ಯಮುನೋತ್ರಿ ಹೆದ್ದಾರಿಯಲ್ಲಿ 6 ಹೊಸ ಪ್ರದೇಶಗಳನ್ನು ‘ಭೂಕುಸಿತ ಸಂಭವಿಸುವ ಪ್ರದೇಶ’ಗಳೆಂದು ನೊಂದಣಿ Uttarakhand Highway Landslides

ಯಮುನೋತ್ರಿ ಧಾಮದ ಯಾತ್ರೆ ಸುರಕ್ಷಿತವಾಗಿ ಪುನರಾರಂಭವಾಗುವುದು ಸದ್ಯಕ್ಕೆ ಅನುಮಾನ

ಡೆಹ್ರಾಡೂನ್ (ಉತ್ತರಾಖಂಡ) – ಉತ್ತರಕಾಶಿ ಜಿಲ್ಲೆಯ ಯಮುನೋತ್ರಿ ಹೆದ್ದಾರಿಯಲ್ಲಿ 6 ಹೊಸ ಪ್ರದೇಶಗಳನ್ನು ‘ಭೂಕುಸಿತ ಸಂಭವಿಸುವ ಪ್ರದೇಶ’ಗಳೆಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಪ್ರಯಾಣ ಮಾಡುವುದು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಜಂಗಲ್‌ಚಟ್ಟಿ ಮತ್ತು ನಾರದಚಟ್ಟಿ ನಡುವಿನ ರಸ್ತೆ ಕಳೆದ 8 ದಿನಗಳಿಂದ ಮುಚ್ಚಿದೆ. ಯಮುನಾ ನದಿಯ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಸಿಯಾನಚಟ್ಟಿ ಸೇತುವೆಗೂ ಅಪಾಯ ಎದುರಾಗಿದೆ.

ಮಳೆಗಾಲದಲ್ಲಿ ಕುತ್ನೌರ್‌ನಿಂದ ಜಾನಕಿಚಟ್ಟಿ ನಡುವಿನ 12 ಸ್ಥಳಗಳಲ್ಲಿ ರಸ್ತೆ ಹಾಳಾಗಿದ್ದು ಹನುಮಾನ್‌ಚಟ್ಟಿಯಿಂದ ಫೂಲ್‌ಚಟ್ಟಿ ಮಾರ್ಗದ ಹಲವು ಸ್ಥಳಗಳಲ್ಲಿ ರಸ್ತೆಗಳು ಕೆಟ್ಟ ಸ್ಥಿತಿಯಲ್ಲಿವೆ. 25 ಕಿಮೀ ವ್ಯಾಪ್ತಿಯಲ್ಲಿ, 200 ರಿಂದ 300 ಮೀಟರ್ ಎತ್ತರದ ಬಂಡೆಗಳಿಂದ ಕಲ್ಲುಗಳು ಬೀಳುವ ಅಪಾಯವಿದೆ.
ಈ ಹಿನ್ನೆಲೆಯಲ್ಲಿ, ಯಮುನೋತ್ರಿ ಧಾಮದ ಯಾತ್ರೆ ಸುರಕ್ಷಿತವಾಗಿ ಪುನರಾರಂಭವಾಗುತ್ತದೆಯೇ? ಎಂಬ ಬಗ್ಗೆ ಅನಿಶ್ಚಿತತೆ ನಿರ್ಮಾಣವಾಗಿದೆ. ಸ್ಥಳೀಯ ಆಡಳಿತ ಮತ್ತು ಹೆದ್ದಾರಿ ಇಲಾಖೆ ರಸ್ತೆಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿವೆ; ಆದರೆ ನಿರಂತರ ಮಳೆಯಿಂದಾಗಿ ತೊಂದರೆಗಳು ಉಂಟಾಗುತ್ತಿವೆ.