“ಟ್ರಂಪ್ ಸಲಹೆಗಾರ ನವಾರೋ, ಭಾರತದ ಜಾತಿ ವಿಚಾರದಲ್ಲಿ ವಿವಾದ”

(ಡೀಪ್ ಸ್ಟೇಟ್ ಎಂದರೆ ಸರಕಾರಿ ಅಧಿಕಾರಿಗಳು ಮತ್ತು ಖಾಸಗಿ ಸಂಸ್ಥೆಗಳ ರಹಸ್ಯ ಜಾಲ. ಈ ವ್ಯವಸ್ಥೆಯ ಮೂಲಕ ಸರಕಾರದ ನೀತಿಗಳನ್ನು ಖಾಸಗಿ ಸಂಸ್ಥೆಗಳಿಗೆ ಅನುಕೂಲಕರವಾಗಿ ರೂಪಿಸಲಾಗುತ್ತದೆ.)
ವಾಷಿಂಗ್ಟನ್ (ಅಮೆರಿಕ) – ರಷ್ಯಾದಿಂದ ತೈಲ ಖರೀದಿಸುವ ಭಾರತದ ಮೇಲೆ ಶೇ 50ರಷ್ಟು ಹೆಚ್ಚುವರಿ ಸುಂಕ ವಿಧಿಸಿರುವ ಅಮೆರಿಕದ ಭಾರತ ವಿರೋಧಿ ಮುಖ ಈಗ ಹೊರಬಿದ್ದಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮುಖ ವ್ಯಾಪಾರ ಸಲಹೆಗಾರರಾದ ಪೀಟರ್ ನವರೋ, ರಷ್ಯಾದ ತೈಲದಿಂದ ಭಾರತದ ಬ್ರಾಹ್ಮಣರು ಲಾಭ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ನವರೋ ಈ ಹಿಂದಿನ ಹೇಳಿಕೆಗಳಲ್ಲಿ ರಷ್ಯಾ-ಉಕ್ರೇನ್ ಯುದ್ಧವನ್ನು ‘ಮೋದಿ ಯುದ್ಧ’ ಎಂದು ಕರೆದಿದ್ದರು. ರಷ್ಯಾದ ತೈಲದಿಂದ ಭಾರತದ ಕೆಲವೇ ಕೆಲವು ಉದ್ಯಮಿಗಳಿಗೆ ಲಾಭವಾಗುತ್ತಿದೆ ಎಂದೂ ಅವರು ಹೇಳಿದ್ದರು. ಅಮೆರಿಕದ ಯುದ್ಧವು ಭಾರತದ ಸಂಸ್ಕೃತಿ ಮತ್ತು ನಾಗರಿಕತೆಯ ವಿರುದ್ಧ ಇದೆ ಎಂದೂ ನವರೋ ಹೇಳಿದ್ದರು. ಆದರೆ ಈಗ, ಅವರು ಭಾರತದ ಆಂತರಿಕ ಸಾಮಾಜಿಕ ರಚನೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿದ್ದಾರೆ.
⚠️ US interference alert!
Trump’s Trade Advisor Peter Navarro now comments on Indian castes –
🗣️ “Brahmins benefit from Russian oil!”
🇺🇸 First they tried to break India’s economy. Now they target Hindu unity.
🚨 Hindus, beware! If Congress & anti-Brahmin lobbies amplify this,… pic.twitter.com/cBdBgMDUhI
— Sanatan Prabhat (@SanatanPrabhat) September 1, 2025
ನವರೋ ಅವರ ಈ ಹೇಳಿಕೆ ಹುಚ್ಚುತನದ್ದಲ್ಲ, ಅದರ ಹಿಂದೆ ಆಳವಾದ ರಾಜಕೀಯ ಸಿದ್ಧಾಂತ ಅಡಗಿದೆ. ಅಮೆರಿಕ ‘ಬ್ರಾಹ್ಮಣರ ವಿರುದ್ಧ’ ಹಿಂಸೆಯನ್ನು ಬಯಸುತ್ತಿದೆಯೇ ಎಂಬ ಪ್ರಶ್ನೆಗಳನ್ನು ತಜ್ಞರು ಕೇಳಲು ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಅಭಿಜಿತ ಮಜುಂದಾರ್ ಅವರ ಹೇಳಿಕೆ ಆಲೋಚನೆಗೆ ಹಚ್ಚುವಂತಿದೆ.
