ಉತ್ತರ ಪ್ರದೇಶ (ಗೋರಖಪುರ)ಇಲ್ಲಿ ಗೋ ಕಳ್ಳಸಾಗಣೆದಾರರಿಂದ ವಿದ್ಯಾರ್ಥಿಯ ಹತ್ಯೆ

  • ಗ್ರಾಮಸ್ಥರಿಂದ ಹಿಂಸಾತ್ಮಕ ಪ್ರತಿಭಟನೆ

  • ಪೊಲೀಸರ ಮೇಲೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ

ಗೋರಖಪುರ (ಉತ್ತರ ಪ್ರದೇಶ) – ಗೋರಖಪುರದ ಪಿಪರೈಚ ಪ್ರದೇಶದ ಧೂಷಣ ಮಹುವಾ ಚಾಪಿಯಲ್ಲಿ ರಾತ್ರಿಯಲ್ಲಿ ಗೋ ಕಳ್ಳಸಾಗಣೆದಾರರು ವಿದ್ಯಾರ್ಥಿಯೊಬ್ಬನನ್ನು ಹೊಡೆದು ಕೊಂದರು. ಕಳ್ಳಸಾಗಣೆದಾರರು ವಿದ್ಯಾರ್ಥಿಯನ್ನು ಕಾರಿನಿಂದ ಹೊರಗೆ ತಳ್ಳಿದರು, ಇದರಿಂದಾಗಿ ಅವನ ತಲೆಗೆ ಗಂಭೀರ ಗಾಯಗಳಾಗಿ ಸಾವನ್ನಪ್ಪಿದನು. ಈ ಘಟನೆಯಿಂದಾಗಿ, ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ತಡೆ ನಡೆಸಿ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಲ್ಲಿ ಅನೇಕ ಪೊಲೀಸರು ಗಾಯಗೊಂಡರು. ಇದರೊಂದಿಗೆ ಒಂದು ವಾಹನಕ್ಕೆ ಬೆಂಕಿ ಹಚ್ಚಲಾಯಿತು.

ಪೊಲೀಸರು ಗೋ -ಕಳ್ಳಸಾಗಣೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದಲೇ ವಿದ್ಯಾರ್ಥಿಯ ಕೊಲೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದಾಗಿ ನಾಗರಿಕರು ಪ್ರತಿಭಟನೆ ನಡೆಸಿ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ.

ಸಂಪಾದಕೀಯ ನಿಲುವು

  • ದೇಶಾದ್ಯಂತ ಗೋ ಕಳ್ಳಸಾಗಣೆದಾರರ ಸಮಸ್ಯೆ ವ್ಯಾಪಕವಾಗಿದ್ದರೂ, ಜಿಹಾದಿ ಭಯೋತ್ಪಾದನೆ ಮತ್ತು ನಕ್ಸಲವಾದದಂತೆಯೇ ಈ ವಿಷಯದ ಬಗ್ಗೆಯೂ ದೇಶಾದ್ಯಂತ ಅಭಿಯಾನವನ್ನು ಪ್ರಾರಂಭಿಸುವುದು ಅಗತ್ಯವಾಗಿದೆ, ಆಗ ಮಾತ್ರ ಗೋವುಗಳನ್ನು ರಕ್ಷಿಸಲು ಸಾಧ್ಯ!
  • ಗೋ ಕಳ್ಳಸಾಗಣೆ ಕುರಿತು ಕಾನೂನುಗಳಿದ್ದರೂ ಪೊಲೀಸರು ನಿಷ್ಕ್ರಿಯರಾಗಿರುವುದು ಎಲ್ಲೆಡೆ ಕಂಡುಬರುತ್ತದೆ. ಅದಕ್ಕಾಗಿಯೇ ಗೋ ರಕ್ಷಕರು ಗೋ ರಕ್ಷಣೆಯ ಕಾರ್ಯವನ್ನು ಮಾಡಬೇಕಾಗಿದೆ. ಹಿಂದೂಗಳು ಅಧಿಕಾರವನ್ನು ನೀಡಿರುವ ಸರಕಾರಗಳಿಂದ ಇದು ಅಪೇಕ್ಷಿತವಲ್ಲ!