88 ಲಕ್ಷ ರೂಪಾಯಿಗಳ ಅವ್ಯವಹಾರ; ‘ಜೆ.ಎನ್.ಯು.’ ಮಾಜಿ ಪ್ರಾಧ್ಯಾಪಕರ ವಿರುದ್ಧ ಪ್ರಕರಣ ದಾಖಲು

ನವದೆಹಲಿ – ಕೇಂದ್ರೀಯ ತನಿಖಾ ದಳವು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಎ.ಎಲ್. ರಾಮನಾಥನ ಮತ್ತು ಇತರ 5 ನೌಕರರ ವಿರುದ್ಧ 88 ಲಕ್ಷ ರೂಪಾಯಿಗಳಿಗೂ ಹೆಚ್ಚು ಹಣದ ಅವ್ಯವಹಾರಗಳ ಪ್ರಕರಣ ದಾಖಲಿಸಿದೆ. ಪ್ರಕರಣ ಈ ಹಿಂದೆ ದೆಹಲಿ ಪೊಲೀಸರ ಬಳಿ ಇತ್ತು; ಆದರೆ ಈಗ ಅದರ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಲಾಗಿದೆ. ವಿಶ್ವವಿದ್ಯಾಲಯದ ಹಣಕಾಸು ವಿಭಾಗವು ವಾರ್ಷಿಕ ಆಯ-ವ್ಯಯವನ್ನು ಸಿದ್ಧಪಡಿಸುವಾಗ ಈ ಅಕ್ರಮ ಬೆಳಕಿಗೆ ಬಂದಿತ್ತು.

ಸಂಪಾದಕೀಯ ನಿಲುವು

ಇಂತಹ ಪ್ರಾಧ್ಯಾಪಕರು ಕೆಲಸದಲ್ಲಿದ್ದಾಗ ಅವರು ಮಾಡಿದ ಎಲ್ಲಾ ಕೆಲಸಗಳ ಮತ್ತು ತೆಗೆದುಕೊಂಡ ಎಲ್ಲಾ ನಿರ್ಧಾರಗಳ ತನಿಖೆಯೂ ಆಗಬೇಕು!