ್ನಲ್ಲಿಯೇ ಸಂಕಲ್ಪ ಮಾಡಲಾಗುತ್ತದೆ, ನಂತರ ಪೂಜೆ ಪ್ರಾರಂಭವಾಗುತ್ತದೆ. ನಾವು ಒಂದೇ ಸಮಯದಲ್ಲಿ 5-6 ಜನರಿಗಾಗಿ ಪೂಜೆ ಮಾಡಬಹುದು” ಎಂದು ಹೇಳಿದರು.
ಪಂಡಿತ್ ಯೋಗಿ ಅಲೋಕ್ ಅವರು, “ವಿದೇಶದಿಂದ ಜನರು ಸದಾ ಕಾಶಿಗೆ ಬರುತ್ತಿದ್ದಾರೆ; ಆದರೆ ಈಗ ಜನಸಂದಣಿ ಹೆಚ್ಚಾಗಿ ವಿದೇಶದಿಂದ ಬರುವ ಭಕ್ತರಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಜನರು ಪಿಂಡದಾನವನ್ನು ಆನ್ಲೈನ್ ಮೂಲಕ ಮಾಡಿಸಿಕೊಳ್ಳಲು ಪ್ರಾರಂಭಿಸಿದ್ದಾರೆ” ಎಂದು ತಿಳಿಸಿದರು.
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ
ಪಂಚಕುಲಾ (ಹರಿಯಾಣ): ಮೇಯರ್ ಕಚೇರಿ ಸೇರಿದಂತೆ ಹರಿಯಾಣ ಮತ್ತು ದೆಹಲಿಯ ದೇವಸ್ಥಾನಗಳನ್ನು ಬಾಂಬ್ನಿಂದ ಸ್ಫೋಟಿಸುವುದಾಗಿ ಬೆದರಿಕೆ
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