ಭಾರತದಲ್ಲಿ ಅಧಿಕಾರವನ್ನು ಉರುಳಿಸಲು ಅಮೆರಿಕದ ಪ್ರಯತ್ನಗಳು! – ಮಜುಂದಾರ್
ಟ್ರಂಪ್ ಆಡಳಿತವು ಭಾರತದ ಜಾತಿ ವಿಭಜನೆಯ ಲಾಭ ಪಡೆಯಲು ‘ಡೀಪ್ ಸ್ಟೇಟ್’-ಕಮ್ಯುನಿಸ್ಟ್-ಇಸ್ಲಾಮಿಸ್ಟ್ ತಂತ್ರವನ್ನು ಅನುಸರಿಸುತ್ತಿದೆ ಎಂದು ಮಜುಂದಾರ್ ಹೇಳಿದ್ದಾರೆ. ಈ ಪ್ರಯತ್ನ ಅತ್ಯಂತ ಭಯಾನಕವಾಗಿದೆ. ಅಮೆರಿಕ ಈಗ ಭಾರತದಲ್ಲಿ ಅಶಾಂತಿ ಹರಡಲು ಆರಂಭಿಸಿದೆ. ಮುಂಬರುವ ದಿನಗಳಲ್ಲಿ ಭಾರತದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಇದೆ ಮತ್ತು ಇದರ ಹಿಂದೆ ಅಮೆರಿಕದ ಗುಪ್ತಚರ ಸಂಸ್ಥೆಗಳು ಇರಬಹುದು. ಬಾಂಗ್ಲಾದೇಶ ಮತ್ತು ಪಾಕಿಸ್ತಾನದಂತೆ ಭಾರತದಲ್ಲಿಯೂ ಅಧಿಕಾರ ಬದಲಾಯಿಸಲು ಅಮೆರಿಕ ಪ್ರಯತ್ನಿಸುತ್ತಿದೆ ಮತ್ತು ಅದಕ್ಕಾಗಿ ಜನಾಂಗೀಯ ದ್ವೇಷ ಮತ್ತು ಹಿಂಸೆಯನ್ನು ಹರಡಲು ಪ್ರಯತ್ನಿಸುತ್ತಿದೆ ಎಂಬುದನ್ನು ಅಲ್ಲಗಳೆಯಲಾಗದು.
ಪ್ರಸಿದ್ಧ ‘ಎಕ್ಸ್’ (ಟ್ವಿಟರ್) ಖಾತೆ ‘ದಿ ಸ್ಕಿನ್ ಡಾಕ್ಟರ್’ ಹೇಳಿರುವ ಪ್ರಕಾರ, ಕೆಲವು ‘ಸ್ವದ್ವೇಷಿ’ ಭಾರತೀಯರು ಅಮೆರಿಕಕ್ಕೆ ಭಾರತದ ದೌರ್ಬಲ್ಯಗಳ ಮೇಲೆ ದಾಳಿ ಮಾಡಲು ಮಾರ್ಗದರ್ಶನ ನೀಡುತ್ತಿದ್ದಾರೆ, ಅಥವಾ ‘ಜಾತಿ ಯುದ್ಧಗಳನ್ನು’ ಪ್ರೋತ್ಸಾಹಿಸುವ ಮೂಲಕ ಭಾರತದಲ್ಲಿ ಅಧಿಕಾರ ಪಡೆಯಲು ಪ್ರಯತ್ನಿಸುತ್ತಿರುವವರೊಂದಿಗೆ ಕೈಜೋಡಿಸುತ್ತಿದ್ದಾರೆ, ಅಥವಾ ಎರಡನ್ನೂ ಮಾಡುತ್ತಿದ್ದಾರೆ!
ಸಂಪಾದಕೀಯ ನಿಲುವು
|
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation