ಮೆರವಣಿಗೆ ನಿಯಮ ಉಲ್ಲಂಘನೆ : 17 ಗಣೇಶ ಉತ್ಸವ ಮಂಡಳಿಗಳಿಗೆ ದಂಡ!

ವಾಶೀಮ ನಲ್ಲಿನ ಘಟನೆ

ವಾಶೀಮ – ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಡಿಜೆ ಮತ್ತು ಲೇಸರ್ ಲೈಟ್ (ವಿದ್ಯುತ್ಕಾಂತೀಯ ವಿಕಿರಣದಿಂದ ಉತ್ಪತ್ತಿಯಾಗುವ ಬೆಳಕು) ಬಳಸುವುದನ್ನು ನಿಷೇಧಿಸಲಾಗಿತ್ತು. ಆದರೆ, ವಾಶೀಮ ಜಿಲ್ಲೆಯ ಕೆಲವು ಗಣೇಶ ಉತ್ಸವ ಮಂಡಳಿಗಳು ಈ ನಿಯಮವನ್ನು ಪಾಲಿಸಲಿಲ್ಲ. ಈ ಕಾರಣಕ್ಕಾಗಿ, ಪೊಲೀಸ್ ಇಲಾಖೆಯು 17 ಮಂಡಳಿಗಳ ಮೇಲೆ ದಂಡ ವಿಧಿಸುವ ಕ್ರಮ ಕೈಗೊಂಡಿದೆ. ಡಿಜೆಯ ಪ್ರತಿ ವಾಹನಕ್ಕೆ 15 ರಿಂದ 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ ಮತ್ತು ಡೆಸಿಬಲ್ ಮಿತಿ ಮೀರಿದ ಕಾರಣಕ್ಕೆ ನೋಟಿಸ್ ಕೂಡ ನೀಡಲಾಗಿದೆ.