ಗೋಕರ್ಣ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಭದ್ರತಾ ಸಿಬ್ಬಂದಿ

ಮಂಗಳೂರು – ಉತ್ತರ ಕರ್ನಾಟಕದ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಕಳೆದ 7 ವರ್ಷಗಳಿಂದ ಭಕ್ತರಿಗೆ ವಸ್ತ್ರ ಸಂಹಿತೆ ಕಡ್ಡಾಯವಾಗಿದೆ. ಇದೀಗ ಇದೇ ನಿಯಮವನ್ನು ಭದ್ರತಾ ಸಿಬ್ಬಂದಿಗೂ ಜಾರಿಗೊಳಿಸಲಾಗಿದೆ. ದೇವಸ್ಥಾನದ ಆಡಳಿತವು ಈಗ ಭದ್ರತಾ ಸಿಬ್ಬಂದಿಗೆ ಶರ್ಟ್, ಧೋತಿ ಮತ್ತು ಶಾಲು ಧರಿಸುವಂತೆ ಸೂಚನೆ ನೀಡಿದೆ. ಈ ನಿಯಮ ಇತ್ತೀಚೆಗೆ ಜಾರಿಗೆ ಬಂದಿದೆ.